ಬ್ರೇಕಿಂಗ್ ನ್ಯೂಸ್
09-01-21 02:19 pm Mangalore Correspondent ಕರಾವಳಿ
ಉಳ್ಳಾಲ, ಜ.9: ತೊಕ್ಕೊಟ್ಟು ಒಳಪೇಟೆಯ ಅಂಗಡಿಯೊಂದರಲ್ಲಿ ಸೀಯಾಳ ಕುಡಿಯುತ್ತಾ ನಿಂತಿದ್ದ ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮತ್ತು ಅವರ ತಂಡ ಇದ್ದ ಜಾಗಕ್ಕೆ ಬಂದ ತಾತಪ್ಪನೊಬ್ಬ ಸಾರ್ವಜನಿಕವಾಗಿ ಎಲ್ರೂ ಮಾಸ್ಕ್ ಹಾಕ್ರಿ ಎಂದು ಬೊಬ್ಬೆ ಹೊಡೆದು ಪೊಲೀಸರನ್ನು ಪರೋಕ್ಷವಾಗಿ ಎಚ್ಚರಿಸಿದ ಘಟನೆ ನಡೆದಿದೆ.
ತಾತಪ್ಪನ ಕಾಳಜಿ ಕಂಡು ಅವ ಅವಾಕ್ಕಾದ ಪೊಲೀಸ್ ಕಮಿಷನರ್ ಕೂಡ ಮಾಸ್ಕನ್ನು ಮುಖಕ್ಕೆ ಏರಿಸಿಕೊಂಡು ತಾತಪ್ಪನನ್ನು ಹತ್ತಿರಕ್ಕೆ ಕರೆದು ಸೀಯಾಳ ಕೊಟ್ಟು ಉಪಚರಿಸಿದ್ದಾರೆ.

ತೊಕ್ಕೊಟ್ಟು ಒಳಪೇಟೆಯ ಮೂರು ಅನಧಿಕೃತ ಬೀಫ್ ಸ್ಟಾಲ್ ಗಳಿಗೆ ನಿನ್ನೆ ರಾತ್ರಿ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು ಘಟನಾ ಸ್ಥಳಕ್ಕೆ ಇಂದು ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಮೀಷನರ್, ಡಿಸಿಪಿ, ಎಸಿಪಿ, ಉಳ್ಳಾಲ ಪಿಐ ಅವರನ್ನು ಒಳಗೊಂಡಿದ್ದ ತಂಡವು ಒಳಪೇಟೆಯ ಅಂಗಡಿಯೊಂದರಲ್ಲಿ ಸೀಯಾಳ ಕುಡಿದು ಮಾಸ್ಕನ್ನು ಕತ್ತಿಗೆ ಜಾರಿಸಿಕೊಂಡು ಮಾತುಕತೆಯಲ್ಲಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯ ಪ್ರಾಯದ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಮಾಸ್ಕ್ ಹಾಕ್ರಿ ಎಂದು ಗಟ್ಟಿಯಾಗಿ ಒಸರಿದ್ದು, ಇದು ಪೊಲೀಸ್ ತಂಡಕ್ಕೂ ಪರೋಕ್ಷವಾಗಿ ಎಚ್ವರಿಸಿದಂತಿತ್ತು. ಕೂಡಲೇ ಕಮೀಷನರ್, ಡಿಸಿಪಿಯವರು ಕತ್ತಲ್ಲಿದ್ದ ಮಾಸ್ಕನ್ನು ಮುಖಕ್ಕೆ ಏರಿಸಿಕೊಂಡಿದ್ದಾರೆ.

ಈ ವೇಳೆ, ಕಮಿಷನರ್ ಅವರ ಸಹಾಯಕರು ತಾತಪ್ಪ ಸೇರಿ ಸಾರ್ವಜನಿಕರನ್ನು ಗದರಿಸಲು ಮುಂದಾಗಿದ್ದಾರೆ. ಕಮಿಷನರ್ ಶಶಿಕುಮಾರ್ ಮಾತ್ರ ಮಾಸ್ಕ್ ಬಗ್ಗೆ ಕಾಳಜಿ ಮೂಡಿಸಿದ ತಾತಪ್ಪನನ್ನು ಆಲಿಂಗಿಸಿ ಸೀಯಾಳ ಕೊಟ್ಟು ಉಪಚರಿಸಿ ಸ್ಥಳದಿಂದ ತೆರಳಿದ್ದಾರೆ.
An Elderly Man in Ullal was found advising Police Commissioner and team to wear mouth mask when they were found without wearing a mask.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm