ಬ್ರೇಕಿಂಗ್ ನ್ಯೂಸ್
04-08-25 09:51 pm Mangalore Correspondent ಕರಾವಳಿ
ಮಂಗಳೂರು, ಆ.4 : ವಿದ್ಯುತ್ ಸರಬರಾಜು ನಿಗಮದ ನೌಕರರಿಗೆ ಮತ್ತು ಅವರ ಆಶ್ರಿತರಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡಲು ಕಾಂಗ್ರೆಸ್ ಸರಕಾರ ಗ್ರಾಹಕರಿಂದಲೇ ಹಣ ವಸೂಲಿ ಮಾಡುತ್ತಿದೆಯೆಂಬ ಆರೋಪ ಮತ್ತು ಬಿಜೆಪಿ ಪ್ರತಿಭಟನೆ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮತ್ತು ಮಾಜಿ ಶಾಸಕ ಜೆ.ಆರ್ ಲೋಬೊ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಸರಕಾರ ಇದ್ದಾಗಲೇ ಕಾನೂನಿಗೆ ತಿದ್ದುಪಡಿ ಮಾಡಿ ನೌಕರರ ಪಿಂಚಣಿಗೆ ಗ್ರಾಹಕರಿಂದಲೇ ಹಣ ಸಂಗ್ರಹಿಸಲು ಕಾನೂನು ತಂದಿತ್ತು. ಅದರ ಪ್ರಕಾರ, ಈಗ ಕಾಂಗ್ರೆಸ್ ಸರಕಾರ ನಡೆದುಕೊಳ್ಳುತ್ತಿದೆ ವಿನಾ ಹೊಸ ನೀತಿಯಲ್ಲ. ಬಿಜೆಪಿ ಸತ್ಯವನ್ನು ಸುಳ್ಳೆಂದು, ಸುಳ್ಳನ್ನು ಸತ್ಯವೆಂದು ತೋರಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಕುಲಶೇಖರದ ಮೆಸ್ಕಾಂ ಕಚೇರಿ ಎದುರಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಇಂದು ಬೆಳಗ್ಗೆ ಪ್ರತಿಭಟನೆ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಲೋಬೊ ಸುದ್ದಿಗೋಷ್ಟಿ ನಡೆಸಿದ್ದು, 2021ರಲ್ಲಿ ಬಿಜೆಪಿ ಸರಕಾರ ಇದ್ದಾಗಲೇ ಕಾನೂನಿಗೆ ತಿದ್ದುಪಡಿ ಮಾಡಿತ್ತು. ಅದಕ್ಕೂ ಹಿಂದೆ ಪಿಂಚಣಿ ಮೊತ್ತವನ್ನು ಸರಕಾರವೇ ಭರಿಸುತ್ತಿತ್ತು. ಆಗಿಂದಾಗ್ಗೆ ಅನುದಾನ ಕೊಡುವ ಪರಿಪಾಠ ಇತ್ತು. 202ರ ವರೆಗೆ 12,700 ಕೋಟಿ ಮೊತ್ತವನ್ನು ಈ ಉದ್ದೇಶಕ್ಕಾಗಿ ನೀಡಲಾಗಿತ್ತು. ಆದರೆ 2022ರ ಮಾರ್ಚ್ 9ರಂದು ಗ್ರಾಹಕರಿಂದಲೇ ಈ ಮೊತ್ತವನ್ನು ಸಂಗ್ರಹಿಸಲು ಹೊಸ ಕಾನೂನು ತಂದು 2022ರ ಡಿಸೆಂಬರ್ ನಲ್ಲಿ ಅದನ್ನು ಜಾರಿಗೊಳಿಸಿತ್ತು. ಎಫ್ ಕೆಸಿಸಿಐ ವತಿಯಿಂದ ಇದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರೂ, ಸರಕಾರ ಕೈಗೊಂಡ ನಿಯಮವೆಂದು 2024ರ ಮಾರ್ಚ್ 25ರಂದು ನ್ಯಾಯಾಧೀಶರು ವಿಚಾರಣೆ ಪೂರ್ತಿಗೊಳಿಸಿ ಅರ್ಜಿಯನ್ನು ವಜಾಗೊಳಿಸಿ ಕಾನೂನು ಜಾರಿಗೆ ಅವಕಾಶ ಕೊಟ್ಟಿದ್ದರು.
ಇದರಂತೆ, ಕಾನೂನು ಜಾರಿಯಾಗಿದ್ದರೂ, ಬಿಜೆಪಿ ಶಾಸಕರು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ತಂದ ಕಾನೂನು ಪ್ರಕಾರ 2026, 27 ಮತ್ತು 28ರ ಸಾಲಿನಲ್ಲಿ ನೌಕರರಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡಲು ವರ್ಷಕ್ಕೆ ತಲಾ 766 ಕೋಟಿ ಅಗತ್ಯವಿದೆಯೆಂದು ಮನಗಂಡು ಕಾಂಗ್ರೆಸ್ ಸರಕಾರ ಗ್ರಾಹಕರಿಗೆ ತಲಾ 36 ಪೈಸೆಯಂತೆ ವಸೂಲಿ ಮಾಡಲು ಆದೇಶ ಮಾಡಿದೆ. ವೇದವ್ಯಾಸ ಕಾಮತ್ ಅಧಿವೇಶನದಲ್ಲಿ ಇದ್ದಾಗಲೇ ಈ ಕಾನೂನು ಜಾರಿಗೆ ತಂದಿದ್ದರೂ ಈಗ ಏನೂ ತಿಳಿಯದಂತೆ ವರ್ತಿಸುತ್ತಿದ್ದಾರೆ. ಮೆಸ್ಕಾಂನಲ್ಲಿ 39 ಸಾವಿರ ನೌಕರರಿದ್ದು, ಅವರ ಶ್ರೇಯೋಭಿವೃದ್ದಿಗಾಗಿ ಕೈಗೊಂಡಿದ್ದ ಕಾನೂನು ಇದಾಗಿದ್ದರೂ ಬಿಜೆಪಿ ಮೊಸಳೆ ಕಣ್ಣೀರಿನ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪದ್ಮರಾಜ್ ಪೂಜಾರಿ, ಶಶಿಧರ ಹೆಗ್ಡೆ, ಟಿಕೆ ಸುಧೀರ್, ವಿಕಾಸ್ ಶೆಟ್ಟಿ ಮತ್ತಿತರರಿದ್ದರು.
Amid rising political heat over the collection of pension and gratuity funds for electricity corporation employees from consumers, the Congress has issued a clarification, asserting that it is simply implementing a law passed by the previous BJP government.
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
24-10-25 05:43 pm
HK News Desk
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
24-10-25 07:57 pm
Mangalore Correspondent
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
24-10-25 08:20 pm
Mangalore Correspondent
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am