Sakleshpur, Mangalore Bangalore Train; ಸಕಲೇಶಪುರ ಬಳಿ ರೈಲು ಹಳಿಗೆ ಬಿದ್ದ ಬಂಡೆ ಕಲ್ಲು ; ಮಂಗಳೂರು- ಬೆಂಗಳೂರು ರೈಲು ಸಂಚಾರ ಸ್ಥಗಿತ, ಘಾಟಿಯಲ್ಲೇ ರಾತ್ರಿ ಕಳೆದ ಪ್ರಯಾಣಿಕರು ! 

21-06-25 12:03 pm       HK News Desk   ಕರಾವಳಿ

ಸಕಲೇಶಪುರ ತಾಲೂಕಿನ ಎಡಕುಮೇರಿ ಬಳಿ ರೈಲ್ವೇ ಹಳಿಗೆ ಬೃಹತ್ ಬಂಡೆ ಕಲ್ಲುಗಳು ಕುಸಿದು ಬಿದ್ದಿದ್ದು ಮಂಗಳೂರು - ಬೆಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.‌ ಬಂಡೆ ಉರುಳಿ ಬಿದ್ದಿರುವುದರಿಂದ ರೈಲ್ವೇ ಹಳಿ ಡ್ಯಾಮೇಜ್ ಆಗಿದ್ದು ಬೆಂಗಳೂರಿನಿಂದ ಬಂದಿದ್ದ ರೈಲುಗಳು ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ನಿಂತಿವೆ. 

ಹಾಸನ, ಜೂನ್ 21: ಸಕಲೇಶಪುರ ತಾಲೂಕಿನ ಎಡಕುಮೇರಿ ಬಳಿ ರೈಲ್ವೇ ಹಳಿಗೆ ಬೃಹತ್ ಬಂಡೆ ಕಲ್ಲುಗಳು ಕುಸಿದು ಬಿದ್ದಿದ್ದು ಮಂಗಳೂರು - ಬೆಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.‌ ಬಂಡೆ ಉರುಳಿ ಬಿದ್ದಿರುವುದರಿಂದ ರೈಲ್ವೇ ಹಳಿ ಡ್ಯಾಮೇಜ್ ಆಗಿದ್ದು ಬೆಂಗಳೂರಿನಿಂದ ಬಂದಿದ್ದ ರೈಲುಗಳು ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ನಿಂತಿವೆ. 

ಹಾಸನ ಜಿಲ್ಲೆಯ ಮಲೆನಾಡು ಮತ್ತು ಪಶ್ಚಿಮಘಟ್ಟ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ನಿನ್ನೆ ರಾತ್ರಿ ರೈಲು ಹಳಿಗೆ ಕಲ್ಲು ಬಂಡೆ ಕುಸಿದು ಬಿದ್ದಿದೆ. ಇದರಿಂದಾಗಿ ರಾತ್ರಿಯಿಂದಲೂ ಪ್ರಯಾಣಿಕರು ರೈಲಿನಲ್ಲಿ ಕುಳಿತಿದ್ದು ಹೈರಾಣಾಗಿದ್ದಾರೆ. ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಬೆಳಗ್ಗೆ ಕಾಫಿ, ತಿಂಡಿ ವ್ಯವಸ್ಥೆ ಮಾಡಿದ್ದಾರೆ. ಕೆಲವು ಪ್ರಯಾಣಿಕರು ಬೇರೆ ವಾಹನದಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದಾರೆ.‌

ಬೆಂಗಳೂರು- ಕಣ್ಣೂರು ರೈಲು ಮತ್ತು ಬೆಂಗಳೂರು- ಮುರುಡೇಶ್ವರ ರೈಲುಗಳ ಸಂಚಾರ ಸ್ಥಗಿತಗೊಂಡಿದೆ.‌ ಅರೆಬೆಟ್ಟ ಮತ್ತು ಎಡಕುಮೇರಿ ಮಧ್ಯ ಭಾಗದಲ್ಲಿ ಗುಡ್ಡ ಕುಸಿತವಾಗಿದ್ದು ಪ್ರಯಾಣಿಕರು ನಡುವೆ ಸಿಕ್ಕಿಬೀಳುವಂತಾಗಿದೆ. ರೈಲ್ವೇ ಸಿಬ್ಬಂದಿಗಳು ಗುಡ್ಡ ತೆರವುಗೊಳಿಸುತ್ತಿದ್ದು ಮಧ್ಯಾಹ್ನ ವೇಳೆಗೆ ತೆರವಾಗುವ ಸಾಧ್ಯತೆಯಿದೆ. ‌

ರೈಲು ಹಳಿಯ ಮೇಲೆ ಬಿದ್ದಿದ್ದ ಬಂಡೆಗಳ ಅನತಿ ದೂರದಲ್ಲಿ ರೈಲು  ಬಂದು ನಿಂತಿದ್ದು ರಾತ್ರಿ ವೇಳೆ ಲೋಕೊ ಪೈಲಟ್ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ.

Train services between Mangaluru and Bengaluru came to a standstill late Friday night after a large boulder fell onto the railway track near Sakleshpur. The incident occurred along the ghat section, a stretch known for its steep terrain and frequent landslides, especially during the monsoon season.