ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ ವಿವಾಹಿತ ; ಚಿಕಿತ್ಸೆ ಫಲಕಾರಿಯಾಗದೆ ಮಂಜನಾಡಿ ಗ್ರಾಮದ ಯುವ ಟೈಲರ್ ಸಾವು 

09-07-25 10:25 pm       Mangalore Correspondent   ಕರಾವಳಿ

ತಾನು ಕೆಲಸ ನಿರ್ವಹಿಸುತ್ತಿದ್ದ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ಮಂಜನಾಡಿ ಗ್ರಾಮದ ನವ ವಿವಾಹಿತನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಉಳ್ಳಾಲ, ಜು.9 : ತಾನು ಕೆಲಸ ನಿರ್ವಹಿಸುತ್ತಿದ್ದ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ಮಂಜನಾಡಿ ಗ್ರಾಮದ ನವ ವಿವಾಹಿತನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಉಳ್ಳಾಲ ತಾಲೂಕಿನ ಮಂಜನಾಡಿ ಪೆರಡೆಯ ದಿ.ವೆಂಕಪ್ಪ  ಹಾಗೂ ಪಾರ್ವತಿ ದಂಪತಿಯ ಪುತ್ರ ಭರತ್ (32)ಸಾವನ್ನಪ್ಪಿದ ಯುವಕ. ಮಂಗಳೂರು ನಗರದ ಫಾರಮ್‌ ಮಾಲ್ ನಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದ ಭರತ್ ನಾಲ್ಕು ದಿನದ ಹಿಂದೆ ಅರಗಿಸಿಕೊಳ್ಳಲಾರದ ಆಘಾತಕಾರಿ ಸುದ್ದಿಯೊಂದನ್ನ ಕೇಳಿ ತನ್ನ ಟೈಲರ್ ಶಾಪಲ್ಲೇ ಕುಸಿದು ಬಿದ್ದಿದ್ದರೆಂದು ಹೇಳಲಾಗಿದೆ. ತಕ್ಷಣ ಭರತ್ ಅವರನ್ನ ಮಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಸಾವನ್ನಪ್ಪಿದ್ದಾರೆ.

ಕಳೆದ ಏಪ್ರಿಲ್ ತಿಂಗಳ 22ರಂದು ಭರತ್ ಅವರ ವಿವಾಹ ನಡೆದಿದ್ದು ಪತ್ನಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ. ಭರತ್ ಅವರು ತಾಯಿ, ಪತ್ನಿ ಹಾಗೂ ಮೂವರು ಸಹೋದರಿಯರನ್ನ ಅಗಲಿದ್ದಾರೆ.

In a tragic incident, a newly married tailor from Manjanady village in Ullal taluk passed away today after collapsing at his workplace a few days ago. Despite receiving medical treatment, he could not be revived.