ಬ್ರೇಕಿಂಗ್ ನ್ಯೂಸ್
08-01-21 10:45 pm Mangaluru Correspondant ಕರಾವಳಿ
ಕೊಣಾಜೆ, ಜ.8: ಯುವ ಕಾಂಗ್ರೆಸ್ ಗಾದಿಯ ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತಿರುವ ಬೆಂಗಳೂರಿನ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ನಲಪ್ಪಾಡ್ ಪರ ಪ್ರಚಾರಕ್ಕೆ ಬಂದ ಬೆಂಗಳೂರಿನ ಬೆಂಬಲಿಗರು ಮಕ್ಕಳನ್ನು ಅಪಹರಿಸಿದ್ದಾರೆಂಬ ವದಂತಿ ಕೇಳಿಬಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗ ನಡೆದಿದೆ.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ಮಹಮ್ಮದ್ ನಲಪ್ಪಾಡ್ ಸ್ಪರ್ಧಿಸುತ್ತಿದ್ದು, ಇದರ ಹಿನ್ನಲೆಯಲ್ಲಿ ಮುಡಿಪು ಭಾಗಕ್ಕೆ ಮಹಮ್ಮದ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಬೆಂಗಳೂರಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಮಹಮ್ಮದ್ ಹ್ಯಾರಿಸ್ ಬೆಂಬಲಿಗರು ದೇರಳಕಟ್ಟೆ ಜಂಕ್ಷನ್ ನಲ್ಲಿ ಹಾಟ್ ಚಿಪ್ಸ್ ಸೆಂಟರಲ್ಲಿ ಉಪಹಾರ ಮುಗಿಸಿ ಹೊರ ಬರುತ್ತಿದ್ದ ವೇಳೆ ಹೊರಗಿದ್ದ ಇಬ್ಬರು ಮಕ್ಕಳಿಗೆ ಚಾಕಲೇಟು ನೀಡಲು ಹೋಗಿದ್ದರು. ಈ ಸಂದರ್ಭದಲ್ಲಿ ಒಂದು ಮಗು ಜೋರಾಗಿ ಕಿರುಚಿದ್ದು ಸ್ಥಳೀಯರು ವಿಚಾರಿಸಲು ಬಂದಾಗ ಬೆಂಗಳೂರಿನ ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಎರಡು ಕಾರಲ್ಲಿ ಬೆಂಗಳೂರಿಗೆ ತಡಬಡಾಯಿಸಿ ಅಲ್ಲಿಂದ ಹೊರಟಿದ್ದರು.
ಇದರಿಂದ ಸಂಶಯಗೊಂಡು ಅವರನ್ನು ಸ್ಥಳೀಯರು ಬೆನ್ನತ್ತಿದ್ದು ನಾಟೆಕಲ್ ನಲ್ಲಿ ಅಡ್ಡ ಹಾಕಿ ಕೊಣಾಜೆ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದ್ದು, ಮಕ್ಕಳ ಅಪಹರಣ ವಿಚಾರ ಸುಳ್ಳಾಗಿದೆ. ಕೇವಲ ವದಂತಿ ಕೇಳಿ ಸ್ಥಳೀಯರು ಉದ್ರಿಕ್ತರಾಗಿದ್ದರು ಅನ್ನೋದು ತಿಳಿದುಬಂದಿದೆ.
ಮಹಮ್ಮದ್ ನಲಪ್ಪಾಡ್ ಬೆಂಬಲಿಗರ ಕಾರಿನ ಹಿಂಭಾಗ ದಲ್ಲಿ ಮಹಮ್ಮದ್ ಅವರ ಭಾವಚಿತ್ರದ ಸ್ಟಿಕ್ಕರ್ ಅಂಟಿಸಿದ್ದರೆನ್ನಲಾಗಿದೆ. ಘಟನೆಯ ಲಾಭವೆತ್ತಲೆಂದೇ ಕೊಣಾಜೆ ಠಾಣೆಯಲ್ಲಿ ಕೆಲ ಕಾಲ ಜನಜಂಗುಳಿ ಜಮಾವಣೆಯಾಗಿದ್ದು ಪೊಲೀಸರು ಜನರನ್ನು ಚದುರಿಸಿದ್ದಾರೆ.
Supporters of Mohammed Haris Nalapad who is contesting elections for the post of Youth Congress state president are facing allegations of kidnapping a child in Konaje, Mangalore.
18-08-25 01:25 pm
Bangalore Correspondent
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am