ಬ್ರೇಕಿಂಗ್ ನ್ಯೂಸ್
26-07-26 09:57 pm HK News Desk ಕರಾವಳಿ
ಮಂಗಳೂರು, ಜುಲೈ 26: ದುಬೈನಿಂದ ಬಂದಿದ್ದ ಯುವಕನೊಬ್ಬ ತನ್ನ ಪರ್ಸ್ ಒಂದನ್ನು ಏರ್ಪೋರ್ಟ್ ಪಾರ್ಕಿಂಗ್ ಏರಿಯಾದಲ್ಲಿ ಬಿಟ್ಟು ಹೋಗಿದ್ದು, ಬಳಿಕ ಅದನ್ನು ಗಮನಿಸಿದ ಸಿಐಎಸ್ಎಫ್ ಸಿಬಂದಿ ಪ್ರಯಾಣಿಕನ ಮಾಹಿತಿ ಕಲೆಹಾಕಿ ಬೆಲೆಬಾಳುವ ಸೊತ್ತುಗಳಿದ್ದ ಪರ್ಸ್ ಅನ್ನು ಹಿಂದಿರುಗಿಸಿದ ಘಟನೆ ನಡೆದಿದೆ.
ಜುಲೈ 26ರ ಭಾನುವಾರ ಬೆಳಗ್ಗೆ 6.15ರ ವೇಳೆಗೆ ಸಿಐಎಸ್ಎಫ್ ಸಿಬಂದಿ ವಿಠಲ್ ಹೊಸಮನಿ ಅವರು ಪಾರ್ಕಿಂಗ್ ಏರಿಯಾದಲ್ಲಿ ಕಪ್ಪು ಬಣ್ಣದ ಪರ್ಸ್ ಒಂದು ಟ್ರಾಲಿಯಲ್ಲಿ ಉಳಿದಿರುವುದನ್ನು ಗಮನಿಸಿದ್ದರು. ಕೆಳ ಅಂತಸ್ತಿನ ಮಹಡಿಯಲ್ಲಿ ಈ ಪರ್ಸ್ ಸಿಕ್ಕಿದ್ದು ಯಾರೋ ಪ್ರಯಾಣಿಕರು ಬಿಟ್ಟು ಹೋಗಿದ್ದಿರಬೇಕೆಂಬ ಅನುಮಾನ ಇತ್ತು.
ಆದರೂ ಶ್ವಾನ ದಳವನ್ನು ಕರೆಸಿ ತಪಾಸಣೆ ನಡೆಸಿದ್ದು ಯಾವುದೇ ಸ್ಫೋಟಕ ವಸ್ತು ಇಲ್ಲವೆಂದು ಖಚಿತ ಪಡಿಸಿದ ಬಳಿಕ ಪರ್ಸ್ ತೆರೆದು ಪರಿಶೀಲನೆ ನಡೆಸಲಾಯಿತು. ಈ ವೇಳೆ, ಅದರೊಳಗೆ ನಿಶಾಲ್ ಶಾಹಿಕ್ ಹೆಸರಿನ ಪಾಸ್ ಪೋರ್ಟ್, ಐಫೋನ್ ಮೊಬೈಲ್, ಒಂದು ಗೋಲ್ಡ್ ರಿಂಗ್, 500 ದಿರ್ಹಮ್ (ಅಂದಾಜು 11 ಸಾವಿರ ರೂ.), 10 ಸಾವಿರ ಡಾಲರ್ (9 ಲಕ್ಷ ರೂ. ಮೌಲ್ಯ), ಒಂದು ಬೋರ್ಡಿಂಗ್ ಪಾಸ್ ಮತ್ತು ಬ್ಯಾಂಕ್ ಸಂಬಂಧಪಟ್ಟ ಕಾರ್ಡುಗಳು ಇದ್ದವು. ಸಿಸಿಟಿವಿ ಪರಿಶೀಲನೆ ವೇಳೆಯಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿರುವುದು ಪತ್ತೆಯಾಗಿತ್ತು. ಅಲ್ಲದೆ, ಆ ವ್ಯಕ್ತಿ ಅದಾಗಲೇ ಏರ್ಪೋರ್ಟ್ ನಿಂದ ಹೊರಕ್ಕೆ ತೆರಳಿರುವುದು ತಿಳಿದುಬಂತು.
ಆನಂತರ, ಬೋರ್ಡಿಂಗ್ ಪಾಸ್ ನಲ್ಲಿದ್ದ ಮೊಬೈಲ್ ನಂಬರ್ ಆಧರಿಸಿ ಕರೆ ಮಾಡಿ ಪ್ರಯಾಣಿಕನಿಗೆ ಪರ್ಸ್ ಬಿಟ್ಟು ಹೋಗಿರುವುದನ್ನು ತಿಳಿಸಲಾಯಿತು. ನಿಶಾಲ್ ಶಾಹಿಕ್ ಎನ್ನುವ ಯುವಕ ದುಬೈನಿಂದ ಮಂಗಳೂರಿಗೆ ಬಂದಿದ್ದು, ತನ್ನ ಬ್ಯಾಗಿನೊಂದಿಗೆ ಟ್ರಾಲಿ ಬಿಟ್ಟು ತೆರಳುವಾಗ ಪರ್ಸ್ ಉಳಿದುಕೊಂಡಿತ್ತು. ಬಳಿಕ ನಿಶಾಲ್ ಮರಳಿ ವಿಮಾನ ನಿಲ್ದಾಣಕ್ಕೆ ಬಂದಿದ್ದು ಸಿಐಎಸ್ಎಫ್ ಸಿಬಂದಿ ನಿಗದಿತ ಪರಿಶೀಲನೆ ಮುಗಿಸಿ ಪರ್ಸ್ ಹಿಂತಿರುಗಿಸಿದರು. ಪ್ರಾಮಾಣಿಕತೆ ತೋರಿದ ಸಿಬಂದಿಯ ಬಗ್ಗೆ ಪ್ರಯಾಣಿಕ ಪ್ರಶಂಸೆ ವ್ಯಕ್ತಪಡಿಸಿದರು.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm