Mask Man Dharmasthala, Arrest, SIT: ಧರ್ಮಸ್ಥಳ ಕೇಸ್ ; ದೂರುದಾರ ವ್ಯಕ್ತಿಗೆ ಹತ್ತು ದಿನ ಎಸ್ಐಟಿ ಕಸ್ಟಡಿ, ಹೆಣಗಳನ್ನು ಹೂತಿದ್ದು ಸತ್ಯ ಎಂದೇ ಕೋರ್ಟಿನಲ್ಲಿ ಹೇಳಿಕೆ 

23-08-25 03:04 pm       Mangalore Correspondent   ಕರಾವಳಿ

ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣ ಸಂಬಂಧಿಸಿ ಎಸ್ಐಟಿ ಅಧಿಕಾರಿಗಳು ಬಂಧಿಸಿರುವ ದೂರುದಾರ ವ್ಯಕ್ತಿಯನ್ನು ಬೆಳ್ತಂಗಡಿ ಕೋರ್ಟಿಗೆ ಹಾಜರುಪಡಿಸಿದ್ದು ನ್ಯಾಯಾಧೀಶರು ಪೊಲೀಸರ ಕೋರಿಕೆಯಂತೆ ಹತ್ತು ದಿನ ಕಸ್ಟಡಿಗೆ ನೀಡಿದ್ದಾರೆ. 

ಮಂಗಳೂರು, ಆ.23 : ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣ ಸಂಬಂಧಿಸಿ ಎಸ್ಐಟಿ ಅಧಿಕಾರಿಗಳು ಬಂಧಿಸಿರುವ ದೂರುದಾರ ವ್ಯಕ್ತಿಯನ್ನು ಬೆಳ್ತಂಗಡಿ ಕೋರ್ಟಿಗೆ ಹಾಜರುಪಡಿಸಿದ್ದು ನ್ಯಾಯಾಧೀಶರು ಪೊಲೀಸರ ಕೋರಿಕೆಯಂತೆ ಹತ್ತು ದಿನ ಕಸ್ಟಡಿಗೆ ನೀಡಿದ್ದಾರೆ. 

ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆಯೂ ದೂರುದಾರ ವ್ಯಕ್ತಿ ತಾನು ಹೆಣಗಳನ್ನು ಹೂತಿದ್ದು ನಿಜ ಎಂದು ಹೇಳಿದ್ದಾನೆ. ಆದರೆ ಶವ ಹೂತ ಜಾಗದಲ್ಲಿ ಸಾಕ್ಷ್ಯಗಳು ಸಿಗದ ಬಗ್ಗೆ ಪೊಲೀಸರು ಕೋರ್ಟ್ ಮುಂದೆ ಹೇಳಿದ್ದು, ಹೆಚ್ಚಿನ ತನಿಖೆಗಾಗಿ ಈತನನ್ನು ವಶಕ್ಕೆ ಪಡೆದಿರುವುದಾಗಿ ಮತ್ತು ವಿಚಾರಣೆ ಉದ್ದೇಶಕ್ಕಾಗಿ ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿದ್ದಾರೆ. 

ಸೆ.3ರ ವರೆಗೆ ಕಸ್ಟಡಿಗೆ ನೀಡಿದ್ದು ಅಲ್ಲಿಯ ವರೆಗೂ ದೂರುದಾರನಿಗೆ ಫುಲ್ ಡ್ರಿಲ್ ಮಾಡಲಿದ್ದಾರೆ. ಈ ವ್ಯಕ್ತಿಯನ್ನು ಮಂಡ್ಯ ಜಿಲ್ಲೆಯ ಮೂಲದ ಚಿನ್ನಯ್ಯ ಎಂದು ಗುರುತಿಸಲಾಗಿದೆ. ದೂರುದಾರ ಮಾತ್ರ ತಾನು ಹೆಣ ಹೂತಿದ್ದು ಸತ್ಯ ಎಂದು ಹೇಳುತ್ತಿರುವುದರಿಂದ ಆತನ ಜೊತೆಗಿದ್ದವರನ್ನೂ ಕರೆದು ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ. ಇದೇ ವೇಳೆ, ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ದೂರುದಾರ ವ್ಯಕ್ತಿಯ ಬಂಧನ ಆಗಿರುವುದು ನಿಜ. ತನಿಖೆಯ ಬಗ್ಗೆ ನಾವು ಏನೂ ಹೇಳಲು ಆಗುವುದಿಲ್ಲ. ಎಸ್ಐಟಿ ತಂಡ ತನಿಖೆ ನಡೆಸುತ್ತಿದ್ದು ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಈ ಹೊತ್ತಿನಲ್ಲಿ ಯಾವುದೇ ನಿರ್ಧಾರಕ್ಕೆ ಬರುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

In connection with the alleged Dharmasthala buried bodies case, the Special Investigation Team (SIT) has secured 10 days’ custody of the complainant, who was arrested earlier this week. The accused, identified as Chinnayya from Mandya district, was produced before the Beltangady court on Friday.