Lokayukta Raids Mangalore City Corporation, MCC: ಮಂಗಳೂರು ಪಾಲಿಕೆಗೆ ಮತ್ತೆ ಲೋಕಾಯುಕ್ತ ದಾಳಿ ; ನಿವೃತ್ತಿ ಅಂಚಿನಲ್ಲಿರುವ ಜಂಟಿ ಆಯುಕ್ತರ ತೀವ್ರ ತಪಾಸಣೆ 

25-06-25 10:46 pm       Mangalore Correspondent   ಕರಾವಳಿ

ಮಂಗಳೂರು ಮಹಾನಗರ ಪಾಲಿಕೆಗೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮತ್ತೆ ದಾಳಿ ನಡೆಸಿದ್ದು ಅಧಿಕಾರಿಯೊಬ್ಬರನ್ನು ಗುರಿಯಾಗಿಸಿ ಕಚೇರಿ ಜಾಲಾಡಿದ್ದಾರೆ.‌ 

ಮಂಗಳೂರು, ಜೂನ್ 25 : ಮಂಗಳೂರು ಮಹಾನಗರ ಪಾಲಿಕೆಗೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮತ್ತೆ ದಾಳಿ ನಡೆಸಿದ್ದು ಅಧಿಕಾರಿಯೊಬ್ಬರನ್ನು ಗುರಿಯಾಗಿಸಿ ಕಚೇರಿ ಜಾಲಾಡಿದ್ದಾರೆ.‌ 

ಪಾಲಿಕೆಯ ಜಂಟಿ ಆಯುಕ್ತ ರವಿ ಕುಮಾ‌ರ್ ಎಂ. ಅವರ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಧ್ಯಾಹ್ನದಿಂದ ರಾತ್ರಿಯವರೆಗೂ ಕಡತಗಳ ಪರಿಶೀಲನೆ ನಡೆಸಿದ್ದಾರೆ. ರವಿ ಕುಮಾರ್ ಇದೇ ಜೂ.30ರಂದು ನಿವೃತ್ತರಾಗಲಿದ್ದು ಅವರ ವಿರುದ್ಧ ಅಧಿಕಾರ ದುರುಪಯೋಗ ಹಾಗೂ ಅವ್ಯವಹಾರದ ಆರೋಪದ ದೂರುಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆದಿದೆ.

ಜೂ. 21 ಮತ್ತು 23ರಂದು ಲೋಕಾಯುಕ್ತ ಅಧಿಕಾರಿಗಳು ಪಾಲಿಕೆಯ ಕಂದಾಯ, ಆರೋಗ್ಯ, ಎಂಜಿನಿಯರಿಂಗ್, ಲೆಕ್ಕಪತ್ರ, ನಗರ ಯೋಜನಾ ವಿಭಾಗ ಮತ್ತು ಆಯುಕ್ತರ ಕಚೇರಿಯಲ್ಲಿ ಕಡತ ಪರಿಶೀಲನೆ ನಡೆಸಿದ್ದರು. ಆಗ ಹಲವಾರು ನ್ಯೂನತೆಗಳು ಕಂಡುಬಂದಿದ್ದವು. ಬೋಕರ್ ಒಬ್ಬರ ಬಳಿ 5 ಲಕ್ಷ ರೂ. ನಗದು ಹಣ ಪತ್ತೆಯಾಗಿತ್ತು. ಈ ಕುರಿತು ಪಾಲಿಕೆಯಲ್ಲಿ ಆಗುತ್ತಿರುವ ಅಕ್ರಮದ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದರು.‌

In a fresh development, officials from the Lokayukta carried out another round of raids at the Mangaluru City Corporation (MCC) on Wednesday, this time targeting a senior official nearing retirement. The operation focused on Joint Commissioner Ravi Kumar M., whose office was searched thoroughly from afternoon until late evening.