ಬ್ರೇಕಿಂಗ್ ನ್ಯೂಸ್
25-07-25 08:25 pm Mangalore Correspondent ಕರಾವಳಿ
ಮಂಗಳೂರು, ಜುಲೈ 25 : ಧರ್ಮಸ್ಥಳ ಹೆಣ ಹೂತ ಪ್ರಕರಣದ ಬಗ್ಗೆ ತನಿಖೆಗೆ ನೇಮಕಗೊಂಡ ವಿಶೇಷ ತನಿಖಾ ತಂಡದ ಡಿಐಜಿ ಎಂ.ಎನ್ ಅನುಚೇತ್ ಮತ್ತು ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಮಂಗಳೂರಿಗೆ ಆಗಮಿಸಿದ್ದು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ.
ಮಂಗಳೂರಿನ ಎಸ್ಪಿ ಕಚೇರಿ ಬಳಿಯಿರುವ ಐಜಿಪಿ ಕಚೇರಿಯಲ್ಲಿ ಅನುಚೇತ್, ಜಿತೇಂದ್ರ ದಯಾಮ ಮತ್ತು ದ.ಕ. ಎಸ್ಪಿ ಡಾ.ಅರುಣ್ ಅವರು ಐಜಿಪಿ ಜೊತೆಗೆ ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಸಂಜೆ ಐದು ಗಂಟೆ ವೇಳೆಗೆ ಮಂಗಳೂರಿಗೆ ಆಗಮಿಸಿದ ಅನುಚೇತ್ ನೇರವಾಗಿ ಕದ್ರಿ ಮಲ್ಲಿಕಟ್ಟೆಯ ಸರ್ಕಾರಿ ಅತಿಥಿ ಬಂಗಲೆಯಲ್ಲಿ ಎಸ್ಐಟಿ ತಂಡದ ಇತರ ಕೆಲವು ಸದಸ್ಯರನ್ನು ಭೇಟಿಯಾಗಿ ಅಲ್ಲಿಂದ ಐಜಿ ಕಚೇರಿಗೆ ತೆರಳಿದ್ದಾರೆ.







ಐಜಿ ಕಚೇರಿಯಲ್ಲಿ ಧರ್ಮಸ್ಥಳ ಪ್ರಕರಣದ ಬಗ್ಗೆ ನಾಲ್ವರು ಐಪಿಎಸ್ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಸಭೆಯ ಬಳಿಕ ಹೊರಬಂದ ಅನುಚೇತ್ ಅವರನ್ನು ಧರ್ಮಸ್ಥಳಕ್ಕೆ ಯಾವಾಗ ಎಂದು ಪತ್ರಕರ್ತರು ಕೇಳಿದಾಗ, ನೋ ಕಮೆಂಟ್ಸ್ ಎನ್ನುತ್ತ ಕಾರು ಹತ್ತಿಕೊಂಡು ತೆರಳಿದರು. ಅದೇ ಕಾರಿನಲ್ಲಿ ಎಸ್ಪಿ ಜಿತೇಂದ್ರ ದಯಾಮ ಕೂಡ ತೆರಳಿದ್ದಾರೆ.
ಇದೇ ವೇಳೆ, ಬೆಳ್ತಂಗಡಿ ಪೊಲೀಸ್ ಠಾಣೆ ಪಕ್ಕದಲ್ಲಿ ಎಸ್ಐಟಿ ತಂಡಕ್ಕೆ ಪ್ರತ್ಯೇಕ ಕಚೇರಿ ತೆರೆಯಲಾಗಿದ್ದು ಕಂಪ್ಯೂಟರ್, ಪ್ರಿಂಟರ್ ಹಾಕಲಾಗಿದೆ. ಅಲ್ಲದೆ, ಎಸ್ಐಟಿ ತಂಡದ ಸಹಾಯವಾಣಿ ಸಂಖ್ಯೆಯನ್ನೂ ಆರಂಭಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಇನ್ನೆರಡು ದಿನದಲ್ಲಿ ತಂಡಕ್ಕೆ ನೇಮಕಗೊಂಡಿರುವ ಎಲ್ಲ ಇನ್ಸ್ ಪೆಕ್ಟರ್, ಎಸ್ಐಗಳು ಕೂಡ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬಂದು ರಿಪೋರ್ಟ್ ಮಾಡಲಿದ್ದಾರೆ.
ಧರ್ಮಸ್ಥಳ ಪ್ರಕರಣ ಭಾರೀ ಸಂಚಲನ ಎಬ್ಬಿಸಿರುವುದರಿಂದ ಸೀಮಿತ ಅವಧಿಯಲ್ಲಿ ತನಿಖೆ ಮಾಡಿ ಮುಗಿಸಲು ಪೊಲೀಸ್ ತಂಡ ಮುಂದಾಗಿರುವಂತಿದೆ. ಇಲಾಖಾ ಮಟ್ಟದಲ್ಲಿ ಅಧಿಕಾರಿಗಳಿಗೆ ಆರ್ಡರ್ ತಲುಪಿದ ಬೆನ್ನಲ್ಲೇ ತಮ್ಮ ಕೆಲಸ ಆರಂಭಿಸಲಿದ್ದಾರೆ. ಸದ್ಯಕ್ಕೆ ಇಬ್ಬರು ಎಸ್ಪಿಗಳನ್ನು ತಂಡದಲ್ಲಿ ಸೇರಿಸಲಾಗಿದ್ದು ಅವರೇ ತನಿಖೆಯ ನೇತೃತ್ವ ವಹಿಸಲಿದ್ದಾರೆ. ಅಲ್ಲದೆ, ತಂಡದ ಮುಖ್ಯಸ್ಥ ಪ್ರಣವ್ ಮೊಹಂತಿ ಕೂಡ ಇನ್ನೆರಡು ದಿನದಲ್ಲಿ ಬೆಳ್ತಂಗಡಿಗೆ ಆಗಮಿಸುವ ಸಾಧ್ಯತೆ ಇದೆ.
ಎಸ್ಐಟಿ ರಚನೆಯ ಆದೇಶದಲ್ಲಿ ತನಿಖಾ ಪ್ರಗತಿಯ ಬಗ್ಗೆ ಐಜಿಪಿ ಮತ್ತು ಡಿಜಿಪಿಗೆ ವರದಿ ನೀಡುವಂತೆ ಸೂಚಿಸಲಾಗಿತ್ತು. ಇದರಂತೆ, ಅನುಚೇತ್ ಮತ್ತು ತಂಡ ಮೊದಲಿಗೆ ಐಜಿಪಿ ಭೇಟಿ ಮಾಡಿರುವ ಸಾಧ್ಯತೆಯಿದೆ.
The investigation into the sensational Dharmasthala mass burial case has gained momentum with senior police officers holding an emergency meeting in Mangaluru on Thursday. DIG M.N. Anucheth and SP Jitendra Kumar Dayama, key members of the Special Investigation Team (SIT), arrived in the city and met with Western Range IGP Amit Singh to discuss the case.
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
25-10-25 02:28 pm
HK News Desk
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
25-10-25 02:36 pm
Mangalore Correspondent
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
25-10-25 02:14 pm
Mangaluru Correspondent
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm