ಬ್ರೇಕಿಂಗ್ ನ್ಯೂಸ್
20-06-25 09:54 pm Dinesh, Mangaluru ಕರಾವಳಿ
ಉಳ್ಳಾಲ, ಜೂ.20 : ಸೋಮೇಶ್ವರ ಕಡಲ ಕಿನಾರೆಯಲ್ಲಿ ಐದು ಗಾಳಿ ಮರಗಳನ್ನ ಅರಣ್ಯ ಇಲಾಖೆಯವರೇ ಕಡಿದು ಲೂಟಿಗೈದ ವಿಷಯ ಸುದ್ದಿಯಾಗುತ್ತಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಕ್ಷೇತ್ರದ ಶಾಸಕ, ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದ್ದಾರೆ. ಮಿನಿಸ್ಟರ್ ಆದೇಶ ಇದೆಯೆಂದು ಬೋಂಗು ಬಿಟ್ಟ ಬಾಡಿ ಬಿಲ್ಡರ್ ಅರಣ್ಯ ರಕ್ಷಕನೇ ಮರಗಳಿಗೆ ಕೊಡಲಿ ಹಾಕಿರೋದಾಗಿ ಆರೋಪ ಕೇಳಿಬಂದಿದೆ.
ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಅಪಾಯಕಾರಿಯಾಗುವ ಮರಗಳು ಮತ್ತು ಸೋಮೇಶ್ವರ ಬೀಚಲ್ಲಿ ಮುರಿದು ನಿಂತಿದ್ದ ಒಂದು ಗಾಳಿ ಮರವನ್ನ ತೆರವುಗೊಳಿಸುವಂತೆ ಪುರಸಭೆ ಆಡಳಿತವು ಅರಣ್ಯ ಇಲಾಖೆಗೆ ಮನವಿ ಮಾಡಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಜನನಿಬಿಡ ಪ್ರದೇಶಗಳ ಅಪಾಯಕಾರಿ ಮರಗಳನ್ನ ಹಾಗೆಯೇ ಬಿಟ್ಟು ಸಮುದ್ರ ತೀರದಲ್ಲಿ ಅಳಿವಿನಂಚಿನಲ್ಲಿರುವ ಐದು ಬೃಹತ್ ಗಾತ್ರದ ಗಾಳಿ ಮರಗಳನ್ನ ಕಡಿದು ವಾಹನಗಳಲ್ಲಿ ತುಂಬಿಸಿ ಲೂಟಿಗೈದಿದ್ದರು. ಬೀಚಲ್ಲಿ ಅನಧಿಕೃತ ಗೂಡಂಗಡಿ ಹೊಂದಿರುವ ಕಾಂಗ್ರೆಸ್ ಪುಡಾರಿಯೇ ಮರಗಳನ್ನ ಕಡಿಸಲು ಲಾಬಿ ನಡೆಸಿದ್ದನೆಂದು ಸ್ಥಳೀಯರು ಆರೋಪಿಸಿದ್ದರು. ಮೊನ್ನೆ ಬುಧವಾರ ಸಂಜೆ ಸ್ಥಳಕ್ಕೆ ಬಂದಿದ್ದ ಕೋಟೆಕಾರು ಶಾಖೆ ಉಪ ವಲಯ ಅರಣ್ಯ ರಕ್ಷಕ ರೋಹಿತ್ ಎಂಬವರು ಸಚಿವರ ಆದೇಶವಿದೆ, ಹಾಗಾಗಿ ಮರಗಳನ್ನ ಕಡಿಯುತ್ತಿರೋದಾಗಿ ಸಬೂಬು ನೀಡಿ ಮರಗಳ ಮಾರಣ ಹೋಮ ನಡೆಸಿರೋದಾಗಿ ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಾಸ್ಕರ ಗಟ್ಟಿ ಆರೋಪಿಸಿದ್ದಾರೆ.




ಬುಧವಾರ ಸಂಜೆ ಸೋಮೇಶ್ವರ ಸಮುದ್ರ ತೀರದಲ್ಲಿ ಅಳಿವಿನಂಚಿನಲ್ಲಿದ್ದ ಸುಮಾರು ಐವತ್ತು ವರುಷಕ್ಕೂ ಅಧಿಕ ವಯಸ್ಸಿನ ಐದು ಬಲಿತ ಗಾಳಿ ಮರಗಳನ್ನ ಅರಣ್ಯ ಇಲಾಖೆಯವರು ಬುಡ ಸಮೇತ ಕಡಿದು ಹಾಕಿ ವಾಹನದಲ್ಲಿ ಸಾಗಾಟ ನಡೆಸುತ್ತಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಭಾಸ್ಕರ ಗಟ್ಟಿಯವರು ಸ್ಥಳದಲ್ಲಿದ್ದ ಅರಣ್ಯ ರಕ್ಷಕ ರೋಹಿತ್ ರನ್ನು ಉದ್ದೇಶಿಸಿ ಸೋಮನಾಥ ಕ್ಷೇತ್ರ ವ್ಯಾಪ್ತಿಯ ಮರಗಳನ್ನ ವಿನಾಕಾರಣ ಯಾಕಾಗಿ ಕಡಿಯುತ್ತಿದ್ದೀರೆಂದು ಪ್ರಶ್ನಿಸಿದ್ದಾರೆ. ಇದಕ್ಕೆ ಹಾರಿಕೆಯ ಉತ್ತರ ನೀಡಿದ ರೋಹಿತ್ ಸಚಿವರ ಆದೇಶವೆಂದು ಸಬೂಬು ನೀಡಿದ್ದರಂತೆ. ಇದಲ್ಲದೆ ನಮಗೂ ಖರ್ಚಿಗೇನಾದರೂ ಮಾಡಬೇಕಲ್ಲವೇ ಎಂದು ಹೇಳಿಕೊಂಡಿದ್ದಾಗಿ ಭಾಸ್ಕರ್ ತಿಳಿಸಿದ್ದಾರೆ.
ಅರಣ್ಯ ರಕ್ಷಕ ರೋಹಿತ್, ಪೊಲೀಸ್ ಅಧಿಕಾರಿ ರೀತಿ ಪೋಸು ನೀಡುತ್ತಾ ಜನಸಾಮಾನ್ಯರಲ್ಲಿ ಉದ್ಧಟತನ ತೋರುವುದು, ಸರಕು ವಾಹನಗಳನ್ನ ಅಡ್ಡ ಹಾಕಿ ಜೇಬು ತುಂಬಿಸುತ್ತಿರುವ ಆರೋಪಗಳು ಕೇಳಿಬಂದಿವೆ.
A fresh controversy has erupted along the Someshwara coastal belt near Ullal after allegations surfaced that a forest guard himself illegally axed five large trees, claiming he was acting on orders from a "minister." The incident has prompted Karnataka Assembly Speaker and local MLA U.T. Khader to direct a detailed inquiry into the matter by the Mangaluru Division Deputy Conservator of Forests.
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
26-05-26 11:56 am
HK News Staffer
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm