ಬ್ರೇಕಿಂಗ್ ನ್ಯೂಸ್
08-08-25 09:25 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.8 : ತೀವ್ರ ಕುತೂಹಲ ಮೂಡಿಸಿದ್ದ ಧರ್ಮಸ್ಥಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಳಿಯ ಕಲ್ಲೇರಿ ಕಾಡಿನಲ್ಲಿ ಹೂತಿಟ್ಟಿದ್ದಾನೆ ಎನ್ನಲಾಗಿದ್ದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ಮಾಡಿದ್ದಾರೆ. 15ನೇ ನಂಬರ್ ಎಂದು ಗುರುತು ಹಾಕಿ, ದೂರುದಾರ ಹೇಳಿದ ರೀತಿಯಲ್ಲೇ ಆಸುಪಾಸಿನ ನಾಲ್ಕು ಕಡೆ ಅಗೆದರೂ ಅಸ್ಥಿಪಂಜರದ ಯಾವುದೇ ಕುರುಹು ಸಿಕ್ಕಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಾಲಾ ಸಮವಸ್ತ್ರದಲ್ಲಿಯೇ 15 ವರ್ಷದ ಬಾಲಕಿಯನ್ನು ಕಲ್ಲೇರಿ ಎಂಬಲ್ಲಿ ಹೂತಿದ್ದೆ ಎಂದು ದೂರುದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದು ಒಟ್ಟು ಪ್ರಕರಣ ತೀವ್ರ ಸಂಚಲನ ಎಬ್ಬಿಸಲು ಕಾರಣವಾಗಿತ್ತು. ಧರ್ಮಸ್ಥಳ ಸ್ನಾನಘಟ್ಟದ ಬಳಿಯ 14 ಗುರುತು ಬಳಿಕ ಶುಕ್ರವಾರ ಮಧ್ಯಾಹ್ನ ನೇರವಾಗಿ ದೂರುದಾರ ಕಲ್ಲೇರಿ- ಬೋಳಿಯಾರಿನ ದಟ್ಟ ಅರಣ್ಯಕ್ಕೆ ಕರೆದೊಯ್ದಿದ್ದ. ಇದರಂತೆ ಕಾರ್ಮಿಕರು ಮತ್ತು ಸಣ್ಣ ಹಿಟಾಚಿಯ ಜೊತೆಗೇ ಅಧಿಕಾರಿಗಳು ಕಾಡಿಗೆ ತೆರಳಿದ್ದು ದೂರುದಾರ ಹೇಳಿದಂತೆ ಗುರುತು ಹಾಕಿದ್ದಾರೆ. ಆನಂತರ, ಅಲ್ಲಿನ ರಹಸ್ಯ ಭೇದಿಸುವ ಸಲುವಾಗಿ ಅಗೆತ ಮಾಡಿದ್ದಾರೆ.
15ನೇ ಮಾರ್ಕ್ ಹಾಕಿ, ಶೋಧ ಕಾರ್ಯ ನಡೆಸಿದ್ದಾರೆ. ಆನಂತರ, ಯಾವುದೇ ಅಸ್ಥಿಪಂಜರದ ಕುರುಹು ಸಿಗದೇ ಇದ್ದುದರಿಂದ ಅಲ್ಲಿಯೇ ಅಕ್ಕ ಪಕ್ಕದಲ್ಲಿ ನಾಲ್ಕು ಕಡೆ ತೋರಿಸಿದಂತೆ ಅಲ್ಲಿಯೂ ಅಗೆತ ಮಾಡಿದ್ದಾರೆ. ಮೊದಲು ಗುರುತು ಹಾಕಿದ್ದು 15 ಮತ್ತು ಆನಂತರದ್ದು 15 ಎ ಎಂದು ಗುರುತು ಹಾಕಿ ಅಗೆಯಲಾಗಿದೆ. ಮತ್ತೆರಡು ಪಾಯಿಂಟ್ ಗಳಿಗೆ ನಂಬರ್ ನಮೂದಿಸಿಲ್ಲ. ಆದರೂ ಅಲ್ಲಿ ಅಗೆದು ನೋಡಿದರೂ ಯಾವುದೇ ಅಸ್ಥಿಪಂಜರದ ಕುರುಹು ಸಿಕ್ಕಿಲ್ಲ ಎನ್ನುವ ಮಾಹಿತಿ ಎಸ್ಐಟಿ ಮೂಲಗಳಿಂದ ತಿಳಿದುಬಂದಿದೆ. 2010ರಲ್ಲಿ ಕಲ್ಲೇರಿ ಎಂಬಲ್ಲಿ 15 ವರ್ಷದ ಶಾಲಾ ಬಾಲಕಿಯನ್ನು ಮೇಲ್ವಿಚಾರಕರ ಸೂಚನೆಯಂತೆ ಹೂತು ಹಾಕಿದ್ದೆ ಎಂದು ದೂರುದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಐಟಿ ಅಧಿಕಾರಿಗಳು ಆ ಜಾಗಕ್ಕೆ ನೇರವಾಗಿ ಕರೆದೊಯ್ದು ಸ್ಥಳ ಶೋಧ ನಡೆಸಿದ್ದಾರೆ.
ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಹೋಗುವ ಹೆದ್ದಾರಿಯಲ್ಲಿ ಎರಡು ಕಿಮೀ ಸಾಗಿದಾಗ ಕಲ್ಲೇರಿ- ಬೋಳಿಯಾರ್ ಸಿಗುತ್ತದೆ. ಹೆದ್ದಾರಿಯಿಂದ ಒಳಭಾಗದ ಕಾಡಿಗೆ ದೂರುದಾರ ಪೊಲೀಸರನ್ನು ಕರೆದೊಯ್ದಿದ್ದ. ಇದೇ ಸ್ಥಳದಲ್ಲಿ ಹೂತಿದ್ದೇನೆ ಎಂದು ಹೇಳಿ ಅಗೆತ ಮಾಡಿದರೂ ಅಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಅಲ್ಲಿನ ಶೋಧ ಕಾರ್ಯದ ಬಳಿಕ ಎಸ್ಐಟಿ ತಂಡ ಸಂಜೆ 6 ಗಂಟೆ ವೇಳೆಗೆ ಅಲ್ಲಿಂದ ಮರಳಿತ್ತು.
In a development that had stirred intense curiosity, the Special Investigation Team (SIT) on Thursday conducted a search in the dense Kalleri forest near the Dharmasthala–Subrahmanya state highway, at a spot where a complainant had claimed to have buried a 15-year-old schoolgirl in uniform.
08-08-25 06:23 pm
HK News Desk
Bigg Boss Rajath, Death Threats, Soujanya: ಯೂ...
08-08-25 11:20 am
ಸರ್ಕಾರಿ ಕೆಲಸ ಕೊಡಿಸೋದಾಗಿ 25 ಲಕ್ಷ ಪಡೆದು ವಂಚನೆ ;...
07-08-25 10:18 pm
ಧರ್ಮಸ್ಥಳ ಘರ್ಷಣೆ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ, ಎ...
07-08-25 05:50 pm
Dharmasthala burial case, Gag Order: ಮಾಧ್ಯಮ ನ...
06-08-25 10:51 pm
07-08-25 10:02 pm
HK News Desk
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
08-08-25 11:10 pm
Mangalore Correspondent
SIT, Kalleri, Buried Schoolgirl, Dharmasthala...
08-08-25 09:25 pm
ಧರ್ಮಸ್ಥಳ ಸುದ್ದಿ ಪ್ರಸಾರ ನಿರ್ಬಂಧಕ್ಕೆ ಸುಪ್ರೀಂ ನಿ...
08-08-25 08:26 pm
Bjp, Mangalore: ಎಡಪಂಥೀಯರು ಧರ್ಮಸ್ಥಳ ಕ್ಷೇತ್ರಕ್ಕ...
08-08-25 08:05 pm
Mangalore Safest City; ಕಡಿಮೆ ಕ್ರೈಮ್ ರೇಟ್, ಮಹಿ...
08-08-25 05:54 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm