ಬ್ರೇಕಿಂಗ್ ನ್ಯೂಸ್
29-08-25 08:13 pm Mangalore Correspondent ಕರಾವಳಿ
ಮಂಗಳೂರು, ಆ.29: ಕೊಂಕಣಿ ಸಾಹಿತ್ಯ, ಕಲಾ ಸಂಘಟಕ, ಮಾಂಡ್ ಸೊಭಾಣ್ ಸಂಸ್ಥೆಯ ಸ್ಥಾಪಕ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಕೊಂಕಣಿ ಭಾಷಾ ಚಳವಳಿಯ ಹರಿಕಾರ, ವಿಶ್ವ ಕೊಂಕಣಿ ಕಲಾರತ್ನ ಎಂಬ ಬಿರುದು ಪಡೆದಿದ್ದ ಎರಿಕ್ ಅಲೆಕ್ಸಾಂಡರ್ ಒಝಾರಿಯೋ(76) ಇನ್ನಿಲ್ಲ.
ಕೆಲವು ವರ್ಷಗಳಿಂದ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಡಯಾಲಿಸಿಸ್ ಚಿಕಿತ್ಸೆ ಮಾಡಲಾಗಿತ್ತು. ಕಳೆದ 18 ದಿನಗಳಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆಗಸ್ಟ್ 29ರಂದು ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಒಜಾರಿಯೋ ಅವರು ಪತ್ನಿ ಜೋಯ್ಸ್, ಮಗಳು ರಶ್ಮಿ ಕಿರಣ್, ಮಗ ರಿತೇಶ್ ಕಿರಣ್ ಅವರನ್ನು ಅಗಲಿದ್ದಾರೆ.

ಮೃತದೇಹವನ್ನು ಆಗಸ್ಟ್ 31ರಂದು ಕಲಾಂಗಣ್ ನಲ್ಲಿ ಅಂತಿಮ ನಮನಕ್ಕೆ ಇರಿಸಲಾಗುವುದು. ವೆಲೆನ್ಸಿಯಾ ಸೈಂಟ್ ವಿನ್ಸೆಂಟ್ ಚರ್ಚ್ ನಲ್ಲಿ ಮಾಸ್ ನಡೆಸಲಿದ್ದು ಅಂದು ಸಂಜೆ ಬೋಳೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಕೊಂಕಣಿ ಸಂಗೀತ ಸಂಯೋಜಕ, ಸಾಂಸ್ಕೃತಿಕ ಕಾರ್ಯಕರ್ತ, ಟ್ರೇಡ್ ಯೂನಿಯನ್ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಎರಿಕ್ ಒಜಾರಿಯೋ ಮಂಗಳೂರಿನಲ್ಲಿ ಕೊಂಕಣಿ ಸಾಂಸ್ಕೃತಿಕ ಚಳವಳಿ ಹುಟ್ಟುಹಾಕಿದ್ದರು. ಕೊಂಕಣಿ ಸಂಸ್ಕೃತಿ, ಸಂಗೀತ ಚಳವಳಿ ಉದ್ದೇಶಕ್ಕಾಗಿ 1986ರಲ್ಲಿ ಮಂಗಳೂರಿನಲ್ಲಿ ಮಾಂಡ್ ಸೋಭಾಣ್ ಎಂಬ ಹೊಸ ಪ್ರತಿಷ್ಠಾನ ಸ್ಥಾಪನೆ ಮಾಡಿದ್ದರು. ಕೊಂಕಣಿ ಪರಂಪರೆಯ ಕೇಂದ್ರವಾದ ಕಲಾಂಗಣ್ ಕೂಡ ಅವರ ಗರಡಿಯಲ್ಲೇ ಸ್ಥಾಪನೆಗೊಂಡಿತ್ತು. ಕರ್ನಾಟಕ ರಾಜ್ಯದಲ್ಲಿ ಶಾಲಾ ಶಿಕ್ಷಣದಲ್ಲಿ ಕೊಂಕಣಿಯನ್ನು ಐಚ್ಛಿಕ ಭಾಷೆಯಾಗಿ ಅಂಗೀಕರಿಸುವಲ್ಲಿ ಒಜಾರಿಯೊ ಪ್ರಮುಖ ಪಾತ್ರ ವಹಿಸಿದರು. ದೇಶ ವಿದೇಶದಲ್ಲಿ 200ಕ್ಕು ಹೆಚ್ಚು ಮಾಂಡ್ ಸೊಭಾಣ್ ಕಾರ್ಯಕ್ರಮ ನೀಡಿದ್ದರು.ಅಲ್ಲದೆ, ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ಕೊಟ್ಟು ಜನರಿಗೆ ಹತ್ತಿರವಾಗಿಸಿದ್ದರು.
2005-08ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗಲೂ ಹಲವಾರು ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಲ್ಲದೆ, ಜಗತ್ತಿನಾದ್ಯಂತ ಇರುವ 145 ಕೊಂಕಣಿ ಸಂಘಟನೆಗಳನ್ನು ಒಂದೇ ವೇದಿಕೆಯಡಿ ತರುವಲ್ಲಿ ಶ್ರಮಿಸಿದ್ದರು. ಗೋವಾದಿಂದ ಮಂಗಳೂರು ವರೆಗಿನ ಕರಾವಳಿಯಲ್ಲಿ ಕುಡುಬಿ, ಸಿದ್ಧಿ, ಖಾರ್ವಿ ಜನಾಂಗ ಮಾತನಾಡುವ ಕೊಂಕಣಿಗರ ಜನಪದ, ಸಾಹಿತ್ಯಗಳನ್ನು ಒಂದೇ ವೇದಿಕೆಗೆ ತಂದು ಅವುಗಳ ಮಧ್ಯ ಸಾಂಸ್ಕೃತಿಕ ಸಂಬಂಧ ಏರ್ಪಡುವಂತೆ ಮಾಡಿದ್ದರು. 1993ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದ ಅವರು, ದೂರದರ್ಶನ ಸೇರಿದಂತೆ ವಿವಿಧ ಕಡೆ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರಿಂದ ದೇಶ- ವಿದೇಶದಲ್ಲಿ ಗೌರವ, ಅಭಿಮಾನಿಗಳನ್ನು ಪಡೆದಿದ್ದರು.
Mangalore Renowned Konkani cultural activist, music composer, and founder of Mandd Sobhann, Eric Alexander Ozario, passed away on Thursday at the age of 76. He was a key force in uniting Konkani-speaking communities across India and abroad through his music and cultural initiatives.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm