ಬ್ರೇಕಿಂಗ್ ನ್ಯೂಸ್
26-07-26 09:57 pm HK News Desk ಕರಾವಳಿ
ಮಂಗಳೂರು, ಜುಲೈ 26: ದುಬೈನಿಂದ ಬಂದಿದ್ದ ಯುವಕನೊಬ್ಬ ತನ್ನ ಪರ್ಸ್ ಒಂದನ್ನು ಏರ್ಪೋರ್ಟ್ ಪಾರ್ಕಿಂಗ್ ಏರಿಯಾದಲ್ಲಿ ಬಿಟ್ಟು ಹೋಗಿದ್ದು, ಬಳಿಕ ಅದನ್ನು ಗಮನಿಸಿದ ಸಿಐಎಸ್ಎಫ್ ಸಿಬಂದಿ ಪ್ರಯಾಣಿಕನ ಮಾಹಿತಿ ಕಲೆಹಾಕಿ ಬೆಲೆಬಾಳುವ ಸೊತ್ತುಗಳಿದ್ದ ಪರ್ಸ್ ಅನ್ನು ಹಿಂದಿರುಗಿಸಿದ ಘಟನೆ ನಡೆದಿದೆ.
ಜುಲೈ 26ರ ಭಾನುವಾರ ಬೆಳಗ್ಗೆ 6.15ರ ವೇಳೆಗೆ ಸಿಐಎಸ್ಎಫ್ ಸಿಬಂದಿ ವಿಠಲ್ ಹೊಸಮನಿ ಅವರು ಪಾರ್ಕಿಂಗ್ ಏರಿಯಾದಲ್ಲಿ ಕಪ್ಪು ಬಣ್ಣದ ಪರ್ಸ್ ಒಂದು ಟ್ರಾಲಿಯಲ್ಲಿ ಉಳಿದಿರುವುದನ್ನು ಗಮನಿಸಿದ್ದರು. ಕೆಳ ಅಂತಸ್ತಿನ ಮಹಡಿಯಲ್ಲಿ ಈ ಪರ್ಸ್ ಸಿಕ್ಕಿದ್ದು ಯಾರೋ ಪ್ರಯಾಣಿಕರು ಬಿಟ್ಟು ಹೋಗಿದ್ದಿರಬೇಕೆಂಬ ಅನುಮಾನ ಇತ್ತು.
ಆದರೂ ಶ್ವಾನ ದಳವನ್ನು ಕರೆಸಿ ತಪಾಸಣೆ ನಡೆಸಿದ್ದು ಯಾವುದೇ ಸ್ಫೋಟಕ ವಸ್ತು ಇಲ್ಲವೆಂದು ಖಚಿತ ಪಡಿಸಿದ ಬಳಿಕ ಪರ್ಸ್ ತೆರೆದು ಪರಿಶೀಲನೆ ನಡೆಸಲಾಯಿತು. ಈ ವೇಳೆ, ಅದರೊಳಗೆ ನಿಶಾಲ್ ಶಾಹಿಕ್ ಹೆಸರಿನ ಪಾಸ್ ಪೋರ್ಟ್, ಐಫೋನ್ ಮೊಬೈಲ್, ಒಂದು ಗೋಲ್ಡ್ ರಿಂಗ್, 500 ದಿರ್ಹಮ್ (ಅಂದಾಜು 11 ಸಾವಿರ ರೂ.), 10 ಸಾವಿರ ಡಾಲರ್ (9 ಲಕ್ಷ ರೂ. ಮೌಲ್ಯ), ಒಂದು ಬೋರ್ಡಿಂಗ್ ಪಾಸ್ ಮತ್ತು ಬ್ಯಾಂಕ್ ಸಂಬಂಧಪಟ್ಟ ಕಾರ್ಡುಗಳು ಇದ್ದವು. ಸಿಸಿಟಿವಿ ಪರಿಶೀಲನೆ ವೇಳೆಯಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿರುವುದು ಪತ್ತೆಯಾಗಿತ್ತು. ಅಲ್ಲದೆ, ಆ ವ್ಯಕ್ತಿ ಅದಾಗಲೇ ಏರ್ಪೋರ್ಟ್ ನಿಂದ ಹೊರಕ್ಕೆ ತೆರಳಿರುವುದು ತಿಳಿದುಬಂತು.
ಆನಂತರ, ಬೋರ್ಡಿಂಗ್ ಪಾಸ್ ನಲ್ಲಿದ್ದ ಮೊಬೈಲ್ ನಂಬರ್ ಆಧರಿಸಿ ಕರೆ ಮಾಡಿ ಪ್ರಯಾಣಿಕನಿಗೆ ಪರ್ಸ್ ಬಿಟ್ಟು ಹೋಗಿರುವುದನ್ನು ತಿಳಿಸಲಾಯಿತು. ನಿಶಾಲ್ ಶಾಹಿಕ್ ಎನ್ನುವ ಯುವಕ ದುಬೈನಿಂದ ಮಂಗಳೂರಿಗೆ ಬಂದಿದ್ದು, ತನ್ನ ಬ್ಯಾಗಿನೊಂದಿಗೆ ಟ್ರಾಲಿ ಬಿಟ್ಟು ತೆರಳುವಾಗ ಪರ್ಸ್ ಉಳಿದುಕೊಂಡಿತ್ತು. ಬಳಿಕ ನಿಶಾಲ್ ಮರಳಿ ವಿಮಾನ ನಿಲ್ದಾಣಕ್ಕೆ ಬಂದಿದ್ದು ಸಿಐಎಸ್ಎಫ್ ಸಿಬಂದಿ ನಿಗದಿತ ಪರಿಶೀಲನೆ ಮುಗಿಸಿ ಪರ್ಸ್ ಹಿಂತಿರುಗಿಸಿದರು. ಪ್ರಾಮಾಣಿಕತೆ ತೋರಿದ ಸಿಬಂದಿಯ ಬಗ್ಗೆ ಪ್ರಯಾಣಿಕ ಪ್ರಶಂಸೆ ವ್ಯಕ್ತಪಡಿಸಿದರು.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm