ಬ್ರೇಕಿಂಗ್ ನ್ಯೂಸ್
26-06-26 08:33 pm HK News Staffer ಕರಾವಳಿ
ಮಂಗಳೂರು, ಜೂನ್ 26: ರಾಜ್ಯದ ಅತಿ ಹಿರಿಯ ಕನ್ನಡ ವಿಭಾಗವನ್ನು ಹೊಂದಿರುವ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯವು ಕನ್ನಡ ಸ್ನಾತಕೋತ್ತರ (ಎಂ.ಎ) ಪದವಿಗೆ ಹೊಸತನದ ಟಚ್ ನೀಡಿದ್ದು, ವೃತ್ತಿಪರ ಕೋರ್ಸಿನಂತೆ ಬದಲಾವಣೆ ಮಾಡಿಕೊಂಡಿದೆ. ಆಧುನಿಕ ಡಿಜಿಟಲ್ ಲೋಕದ ವಿವಿಧ ತಾಂತ್ರಿಕ ವಿಷಯಗಳನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಿ ಎಂಎ ಪದವಿಯನ್ನು ಇತರೇ ವೃತ್ತಿಪರ ಕೋರ್ಸುಗಳ ರೀತಿ ಮಾರ್ಪಡಿಸಿದೆ.
ಆಮೂಲಕ ಹತ್ತಾರು ವರ್ಷಗಳಿಂದ ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಹಳೆಕಾಲದ ಕನ್ನಡ ಎಂ.ಎ. ಪದವಿಗೆ ಅಲೋಶಿಯಸ್ ಕಾಲೇಜು ಹೊಸ ವಿನ್ಯಾಸವನ್ನು ನೀಡಿದೆ. ಕನ್ನಡ ಸಾಹಿತ್ಯ, ಪರಂಪರೆ, ಛಂದಸ್ಸಿಗೆ ಸೀಮಿತವಾಗಿದ್ದ ಕನ್ನಡ ಎಂಎ ಸ್ನಾತಕೋತ್ತರ ಪದವಿಗೆ ಬೇಡಿಕೆ ಕುಸಿಯುತ್ತಿರುವುದನ್ನು ಮನಗಂಡ ವಿಷಯ ತಜ್ಞರು ಇದೇ ಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಪಠ್ಯಗಳನ್ನು ಮಾರ್ಪಡಿಸಿ ಆಧುನಿಕ ಕಾಲದ ಅಗತ್ಯಗಳನ್ನು ಪೂರೈಸುವಂತೆ ಹೊಸತನಕ್ಕೆ ತೆರೆದುಕೊಂಡಿದ್ದಾರೆ.
ಡಿಜಿಟಲ್ ಸಂವಹನ, ಸಿನಿಮಾ, ಕಿರುತೆರೆ ಸಹಿತ ಮನರಂಜನಾ ಉದ್ಯಮದಲ್ಲಿ ವೃತ್ತಿ ಕಂಡುಕೊಳ್ಳಲು ಸಾಧ್ಯವಾಗುವಂತೆ ಪದವಿ ಪಠ್ಯವನ್ನು ಬದಲಾವಣೆ ಮಾಡಲಾಗಿದೆ. ಇದಲ್ಲದೆ, ಮಾಧ್ಯಮ ಕ್ಷೇತ್ರದ ವಿವಿಧ ರಂಗಗಳಲ್ಲಿ ಬೇಡಿಕೆಯಿರುವ ಸಾಹಿತ್ಯ, ಅನುವಾದಗಳ ಜೊತೆಗೆ ಕೃತಕ ಬುದ್ದಿಮತ್ತೆ(ಎಐ), ಪ್ರಾಂಪ್ಟ್ ಇಂಜಿನಿಯರಿಂಗ್, ಕಂಟೆಂಟ್ ಬರವಣಿಗೆ, ಸ್ಕ್ರಿಪ್ಟ್ ರಚನೆ, ಜಾಹೀರಾತು ಉದ್ಯಮ, ವೇದಿಕೆ ನಿರ್ವಹಣೆ ಮೊದಲಾದ ಕ್ಷೇತ್ರಗಳಲ್ಲಿ ಉದ್ಯೋಗ ಗಳಿಸಿಕೊಳ್ಳಲು ನೆರವಾಗುವಂತೆ ಎಂಎ ಪದವಿಯನ್ನು ಸಿದ್ಧಪಡಿಸಲಾಗಿದೆ.

ಇದಲ್ಲದೆ, ಕೆ.ಎ.ಎಸ್, ಐಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುವಾಗುವಂತೆ ಕನ್ನಡ ಸಾಹಿತ್ಯ, ಸಾಹಿತ್ಯ ಚರಿತ್ರೆ, ವಿಮರ್ಶೆ, ಜಾನಪದ, ಕಾವ್ಯಮೀಮಾಂಸೆ ಮೊದಲಾದ ಸಂಪ್ರಾದಾಯಿಕ ವಿಷಯಗಳನ್ನೂ ಪಠ್ಯದಲ್ಲಿ ಅಳವಡಿಸಲಾಗಿದೆ. ಎಂಎ ಪದವಿಯನ್ನು ಗಳಿಸಿದವರು ಕೇವಲ ಅಧ್ಯಾಪನಕ್ಕೆ ಸೀಮಿತರಾಗದೆ, ಇತರೇ ಆಧುನಿಕ ಕಾಲದ ವೃತ್ತಿಗಳಿಗೂ ತೆರೆದುಕೊಳ್ಳುವಂತೆ ಪಠ್ಯವನ್ನು ರಚಿಸಲಾಗಿದೆ. ಪಠ್ಯಕ್ರಮ ರಚಿಸಲು ಬೆಂಗಳೂರು ಮತ್ತು ಮೈಸೂರಿನ ಕನ್ನಡ ಡಿಜಿಟಲ್ ಸಂವಹನ ವಿಭಾಗದ ಪರಿಣತರು, ಸಿನಿಮಾ ಕ್ಷೇತ್ರದ ತಜ್ಞರು, ಸಾಹಿತ್ಯ ವಿಮರ್ಶಕರನ್ನು ಒಳಗೊಂಡ ಅಧ್ಯಯನ ಮಂಡಳಿ ನೆರವು ಪಡೆಯಲಾಗಿದೆ.
ಇದೇ 2026-27ನೇ ಸಾಲಿನಿಂದಲೇ ಕನ್ನಡ ಎಂ.ಎ. ಪ್ರೊಫೆಶನಲ್ ಕೋರ್ಸು ಆರಂಭವಾಗಲಿದ್ದು, ಇದು ಕನ್ನಡ ನಾಡಿಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ವಿನೂತನ ಕೊಡುಗೆಯೆಂದು ವಿವಿ ಕುಲಪತಿ ರೆ.ಡಾ.ಪ್ರವೀಣ್ ಮಾರ್ಟಿಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
24-08-26 01:13 pm
HK News Staffer
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
24-08-26 01:03 pm
HK News Staffer
ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ; ಹೆತ್ತ ತಂ...
24-08-26 12:06 pm
ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ಗಳನ್ನು ರವಾನ...
24-08-26 11:05 am
ಹೊಳೆನರಸೀಪುರ ; ಟ್ರ್ಯಾಕ್ಟರ್ ಕೀಯನ್ನು ತಿರುಗಿಸಿದ ಮ...
23-08-26 05:20 pm
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm