Mangalore Hotel Kodakkene Owner Suicide: ಹೊಟೇಲ್ ಉದ್ಯಮಿ ವಿಷ ಸೇವಿಸಿ ಆತ್ಮಹತ್ಯೆ ; ಆರ್ಥಿಕ ಸಂಕಷ್ಟದಿಂದ ಸಾವಿಗೆ ಶರಣು 

22-07-25 01:27 pm       Mangalore Correspondent   ಕರಾವಳಿ

ನಗರದ ಕದ್ರಿ ಕಂಬ್ಲ ಬಳಿಯಲ್ಲಿ ಕೊಡಕ್ಕೆನ ಹೆಸರಿನ ಹೊಟೇಲ್ ನಡೆಸುತ್ತಿದ್ದ ನಿತಿನ್ ಪೂಜಾರಿ (41) ಹಣಕಾಸು ಮುಗ್ಗಟ್ಟಿನಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. 

ಮಂಗಳೂರು, ಜುಲೈ 22 : ನಗರದ ಕದ್ರಿ ಕಂಬ್ಲ ಬಳಿಯಲ್ಲಿ ಕೊಡಕ್ಕೆನ ಹೆಸರಿನ ಹೊಟೇಲ್ ನಡೆಸುತ್ತಿದ್ದ ನಿತಿನ್ ಪೂಜಾರಿ (41) ಹಣಕಾಸು ಮುಗ್ಗಟ್ಟಿನಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. 

ಬಿಜೆಪಿ ನಾಯಕರು, ಶಾಸಕರ ಜೊತೆಗೆ ಒಡನಾಟದಲ್ಲಿದ್ದ ನಿತಿನ್ ಎಂಟು ತಿಂಗಳ ಹಿಂದೆ ಸ್ವಂತ ಉದ್ಯಮ ಸ್ಥಾಪನೆಯ ಉದ್ದೇಶದಿಂದ ಕದ್ರಿಯಲ್ಲಿ ಕೊಡಕ್ಕೆನ ಹೆಸರಿನ ಹೊಟೇಲ್ ಸ್ಥಾಪನೆ ಮಾಡಿದ್ದರು. ಅದಕ್ಕೂ ಹಿಂದೆ ಮುಡಿಪಿನಲ್ಲಿ ಪಾಲುದಾರಿಕೆಯಲ್ಲಿ ಹೊಟೇಲ್ ನಡೆಸುತ್ತಿದ್ದರು. ನಾನ್ ವೆಜ್ ಊಟಕ್ಕಾಗಿ ಕದ್ರಿಯ ಹೊಟೇಲ್ ಅಲ್ಪ ಸಮಯದಲ್ಲಿ ಒಳ್ಳೆಯ ಹೆಸರು ಪಡೆದಿತ್ತು. 

ಇತ್ತೀಚೆಗೆ ಹೊಟೇಲ್ ಮತ್ತು ಹೈಫೈ ಲೈಫ್ ನಿಂದಾಗಿ ಆರ್ಥಿಕ ಸಂಕಷ್ಟ ಉಂಟಾಗಿತ್ತು ಎಂದು ಅವರ ಆಪ್ತರು ಹೇಳುತ್ತಾರೆ. ನಿನ್ನೆ ರಾತ್ರಿ ಮಣ್ಣಗುಡ್ಡದ ಗುಂಡೂರಾವ್ ಲೇನಲ್ಲಿರುವ ಫ್ಲಾಟ್ ನಲ್ಲಿ ವಿಷ ಸೇವಿಸಿದ್ದು ತಡರಾತ್ರಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಸುಕಿನಲ್ಲಿ ಮೃತಪಟ್ಟಿದ್ದಾರೆ. ಓರಗೆಯ ಗೆಳೆಯರು ನಿತಿನ್ ಫೋಟೊವನ್ನು ಸ್ಟೇಟಸ್ ಹಾಕಿ ಕಂಬನಿ ಗರೆದಿದ್ದಾರೆ. ನಿತಿನ್ ಅವಿವಾಹಿತರಾಗಿದ್ದು ಗೆಳೆಯರ ಒಡನಾಟ ಹೆಚ್ಚಿತ್ತು. ಮೂಲತಃ ಮರೋಳಿಯವರಾಗಿದ್ದು ಇತ್ತೀಚೆಗಷ್ಟೇ ಮಣ್ಣಗುಡ್ಡದಲ್ಲಿ ಫ್ಲಾಟ್ ಖರೀದಿಸಿ ತಾಯಿ ಜೊತೆಗೆ ನೆಲೆಸಿದ್ದರು.

In a tragic incident, Nithin Poojary (41), the owner of Hotel Kodakkene located near Kadri Kambla in Mangaluru, reportedly died by suicide after consuming poison, allegedly due to financial distress.