ಬ್ರೇಕಿಂಗ್ ನ್ಯೂಸ್
18-07-25 02:36 pm Mangalore Correspondent ಕರಾವಳಿ
ಉಳ್ಳಾಲ, ಜು.18 : ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುವಾರ ರಾತ್ರಿ ತೊಕ್ಕೊಟ್ಟು ಒಳಪೇಟೆಯ ಗತಕಾಲ ವೈಭವದ ಶತಮಾನ ಕಂಡ ಹಳೆಯ ಖಾಸಗಿ ವಾಣಿಜ್ಯ& ವಸತಿ ಸಂಕೀರ್ಣದ ಹಂಚಿನ ಮೇಲ್ಛಾವಣಿ ಧರೆಗುರುಳಿ ಬಿದ್ದಿದೆ. ಮಧ್ಯರಾತ್ರಿ ಘಟನೆ ನಡೆದ ಪರಿಣಾಮ ಸಂಭವನೀಯ ಭಾರೀ ಅನಾಹುತ ತಪ್ಪಿದೆ.
ಮಧ್ಯರಾತ್ರಿ ಎರಡೂವರೆ ಗಂಟೆ ವೇಳೆಗೆ ಕಟ್ಟಡದ ಹಂಚಿನ ಛಾವಣಿ ಧರೆಗುರುಳಿ ಬಿದ್ದಿದೆ. ನೂರು ವರುಷದ ಹಿಂದಿನ ಹಳೆಯ ಶಿಥಿಲ ಕಟ್ಟಡದಲ್ಲಿ ಸ್ಥಳೀಯ ಸಂಘಟನೆಯೊಂದರ ಕಚೇರಿ ಸೇರಿದಂತೆ ಎರಡು ಬೀಡಿ ಬ್ರಾಂಚ್ ಗಳು ಕಾರ್ಯಾಚರಿಸುತ್ತಿತ್ತು. ಕಟ್ಟಡದ ಹಿಂಬದಿ ಭಾಗದಲ್ಲಿ ಎರಡು ಬಾಡಿಗೆ ಮನೆಗಳಿದ್ದು ಮನೆಮಂದಿಗೆ ಘಟನೆಯಿಂದ ಯಾವುದೇ ಹಾನಿಯಾಗಿಲ್ಲ.





ಕಟ್ಟಡದ ಹಂಚಿನ ಮೇಲ್ಚಾವಣಿಯು ತೊಕ್ಕೊಟ್ಟು ಚರ್ಚ್ ಸಂಪರ್ಕದ ಮುಖ್ಯ ರಸ್ತೆಗೆ ಕುಸಿದು ದೊಪ್ಪನೆ ಬಿದ್ದಿರುವ ದೃಶ್ಯ ಸಿಸಿಟಿವಿ ಫೂಟೇಜಲ್ಲಿ ದಾಖಲಾಗಿದೆ. ಹಗಲಿನ ವೇಳೆ ಈ ಕಟ್ಟಡದ ಮುಂಭಾಗದ ರಸ್ತೆಯಿಂದ ಶಾಲಾ ಮಕ್ಕಳು, ಜನಸಾಮಾನ್ಯರು ಸೇರಿದಂತೆ ವಾಹನಗಳು ಹಾದು ಹೋಗುತ್ತಿರುತ್ತವೆ. ಈ ವೇಳೆ ಘಟನೆ ನಡೆದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ.
ಉದ್ದವಾದ ಹಳೆಯ ಕಟ್ಟಡದ ಅಳಿದುಳಿದ ಒಂದು ಭಾಗದಲ್ಲಿ ಫ್ಯಾನ್ಸಿ ಸೆಂಟರೊಂದು ವ್ಯವಹಾರ ನಡೆಸುತ್ತಿದ್ದು, ಮತ್ತೊಂದು ಭಾಗದಲ್ಲಿ ಸ್ಥಳೀಯ ಮತ್ತೊಂದು ಸಂಘಟನೆಯ ಕಚೇರಿ ಕಾರ್ಯಚರಿಸುತ್ತಿದೆ. ದಶಕಗಳ ಹಿಂದೆ ಈ ಕಟ್ಟಡದಲ್ಲಿ ತೊಕ್ಕೊಟ್ಟಿನ ಏಕೈಕ ಶೇಂದಿ ಅಂಗಡಿ ವಹಿವಾಟು ನಡೆಸುತ್ತಿದ್ದು, ಶೇಂದಿ ಪ್ರಿಯರ ನೆಚ್ಚಿನ ಕೇಂದ್ರ ಇದಾಗಿತ್ತು. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಸ್ತೆಗೆ ಬಿದ್ದಿದ್ದ ಮೇಲ್ಚಾವಣಿಯ ಅವಶೇಷಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
Continuous heavy rains over the past two days led to the partial collapse of the roof of a century-old private commercial-cum-residential building in the heart of Tokkottu’s inner market area late Thursday night. Fortunately, the incident occurred around 2:30 AM, preventing what could have been a major tragedy.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm