ಬ್ರೇಕಿಂಗ್ ನ್ಯೂಸ್
15-07-25 10:40 pm Mangalore Correspondent ಕರಾವಳಿ
ಮಂಗಳೂರು, ಜುಲೈ 15 : ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಅನನ್ಯಾ ಭಟ್ ಎಂಬ ಹುಡುಗಿ 2003ರಲ್ಲಿ ತನ್ನ ಗೆಳತಿಯರ ಜೊತೆಗೆ ಧರ್ಮಸ್ಥಳಕ್ಕೆ ಹೋಗಿದ್ದವಳು ನಿಗೂಢ ನಾಪತ್ತೆಯಾದ ಬಗ್ಗೆ ಆಕೆಯ ತಾಯಿ ಎರಡು ದಶಕದ ಬಳಿಕ ದಕ್ಷಿಣ ಕನ್ನಡ ಎಸ್ಪಿ ಅರುಣ್ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ದೂರು ನೀಡಿರುವುದನ್ನು ಎಸ್ಪಿ ಡಾ.ಅರುಣ್ ದೃಢಪಡಿಸಿದ್ದು, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ತನ್ನ ಮಗಳು ಕಾಣೆಯಾದ ಬಗ್ಗೆ ತಾಯಿ ಮಾಧ್ಯಮವೊಂದಕ್ಕೆ ಮಾತನಾಡಿರುವುದು ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಮಗಳು ಅನನ್ಯಾ ಭಟ್ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದಳು. 2003ರಲ್ಲಿ ಒಂದು ದಿನ ತನ್ನ ಧರ್ಮಸ್ಥಳದ ಗೆಳತಿಯರೊಂದಿಗೆ ಅಲ್ಲಿಗೆ ತೆರಳಿದ್ದಳು. ಸಂಜೆಯ ಹೊತ್ತಿಗೆ ಇತರ ಇಬ್ಬರು ನಾವು ಮನೆಯಿಂದ ಬಟ್ಟೆ ತಗೊಂಡು ಬರ್ತೀವಿ ಎಂದು ಹೇಳಿ ಇವಳನ್ನು ದೇವಸ್ಥಾನ ಬಳಿ ನಿಲ್ಲಿಸಿ ತೆರಳಿದ್ದರು. ಆದರೆ ಹಿಂತಿರುಗಿ ಬರುವಾಗ ಇವಳು ಇರಲಿಲ್ಲ. ಕೂಡಲೇ ಗೆಳತಿ ನನಗೆ ಕರೆ ಮಾಡಿ, ನಾಪತ್ತೆ ವಿಚಾರವನ್ನು ತಿಳಿಸಿದ್ದಳು.


ನಾನು ಆಬಳಿಕ ಧರ್ಮಸ್ಥಳ ಠಾಣೆಗೂ ತೆರಳಿದ್ದೆ, ಆದರೆ ದೂರು ಸ್ವೀಕರಿಸಿರಲಿಲ್ಲ. ದೇವಸ್ಥಾನ ಬಳಿ ಹೋದಾಗ ಅಲ್ಲಿದ್ದವರು ಬೈದು ಬೆದರಿಸಿ ಕಳಿಸಿದ್ದರು. ಆನಂತರ ಒಮ್ಮೆ ಹೋಗಿದ್ದಾಗ ನಾಲ್ಕು ಜನ ಸೇರಿ ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದರು. ಈ ಬಗ್ಗೆ ಇನ್ನೆಂದೂ ಬಾಯಿ ತೆಗೆಯಬಾರದು ಎಂದಿದ್ದರು. ಆನಂತರ ಒಮ್ಮೆ ತೀವ್ರ ರೀತಿ ಹೊಡೆದು ಹಾಕಿದ್ದರಿಂದ ಕೋಮಾಕ್ಕೆ ಹೋಗಿದ್ದೆ. ಆಬಳಿಕ ಕೋಮಾದಿಂದ ಸಮಸ್ಥಿತಿಗೆ ಬಂದರೂ ಮಗಳ ಆಸೆಯನ್ನು ಕೈಬಿಟ್ಟಿದ್ದೆ. ಕೊಲ್ಕತ್ತಾದಲ್ಲಿ ಸಿಬಿಐ ಕಚೇರಿಯಲ್ಲಿ ಆಗ ಸ್ಟೆನೋ ಗ್ರಾಫರ್ ಆಗಿದ್ದೆ. 9 ವರ್ಷ ಕೆಲಸ ಮಾಡಿ ವಿಆರ್ ಎಸ್ ಕೊಟ್ಟು ಬಂದಿದ್ದೆ. ಮಗಳೇ ಇಲ್ಲ. ಯಾರಿಗಾಗಿ ಬದುಕೋದು ಅಂತಾಗಿತ್ತು.
ಆದರೆ ನನ್ನ ಮಗಳು ಎಲ್ಲಿದ್ದಾಳೆಂದು ಸುಳಿವು ಸಿಗೋದು ಕಷ್ಟ. ಸೌಜನ್ಯಾ ಮತ್ತು ಆನೆ ಮಾವುತನ ಸಾವು ಪ್ರಕರಣ ಜೀವಂತವಾಗಿದೆ. ಅದರಲ್ಲಾದರೂ ನ್ಯಾಯ ಸಿಕ್ಕರೆ ಈ ರೀತಿ ದುರಂತ ಸಾವನ್ನಪ್ಪಿದ ಎಲ್ಲರಿಗೂ ಶಾಂತಿ ಸಿಕ್ಕೀತು ಎಂದು ವೃದ್ಧ ತಾಯಿ ಕಣ್ಣೀರು ಹಾಕಿದ್ದಾರೆ.
In a heartbreaking turn of events, a mother has approached the Superintendent of Police in Dakshina Kannada, seeking justice for her daughter who mysteriously went missing over two decades ago. Ananya Bhat, a medical student in Manipal at the time, disappeared during a visit to Dharmasthala in 2003. Her mother has now officially filed a complaint with SP Dr. Arun, who has confirmed that an FIR has been registered at the Dharmasthala Police Station and an investigation will follow.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
31-01-26 04:56 pm
HK News Desk
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
31-01-26 03:38 pm
Mangalore Correspondent
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm