ಬ್ರೇಕಿಂಗ್ ನ್ಯೂಸ್
10-08-25 04:32 pm Udupi Correspondent ಕರಾವಳಿ
ಉಡುಪಿ, ಆ.10 : ಸಾವಿರಾರು ಕೋಟಿಯ ಕಂಪನಿ ಕಟ್ಟಲು ಕಾರಣವಾಗಿದ್ದ ಇನ್ಫೋಸಿಸ್ ಸುಧಾಮೂರ್ತಿ ಯಾವುದೇ ಹಮ್ಮು ಬಿಮ್ಮಿಲ್ಲದೆ ಶ್ರೀಕೃಷ್ಣ ಮಠದಲ್ಲಿ ನೆಲದಲ್ಲಿ ಕುಳಿತು ಹೊಸ್ತಿಲು ಬರೆದಿದ್ದಲ್ಲದೆ, ದೇವರ ಪಾತ್ರೆ ತೊಳೆದು ದೇವರ ನಾಮ ಹಾಡುತ್ತಾ ಹೂಗಳನ್ನು ಕಟ್ಟಿ ಕಾಲ ಕರೆದಿದ್ದಾರೆ. ಈ ವೇಳೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಯಾದರು.
ಮಠದ ಗೋ ಶಾಲೆಯಲ್ಲಿ ಗೋಪೂಜೆ ನೆರವೇರಿಸಿ, ಗೋವುಗಳಿಗೆ ಗೋಗ್ರಾಸ ನೀಡಿದರು. ಭೋಜನ ಶಾಲೆಯಲ್ಲಿ ದೇವರ ಪಾತ್ರೆಗಳನ್ನು ತೊಳೆವಾಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಜೊತೆಗಿದ್ದು ಉಡುಪಿ ಮಣಿಪಾಲದ ತನ್ನ ನೆನಪಿನ ನಂಟನ್ನು ಹೇಳಿಕೊಂಡರು. ಆಟಿ ಹುಣ್ಣಿಮೆ ಅಂಗವಾಗಿ ಶ್ರೀಕೃಷ್ಣ ಮಠದ ಹೊಸ್ತಿಲು ಬರೆದ ಸುಧಾಮೂರ್ತಿ ಚಂದ್ರಶಾಲೆಯಲ್ಲಿ ಕುಳಿತು ದಾರವನ್ನು ಸುತ್ತುತ್ತ ಕನಕಾಂಬರ ಹೂವುಗಳನ್ನು ಪೋಣಿಸಿ ದ್ವಾದಶ ಸ್ತೋತ್ರ ಹಾಡಿದರು.






ಕೃಷ್ಣ ಮಠದ ಹೊಸ್ತಿಲು ಬರೆಯಲು ಇವರಿಬ್ಬರೂ ದಿಲ್ಲಿಯಿಂದ ಬಂದಿದ್ದರು. ಕೃಷ್ಣನ ಮಹಾದ್ವಾರ, ಸಿಂಹಾಸನ ಬಾಗಿಲಲ್ಲಿ ಹೊಸ್ತಿಲು ಬರೆದು ಲಕ್ಷ್ಮೀ ಪೂಜೆಯನ್ನೂ ನೆರವೇರಿಸಿದರು. ಇಬ್ಬರೂ ಜಗದ ಪರಿವೆ ಇಲ್ಲದೆ ಕೃಷ್ಣನ ಸ್ತೋತ್ರಗಳನ್ನು ಹಾಡುತ್ತ ಕಾಲ ಕಳೆದರು.
ಶ್ರೀಮಠದ ವತಿಯಿಂದ ಇಬ್ಬರಿಗೂ ಮುತ್ತೈದೆಯರ ಮೂಲಕ ಬಾಗಿನ ನೀಡಲಾಯಿತು. ಸರ್ವಜ್ಞ ಪೀಠದಲ್ಲಿ ಕುಳಿತಿದ್ದ ಶ್ರೀಗಳು ಇಬ್ಬರಿಗೂ ವಿಶೇಷ ಪ್ರಸಾದ ನೀಡಿದರು. ಸಚಿವೆ ನಿರ್ಮಲಾ ಅವರು ತನ್ನ ಮನೆಯಿಂದ ತಂದಿದ್ದ ನಾಲ್ಕು ಮುಷ್ಟಿ ಅವಲಕ್ಕಿಯನ್ನು ಶ್ರೀಗಳಿಗೆ ಅರ್ಪಿಸಿದರು. ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುತ್ತಿನ ಸರಗಳ ವಿಶೇಷ ಅಲಂಕಾರದಲ್ಲಿದ್ದ ಶ್ರೀಕೃಷ್ಣನನ್ನು ಕಣ್ತುಂಬಿಕೊಂಡರು. ತಲೆಗೆ ಮಲ್ಲಿಗೆ ಮುಡಿದಿದ್ದ ಸುಧಾಮೂರ್ತಿ ಶ್ರೀಕೃಷ್ಣನನ್ನು ನವಗ್ರಹ ಕಿಂಡಿಯಲ್ಲಿ ಕಂಡರು.
ಹಣ, ಚಿನ್ನ ಬದುಕಿಗೆ ಸಾಧನವೇ ಹೊರತು ಜೀವನವಲ್ಲ. ಹಣ, ಚಿನ್ನದ ಅಕ್ಕಿ ಇದೆಯೆಂದು ಅದನ್ನು ತಿನ್ನಲಾಗದು. ಹಣಕ್ಕಿಂತ ಬದುಕಿಗೆ ಅಧ್ಯಾತ್ಮದ ಅಗತ್ಯ ಬಹಳಷ್ಟಿದೆ. ಎಷ್ಟು ಹಣ ಕೊಟ್ಟರೂ ಖರೀದಿಸಲಾಗದ ಸಂಪತ್ತು ಆಧ್ಯಾತ್ಮ ಮಾತ್ರ ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಹೇಳಿದರು.
ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ವತಿಯಿಂದ ಶ್ರೀಕೃಷ್ಣ ಮಠದ ಯಾಳಿ (ಸುತ್ತು ಪೌಳಿ) ಹಾಗೂ ಗೀತಾಮಂದಿರದಲ್ಲಿ ಶ್ರೀಪುತ್ತಿಗೆ ವಿಶ್ವ ವಿದ್ಯಾಪೀಠದ ಉದ್ಘಾಟನೆ ಬಳಿಕ ಸುಧಾಮೂರ್ತಿ ರಾಜಾಂಗಣದಲ್ಲಿ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಶನಿವಾರ ಮಾತನಾಡಿದರು.
Infosys Foundation Chairperson and Rajya Sabha member Sudha Murty, known for her simplicity despite her role in building a billion-dollar company, spent her day at Udupi Sri Krishna Matha engaging in humble service. She was seen sitting on the floor writing hostilu (ritual door decorations), washing temple utensils, singing devotional hymns, and stringing flowers. Joining her in this act of devotion was Union Finance Minister Nirmala Sitharaman.
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
25-05-26 08:18 pm
HK News Staffer
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
25-05-26 11:00 pm
Mangalore Correspondent
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am