ಬ್ರೇಕಿಂಗ್ ನ್ಯೂಸ್
05-05-25 07:15 pm Mangalore Correspondent ಕರಾವಳಿ
ಮಂಗಳೂರು, ಮೇ.5: ಸುಹಾಸ್ ಶೆಟ್ಟಿ ಕೊಲೆಯನ್ನು ಪೊಲೀಸರೇ ಮಾಡಿಸಿದ್ದಾರೆಂಬ ಅನುಮಾನ ಇದೆ. ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಲ್ಲ. ಮೊದಲೇ ಒಡಂಬಡಿಕೆ ಆದಂತೆ ಆರೋಪಿಗಳನ್ನು ಸರೆಂಡರ್ ಮಾಡಲಾಗಿದೆ. ಇದಕ್ಕಾಗಿ ವಿದೇಶದಿಂದ 50 ಲಕ್ಷ ಫಂಡಿಂಗ್ ಆಗಿದ್ದು, ಪೊಲೀಸ್ ಇಲಾಖೆಗೂ ಹೋಗಿದೆ ಎಂದು ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ನೇರ ಆರೋಪ ಮಾಡಿದ್ದಾರೆ.
ಸುಹಾಸ್ ಶೆಟ್ಟಿ ಕಾರನ್ನು ಅಡ್ಡಹಾಕಿ ವ್ಯವಸ್ಥಿತ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಈ ವೇಳೆ, ಸ್ಥಳೀಯರು ಕೋಟೆ ನಿರ್ಮಿಸಿದ ಸುತ್ತ ನಿಂತು ಆರೋಪಿಗಳು ಪರಾರಿಯಾಗಲು ಸಹಾಯ ಮಾಡಿದ್ದಾರೆ. ಈ ಕೃತ್ಯವನ್ನು ಪೊಲೀಸ್ ಕಮಿಷನರ್ ಮತ್ತು ಪೊಲೀಸರು ವ್ಯವಸ್ಥಿತ ರೀತಿಯಲ್ಲಿ ಮಾಡಿಸಿದ್ದಾರೆ. ಸ್ಥಳೀಯ ಪೊಲೀಸರ ಸಹಕಾರದಿಂದಲೇ ಕೊಲೆ ಘಟನೆಯಾಗಿದೆ.
ಸ್ಪೀಕರ್ ಯುಟಿ ಖಾದರ್ ಅವರು ಫಾಜಿಲ್ ಕೊಲೆಗೆ ಪ್ರತೀಕಾರಕ್ಕಾಗಿ ಮಾಡಿದ್ದಲ್ಲ. ಅವರ ಪಾತ್ರ ಇಲ್ಲ ಎಂದು ಹೇಳಿದ್ದರು. ಆದರೆ ಫಾಜಿಲ್ ಕೊಲೆ ಕಾರಣಕ್ಕಾಗಿಯೇ ಮಾಡಿದ್ದಾರೆ ಅಂತ ಕಮಿಷನರ್ ಹೇಳಿದ್ದಾರೆ. ಪೊಲೀಸರು ಎಷ್ಟು ನಿರ್ಲಕ್ಷ್ಯ ವಹಿಸಿದ್ದರಂದ್ರೆ, ಸುಹಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಮುಟ್ಟಲು ಹೋಗಿಲ್ಲ. ಸ್ಥಳೀಯರು ಆನಂತರ ಬೇರೆ ವಾಹನದಲ್ಲಿ ಹಾಕಿ ಆಸ್ಪತ್ರೆಗೆ ಕರೆತಂದಿದ್ದಾರೆ. ಮಂಗಳೂರಿನ ಪೊಲೀಸ್ ಇಲಾಖೆಯನ್ನು ಈ ಕಮಿಷನರ್ ದುಸ್ಥಿತಿಗೆ ತಳ್ಳಿದ್ದಾರೆ. ಇಂಥ ಕಮಿಷನರನ್ನು ನಾವು ಈತನಕ ನೋಡಿಲ್ಲ. ಇಸ್ಪೀಟ್, ಮರಳು ಮಾಫಿಯಾದಲ್ಲಿ ಪೊಲೀಸ್ ಪೇದೆಗಳೇ ಇಂತಿಷ್ಟು ಕೊಡಬೇಕೆಂದು ಹೇಳುತ್ತಾರೆ. ಅದರಲ್ಲಿ ಕಮಿಷನರಿಗೆ ಇಷ್ಟು, ಇಲಾಖೆಗೆ ಇಷ್ಟು ಎಂದೂ ಹೇಳುತ್ತಾರೆ. ಪೊಲೀಸರು ಇಷ್ಟು ಬರಗೆಟ್ಟ ಸ್ಥಿತಿಗೆ ಹೋಗಬಾರದು.
ಮೊನ್ನೆ ಮೂಡುಶೆಡ್ಡೆಯ ಪ್ರದೀಪ್ ಎಂಬ ಕಾರ್ಯಕರ್ತನ ಮನೆಗೆ ನಡುರಾತ್ರಿಯಲ್ಲಿ ಪೊಲೀಸರು ನುಗ್ಗಿ ತಲಾಶ್ ಮಾಡಿದ್ದಾರೆ. ಯಾವುದೇ ವಾರಂಟ್ ಇಲ್ಲದೆ ಮಹಿಳೆಯರಿದ್ದ ವೇಳೆ ಮನೆಗೆ ನುಗ್ಗಿ ಪೊಲೀಸರಿಗೆ ತಪಾಸಣೆ ನಡೆಸಲು ಅವಕಾಶ ಇದೆಯೇ ಎಂದು ಕೇಳಿದ ಕೋಟ್ಯಾನ್, ಪೊಲೀಸರು ಎಷ್ಟು ಜನ ಮುಸ್ಲಿಮರ ಮನೆಗೆ ಹೋಗಿದ್ದೀರಿ, ತಪಾಸಣೆ ಮಾಡಿದ್ದೀರಾ ಅಂತ ಪ್ರಶ್ನೆ ಮಾಡಿದರು.
ಬಜ್ಪೆಯ ಕಿನ್ನಿಪದವು ಎಂಬಲ್ಲಿ ಲೈಕೋರಿಸ್ ಹೆಸರಿನ ಫ್ಲಾಟ್ ಇದೆ. ಅದರಲ್ಲಿ ಪ್ರಶಾಂತ ಪೂಜಾರಿ, ಸುಖಾನಂದ ಶೆಟ್ಟಿ ಹತ್ಯೆ ಮಾಡಿದವರು ನೆಲೆಸಿದ್ದಾರೆ. ಸುಹಾಸ್ ಶೆಟ್ಟಿ ಕೊಲೆ ಕೃತ್ಯದಲ್ಲಿ ಇವರದ್ದೂ ಪಾತ್ರ ಇದೆ. ಪೊಲೀಸರು ಇವರ ಮನೆಗೆ ಹೋಗಿ ತಪಾಸಣೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಗೃಹ ಸಚಿವರು ಮೊನ್ನೆ ಮುಸ್ಲಿಂ ಮುಖಂಡರನ್ನು ಮಾತ್ರ ಮಾತನಾಡಿಸಿದ್ದಾರೆ. ಯಾಕೆ ಜನಪ್ರತಿನಿಧಿಗಳನ್ನು ಕರೆದು ಏನು ವಿಷಯ ಅಂತ ಕೇಳಲಿಲ್ಲ. ನಮಗೆ ಜಿಲ್ಲೆಯ ಪೊಲೀಸರ ಒಂದು ನೂಲಿನಷ್ಟು ವಿಶ್ವಾಸವೂ ಇಲ್ಲ. ಹೀಗಾಗಿ ಒಟ್ಟು ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಕಮಿಷನರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಉಮಾನಾಥ ಕೋಟ್ಯಾನ್, ರೌಡಿಶೀಟರ್ ಅಂತ ಹೇಳಿ ಸಮಜಾಯಿಷಿ ಕೊಡುತ್ತಿದ್ದಾರೆ. ಇವರು ರೌಡಿಯನ್ನು ಕೊಲ್ಲಲು ಬೇರೆ ರೌಡಿಗಳನ್ನು ಬಿಟ್ಟಿದ್ದಾ.. ನಿಮಗೆ ದುಡ್ಡು ಕೊಟ್ಟಿಲ್ಲ ಅಂತ ಯಾರೊಬ್ಬರ ಮೇಲೂ ರೌಡಿಶೀಟರ್ ಮಾಡ್ತೀರಾ.. ಹಿಂದುಗಳಲ್ಲಿ ಮಾತ್ರ ರೌಡಿಶೀಟರ್ ಇರೋದಾ ಎಂದು ಪ್ರಶ್ನಿಸಿದರು. ಕೊಲೆ ಪ್ರಕರಣದ ವಿಡಿಯೋದಲ್ಲಿ ಮುಸುಕುಧಾರಿ ಮಹಿಳೆಯೊಬ್ಬರು ಆರೋಪಿಗಳು ಪರಾರಿಯಾಗಲು ಸಕರಿಸುತ್ತಾರೆ. ಅವರನ್ನು ಯಾಕೆ ಬಂಧಿಸಿಲ್ಲ. ಸರಕಾರ ಯಾರದ್ದಿದ್ದರೂ ಅಧಿಕಾರಿಗಳು ಯಾರದ್ದೂ ಮುಲಾಜಿನಲ್ಲಿ ಕೆಲಸ ಮಾಡಬಾರದು. ಕಾಂಗ್ರೆಸ್ ಸರಕಾರ ಅಂತ ಯಾರೋ ಪುಢಾರಿಗಳ ಮಾತು ಕೇಳಿಕೊಂಡು ಕೆಲಸ ಮಾಡೋದಲ್ಲ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಎಂಎಲ್ಸಿ ಕಿಶೋರ್ ಕುಮಾರ್, ಈಶ್ವರ್ ಕಟೀಲು ಮತ್ತಿತರರಿದ್ದರು.
Mangalore Suhas Shetty murder was planned by police, accused have surrendered by giving money slams BJP Umanath Kotian.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm