ಬ್ರೇಕಿಂಗ್ ನ್ಯೂಸ್
06-01-21 08:27 pm Mangaluru Correspondent ಕರಾವಳಿ
ಮಂಗಳೂರು, ಜ.6: ನಗರದ ಪಾಂಡೇಶ್ವರದ ರೈಲ್ವೇ ಗೇಟಿನಲ್ಲಿ ರೈಲು ಬಂದಿರಲಿಲ್ಲ. ಬದಲಿಗೆ, ರೈಲಿನ ಮಾದರಿಯಲ್ಲೇ ಮತ್ತೊಂದು ರಸ್ತೆ ದಾಟುತ್ತಿತ್ತು. ಸ್ಥಳೀಯರು ಇದನ್ನು ಗಮನಿಸಿ, ರಸ್ತೆಯನ್ನು ಒಂದು ಕ್ಷಣ ಬಂದ್ ಮಾಡಿದರು.
ರಾತ್ರಿಯಾಗಿದ್ದರಿಂದ ರೈಲು ಬರದೆ ದಿಢೀರ್ ರಸ್ತೆ ಬಂದ್ ಮಾಡಿದ್ದು ವಾಹನ ಸವಾರರಿಗೆ ಕಿರಿಕಿರಿ ಮಾಡಿತ್ತು. ಸಂಜೆಯ ಧಾವಂತದಲ್ಲಿ ಕೆಲವರು ಹಾರ್ನ್ ಮೊಳಗಿಸಿದರು. ಕೆಲವರು ಏನೆಂದು ಮುಂದೆ ಬಂದು ಅಚ್ಚರಿಯಿಂದ ನೋಡುತ್ತಾ ನಿಂತರು. ನಿಂತವರು ಮಾತ್ರ ಅಚ್ಚರಿಗೊಂಡು ಅಲ್ಲಿಂದ ಕದಲಲಿಲ್ಲ !

ಹೌದು.. ಪಾಂಡೇಶ್ವರದ ರೈಲ್ವೇ ಗೇಟಿನಲ್ಲಿ ಬುಧವಾರ ಸಂಜೆ ಏಳು ಗಂಟೆ ಸುಮಾರಿಗೆ ಹೊಸ ಅತಿಥಿ ಬಂದಿತ್ತು. ನಗರದ ಜನರಿಗೆ ಅಪರೂಪದ ಅತಿಥಿ. ಬೃಹತ್ ಗಾತ್ರದ ಹೆಬ್ಬಾವು ರೈಲ್ವೇ ಗೇಟ್ ಮುಂಭಾಗದಲ್ಲೇ ರಸ್ತೆಯನ್ನು ದಾಟಿತ್ತು. ವಾಹನಗಳ ಭರಾಟೆಯ ಮಧ್ಯೆ ಹೆಬ್ಬಾವು ನಿಶ್ಚಿಂತೆಯಿಂದ ರಸ್ತೆ ದಾಟಿತ್ತು. ಇದನ್ನು ಗಮನಿಸಿದ ಕೆಲವರು ರಸ್ತೆ ತೆರವು ಮಾಡಿಕೊಟ್ಟು ಹಾವು ವಾಹನದ ಅಡಿಗೆ ಬೀಳದಂತೆ ನೋಡಿಕೊಂಡರು.
ಹೆಬ್ಬಾವು ನಿಧಾನಕ್ಕೆ ಗಜಗಾಂಭೀರ್ಯದಲ್ಲಿ ರಸ್ತೆ ದಾಟಿ, ಇನ್ನೊಂದು ಬದಿಗೆ ಸರಿಯಿತು. ಜನ ನೋಡುತ್ತಲೇ ಇದ್ದರು. ಹಿಂದೆ ಇದ್ದ ವಾಹನ ಸವಾರರಿಗೆ ವಿಚಾರ ಗೊತ್ತಾಗುವಾಗ ಹಾವು ಕತ್ತಲಲ್ಲಿ ಮರೆಯಾಗಿತ್ತು.
A Huge python snake was found crossing road near Pandeshwar Railway Track blocking road in Mangalore.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am