ಬ್ರೇಕಿಂಗ್ ನ್ಯೂಸ್
06-01-21 08:27 pm Mangaluru Correspondent ಕರಾವಳಿ
ಮಂಗಳೂರು, ಜ.6: ನಗರದ ಪಾಂಡೇಶ್ವರದ ರೈಲ್ವೇ ಗೇಟಿನಲ್ಲಿ ರೈಲು ಬಂದಿರಲಿಲ್ಲ. ಬದಲಿಗೆ, ರೈಲಿನ ಮಾದರಿಯಲ್ಲೇ ಮತ್ತೊಂದು ರಸ್ತೆ ದಾಟುತ್ತಿತ್ತು. ಸ್ಥಳೀಯರು ಇದನ್ನು ಗಮನಿಸಿ, ರಸ್ತೆಯನ್ನು ಒಂದು ಕ್ಷಣ ಬಂದ್ ಮಾಡಿದರು.
ರಾತ್ರಿಯಾಗಿದ್ದರಿಂದ ರೈಲು ಬರದೆ ದಿಢೀರ್ ರಸ್ತೆ ಬಂದ್ ಮಾಡಿದ್ದು ವಾಹನ ಸವಾರರಿಗೆ ಕಿರಿಕಿರಿ ಮಾಡಿತ್ತು. ಸಂಜೆಯ ಧಾವಂತದಲ್ಲಿ ಕೆಲವರು ಹಾರ್ನ್ ಮೊಳಗಿಸಿದರು. ಕೆಲವರು ಏನೆಂದು ಮುಂದೆ ಬಂದು ಅಚ್ಚರಿಯಿಂದ ನೋಡುತ್ತಾ ನಿಂತರು. ನಿಂತವರು ಮಾತ್ರ ಅಚ್ಚರಿಗೊಂಡು ಅಲ್ಲಿಂದ ಕದಲಲಿಲ್ಲ !

ಹೌದು.. ಪಾಂಡೇಶ್ವರದ ರೈಲ್ವೇ ಗೇಟಿನಲ್ಲಿ ಬುಧವಾರ ಸಂಜೆ ಏಳು ಗಂಟೆ ಸುಮಾರಿಗೆ ಹೊಸ ಅತಿಥಿ ಬಂದಿತ್ತು. ನಗರದ ಜನರಿಗೆ ಅಪರೂಪದ ಅತಿಥಿ. ಬೃಹತ್ ಗಾತ್ರದ ಹೆಬ್ಬಾವು ರೈಲ್ವೇ ಗೇಟ್ ಮುಂಭಾಗದಲ್ಲೇ ರಸ್ತೆಯನ್ನು ದಾಟಿತ್ತು. ವಾಹನಗಳ ಭರಾಟೆಯ ಮಧ್ಯೆ ಹೆಬ್ಬಾವು ನಿಶ್ಚಿಂತೆಯಿಂದ ರಸ್ತೆ ದಾಟಿತ್ತು. ಇದನ್ನು ಗಮನಿಸಿದ ಕೆಲವರು ರಸ್ತೆ ತೆರವು ಮಾಡಿಕೊಟ್ಟು ಹಾವು ವಾಹನದ ಅಡಿಗೆ ಬೀಳದಂತೆ ನೋಡಿಕೊಂಡರು.
ಹೆಬ್ಬಾವು ನಿಧಾನಕ್ಕೆ ಗಜಗಾಂಭೀರ್ಯದಲ್ಲಿ ರಸ್ತೆ ದಾಟಿ, ಇನ್ನೊಂದು ಬದಿಗೆ ಸರಿಯಿತು. ಜನ ನೋಡುತ್ತಲೇ ಇದ್ದರು. ಹಿಂದೆ ಇದ್ದ ವಾಹನ ಸವಾರರಿಗೆ ವಿಚಾರ ಗೊತ್ತಾಗುವಾಗ ಹಾವು ಕತ್ತಲಲ್ಲಿ ಮರೆಯಾಗಿತ್ತು.
A Huge python snake was found crossing road near Pandeshwar Railway Track blocking road in Mangalore.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm