ಬ್ರೇಕಿಂಗ್ ನ್ಯೂಸ್
19-05-26 10:44 am HK News Staffer ಕರಾವಳಿ
ಮಂಗಳೂರು, ಮೇ 19: ಒಂದು ರೂಪಾಯಿಗೆ ಒಂದು ಶರ್ಟ್, 999 ರೂ.ಗೆ ಮೂರು ಬ್ಯಾಗಿ ಪ್ಯಾಂಟ್. ಬಜ್ಪೆ ಪೇಟೆಯಲ್ಲಿ ಬಟ್ಟೆ ಅಂಗಡಿ ಶುಭಾರಂಭಕ್ಕೆ ಹೀಗೊಂದು ಆಫರ್ ನೀಡಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಆಫರ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೊನ್ನೆ ಮೇ 17ರ ಭಾನುವಾರ ಜನರು ಸಾಗರೋಪಾದಿಯಲ್ಲಿ ಮುಗಿಬಿದ್ದು ಜಾಮ್ ಟೈಟ್ ಆಗಿತ್ತು.
ಮಂಗಳೂರು ಹೊರವಲಯದ ಬಜ್ಪೆ ಪೇಟೆಯಲ್ಲಿ ಬಟ್ಟೆ ಅಂಗಡಿಯ ಉದ್ಘಾಟನೆಯನ್ನು ಮೇ 17ರ ಭಾನುವಾರ ಏರ್ಪಡಿಸಲಾಗಿತ್ತು. ಜನರನ್ನು ಆಕರ್ಷಿಸಲು ಎಂಬಂತೆ ಒಂದು ರೂ.ಗೆ ಒಂದು ಆಕರ್ಷಕ ಶರ್ಟ್ ಎನ್ನುವ ಆಫರ್ ಇರೋದಾಗಿ ವಿಡಿಯೋ ಹರಿಯಬಿಡಲಾಗಿತ್ತು. ವಿಡಿಯೋ ಇನ್ ಸ್ಟಾ ಗ್ರಾಮ್ ಪೇಜ್ ಗಳಲ್ಲಿ ವೈರಲ್ ಆಗಿದ್ದು ಯುವ ಜನರು ಭಾರೀ ಸಂಖ್ಯೆಯಲ್ಲಿ ಮುಗಿಬಿದ್ದಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ, ಬಟ್ಟೆ ಅಂಗಡಿಯಲ್ಲಿ ಕಂಟ್ರೋಲ್ ಮಾಡಲಾಗದೆ ಜನರನ್ನು ಒಳಗೆ ಹೊರಗೆ ಕಳಿಸುವುದೇ ಅಸಾಧ್ಯ ಎನ್ನುವಂತಾಗಿತ್ತು.

ವಿಚಿತ್ರ ಅಂದರೆ, ಬಟ್ಟೆ ಅಂಗಡಿ ಉದ್ಘಾಟನೆಗೆಂದು ಬಂದಿದ್ದ ಶಾಸಕ ಉಮಾನಾಥ ಕೋಟ್ಯಾನ್ ಕೂಡ ಇವರ ಎಡೆಯಲ್ಲಿ ಸಿಕ್ಕಿಬೀಳುವಂತಾಗಿತ್ತು. ಜನರ ನಡುವೆ ಸಿಕ್ಕಿಬಿದ್ದು ಶಾಸಕರೇ ಅಪ್ಪಚ್ಚಿಯಾಗಿದ್ದು, ಅಲ್ಲಿಂದ ಹೊರಬರುವುದಕ್ಕೆ ಉಸ್ಸಪ್ಪಾ ಎನ್ನುವಂತಾಗಿತ್ತು. ಉಚಿತ ಕೊಡುತ್ತೇವೆ ಅಂದ್ರೆ ಎಷ್ಟೊಂದು ಜನ ಮುಗಿಬೀಳುತ್ತಾರೆ ಅನ್ನುವುದಕ್ಕೆ ಇಲ್ಲಿ ಸೇರಿದ್ದ ಜನರೇ ಸಾಕ್ಷಿಯಾಗಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಬಂದು ಸೇರಿದ್ದು, ಬ್ಯಾಗಿ ಪ್ಯಾಂಟ್, ಕಂಪನಿ ಶರ್ಟ್ ಗಳನ್ನು ಕೊಳ್ಳಲು ಮುಂದಾಗಿದ್ದರು. ಒಂದೇ ದಿನ ಅಂಗಡಿ ಮಳಿಗೆ ಖಾಲಿಯಾಗುವಷ್ಟರ ಮಟ್ಟಿಗೆ ಜನ ಸೇರಿದ್ದರು. ಆದರೆ ಮೊದಲು ಬಂದ ನೂರು ಜನರಿಗೆ ಮಾತ್ರ ಒಂದು ರೂ. ಶರ್ಟ್ ಆಫರ್ ಇತ್ತು. ಆದರೆ ಅಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೇರಿದ್ದು ತೀವ್ರ ನೂಕುನುಗ್ಗಲು ಉಂಟಾಗಿತ್ತು.
₹1 shirt offer creates chaos in #Bajpe, #Mangaluru! Huge crowd gathers at a clothing store after viral social media promo. Even #MLAUmanathKotian got caught in the rush during the inauguration. Only first 100 customers were eligible for the offer. #Mangaluru #Bajpe pic.twitter.com/Mkx29731db
— Headline Karnataka (@hknewsonline) May 19, 2026
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 08:32 pm
HK News Staffer
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm