ಬ್ರೇಕಿಂಗ್ ನ್ಯೂಸ್
12-08-25 11:06 pm Mangalore Correspondent ಕರಾವಳಿ
ಮಂಗಳೂರು, ಆ.12 : ಧರ್ಮಸ್ಥಳ ಬಳಿ ನೂರಾರು ಹೆಣಗಳನ್ನು ಹೂತ ಆರೋಪದ ಪ್ರಕರಣದಲ್ಲಿ ವಕೀಲರ ಬೇಡಿಕೆಯಂತೆ ಎಸ್ಐಟಿ ಅಧಿಕಾರಿಗಳು ಜಿಪಿಆರ್ ತಂತ್ರಜ್ಞಾನ ಬಳಸಿಯೂ ಶೋಧನೆ ಮಾಡಿದ್ದಾರೆ. ಭಾರೀ ಕುತೂಹಲ ಕೆರಳಿಸಿದ್ದ ನೇತ್ರಾವತಿ ಸ್ನಾನಘಟ್ಟದ ಬಳಿಯಲ್ಲಿ ಗುರುತಿಸಿರುವ 13ನೇ ಪಾಯಿಂಟ್ ನಲ್ಲಿ ಜಿಪಿಆರ್ ತಂತ್ರಜ್ಞಾನ ಬಳಸಿ ಡ್ರೋಣ್ ಮೂಲಕ ಸ್ಕ್ಯಾನ್ ಮಾಡಿದರೂ ಯಾವುದೇ ಸಾಕ್ಷ್ಯ ಲಭಿಸಿಲ್ಲ.
ಸಮಾಧಿಗಳನ್ನು ಅಗೆಯುತ್ತ ಹೋದರೂ, ಶವಗಳ ಸಾಕ್ಷ್ಯ ಸಿಗದೇ ಇದ್ದಾಗ ದೂರುದಾರನ ಪರ ವಕೀಲರು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರನ್ನು ಬಳಸಿ ಶವ ಶೋಧ ನಡೆಸುವಂತೆ ಆಗ್ರಹ ಮಾಡಿದ್ದರು. ಆದರೆ ಆ ಯಂತ್ರವನ್ನು ತರುವುದು ತುಂಬ ವೆಚ್ಚದಾಯಕ ಆಗಿದ್ದರಿಂದ ಅದನ್ನು ತರುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಕೊನೆಗೆ, ರಾಜ್ಯದ ಡಿಜಿಪಿಯವರೇ ಜಿಪಿಆರ್ ಯಂತ್ರದ ಶೋಧ ಕಾರ್ಯಕ್ಕೆ ಒಪ್ಪಿಗೆ ನೀಡಿದ್ದರು. ಅದರಂತೆ, ಅತಿ ಹೆಚ್ಚು ಶವಗಳನ್ನು ಹೂತಿದ್ದೇನೆಂದು ಹೇಳಿದ್ದ 13ನೇ ಪಾಯಿಂಟ್ ನಲ್ಲಿಯೇ ಜಿಪಿಆರ್ ಶೋಧನೆಗೆ ಎಸ್ಐಟಿ ಮುಂದಾಗಿತ್ತು. ಇದಲ್ಲದೆ, ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿಯವರೇ ಖುದ್ದಾಗಿ ಬಂದು ಜಿಪಿಆರ್ ಶೋಧ ಕಾರ್ಯಕ್ಕೆ ನೇತೃತ್ವ ನೀಡಿದ್ದರು.



ಮಂಗಳವಾರ ಬೆಳಗ್ಗಿನಿಂದ ಮಧ್ಯಾಹ್ನ ವರೆಗೂ ಜಿಪಿಆರ್ ಯಂತ್ರವನ್ನು ಡ್ರೋಣ್ ಮೂಲಕ ಇಡೀ ಪ್ರದೇಶವನ್ನು ಸ್ಕ್ಯಾನ್ ಮಾಡಲಾಯಿತು. ಆನಂತರ, ಅದರಲ್ಲಿ ದೊರೆತ ಸಿಗ್ನಲನ್ನು ಕಂಪ್ಯೂಟರ್ ಪರದೆಗೆ ಹಾಕಿ ನೋಡಲಾಯಿತು. ಆದರೆ ಅದರಲ್ಲಿ ಯಾವುದೇ ಅಸ್ಪಷ್ಟ ಪದರಗಳು ಅಥವಾ ಅಸ್ಥಿಪಂಜರ ಇರುವಂಥದ್ದು ಪತ್ತೆಯಾಗಲಿಲ್ಲ. ಹಾಗಿದ್ದರೂ, ಜಿಪಿಆರ್ ನಲ್ಲಿ ಏನೂ ಸಿಗಲಿಲ್ಲ ಎಂದು ಎಸ್ಐಟಿ ಅಲ್ಲಿಗೇ ಕಾರ್ಯಾಚರಣೆ ಮುಗಿಸಲಿಲ್ಲ. ದೂರುದಾರ 13ನೇ ಪಾಯಿಂಟ್ ನಲ್ಲಿ ಶವ ಹೂತಿದ್ದೇನೆಂದು ಅಂದಾಜಿನಲ್ಲಿ ಗುರುತಿಸಿದ್ದ ಸ್ಥಳವನ್ನು ಜೆಸಿಬಿ ಬಳಸಿ ಅಗೆದು ನೋಡಲಾಯಿತು. ಸಂಜೆಯ ವೇಳೆಗೆ ಸುಮಾರು 18 ಅಡಿಯ ವರೆಗೂ ಸುಮಾರು 20 ಅಡಿಯ ಉದ್ದಗಲಕ್ಕೆ ಗುಂಡಿ ತೋಡಿದ್ದು, ಶವದ ಎಲುಬು ಇನ್ನಿತರ ಯಾವುದೇ ವಸ್ತುಗಳು ಸಿಗಲಿಲ್ಲ.
ಮಾಹಿತಿ ಪ್ರಕಾರ, ಈ ಜಾಗದಲ್ಲಿ ದೂರುದಾರ ತೋರಿಸುವ ಎಲ್ಲ ಗುರುತುಗಳಲ್ಲಿಯೂ ಎಸ್ಐಟಿ ತಂಡ ಬುಧವಾರವೂ ಗುಂಡಿ ತೋಡಿ ಶೋಧಿಸುವ ಸಾಧ್ಯತೆಯಿದೆ. ಶವ ಹೂತಿದ್ದಾನೆಂಬ ಆರೋಪದ ಪ್ರಕರಣ ಇಡೀ ದೇಶಾದ್ಯಂತ ಭಾರೀ ಸಂಚಲನ ಎಬ್ಬಿಸಿರುವುದರಿಂದ ದೂರುದಾರನ ಹೇಳಿಕೆಯನ್ನು ಪರಿಗಣಿಸಬೇಕಾಗುತ್ತದೆ. ಆತ ಸೂಚಿಸಿದ ಸ್ಥಳಗಳಲ್ಲಿ ಶೋಧನೆಯನ್ನೂ ಮಾಡಬೇಕಾಗುತ್ತದೆ. ಇದೇ ಪ್ರಕಾರ, ಎಸ್ಐಟಿ ತಂಡ ಈವರೆಗೂ ಶೋಧ ಕಾರ್ಯ ನಡೆಸಿದ್ದು, 13ನೇ ಪಾಯಿಂಟ್ ಅಗೆದ ಬಳಿಕ ರಾಜ್ಯ ಸರಕಾರಕ್ಕೆ ಮಧ್ಯಂತರ ವರದಿಯನ್ನೂ ಸಲ್ಲಿಸುವ ಸಾಧ್ಯತೆಯಿದೆ.
ವಿಶೇಷ ಅಂದ್ರೆ, ಮಂಗಳವಾರ ಅಗೆಯುವ ಸಂದರ್ಭದಲ್ಲಿ ಪೊಲೀಸರು ಕೂಡ ಹೆಚ್ಚು ಕಟ್ಟುನಿಟ್ಟು ಮಾಡಲಿಲ್ಲ. ಅಡ್ಡಲಾಗಿ ಪರದೆಯನ್ನೂ ಕಟ್ಟಿರಲಿಲ್ಲ. ಮಾಧ್ಯಮ ತಂಡಗಳು ತುಸು ದೂರದಲ್ಲಿ ನಿಂತು ಅಗೆಯುವ ಕಾರ್ಯವನ್ನು ನೇರ ಪ್ರಸಾರದಲ್ಲಿ ತೋರಿಸಿದವು. ಈ ಹಿಂದೆ ಎಲ್ಲ ಕಡೆಯೂ ಅಡ್ಡ ಪರದೆಗಳನ್ನು ಕಟ್ಟಿ ಶೋಧ ಕಾರ್ಯ ತೋರಿಸದಂತೆ ತಡೆಯಲಾಗಿತ್ತು. ಜನರನ್ನೂ ಹತ್ತಿರಕ್ಕೆ ಬರುವುದಕ್ಕೆ ಬಿಡುತ್ತಿರಲಿಲ್ಲ. ಈಗ ಸ್ಥಳದಲ್ಲಿ ಸೇರುತ್ತಿರುವ ಜನರ ಸಂಖ್ಯೆಯೂ ಕಡಿಮೆಯಾಗಿದೆ. ಜಾಲತಾಣದಲ್ಲಿ ಮಾತ್ರ ಪರ- ವಿರೋಧ ಎನ್ನುವಂತೆ ಟೀಕೆ, ಟಿಪ್ಪಣಿ ಕೇಳಿಬರುತ್ತಿದೆ.
In the sensational Dharmasthala mass grave allegation case, the Special Investigation Team (SIT) has deployed Ground Penetrating Radar (GPR) technology to search for human remains, but no skeletal evidence has been found so far.
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
25-05-26 08:18 pm
HK News Staffer
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
25-05-26 11:00 pm
Mangalore Correspondent
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am