ಬ್ರೇಕಿಂಗ್ ನ್ಯೂಸ್
12-03-25 05:23 pm Mangalore Correspondent ಕರಾವಳಿ
ಮಂಗಳೂರು, ಮಾ.12 : ಫರಂಗಿಪೇಟೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಹೈಕೋರ್ಟಿಗೆ ವರದಿ ಸಲ್ಲಿಸಿದ್ದಾರೆ.
ಫೆ.25ರಿಂದ 12 ದಿನಗಳ ಕಾಲ ನಾಪತ್ತೆಯಾಗಿದ್ದ ದಿಗಂತ್ ಮಾ.8ರಂದು ಉಡುಪಿಯಲ್ಲಿ ದಿಢೀರ್ ಎನ್ನುವಂತೆ ಪತ್ತೆಯಾಗಿದ್ದ. ಅಲ್ಲಿಂದ ಕರೆತಂದು ವಿಚಾರಣೆ ನಡೆಸಿದ ಬಳಿಕ ಪೊಲೀಸರು ಆತನನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಿದ್ದರು. ಇದಕ್ಕೂ ಮುನ್ನ ಹೈಕೋರ್ಟಿನಲ್ಲಿ ಪೋಷಕರು ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿ ಬಾಲಕನನ್ನು ಪತ್ತೆ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದರು. ಇದರಂತೆ, ಮಾರ್ಚ್ 12ರಂದು ಪೊಲೀಸರು ಹೈಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದು, ಸದ್ಯಕ್ಕೆ ಹುಡುಗ ಮಕ್ಕಳ ರಕ್ಷಣಾ ಕೇಂದ್ರದಲ್ಲಿದ್ದು ಆತನಿಗೆ ಕೌನ್ಸಿಲಿಂಗ್ ಅಗತ್ಯ ಇರುವ ಬಗ್ಗೆ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.
ಹೈಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಪೋಷಕರ ಕಡೆಯ ವಕೀಲರು, ದಿಗಂತ್ ಪಿಯುಸಿ ವಿದ್ಯಾರ್ಥಿಯಾಗಿದ್ದು, ಸದ್ಯ ಪರೀಕ್ಷೆ ನಡೆಯುತ್ತಿದೆ. ಇನ್ನೂ ಕೆಲವು ಪರೀಕ್ಷೆ ಉಳಿದಿದ್ದು ಪೋಷಕರ ಅಪೇಕ್ಷೆಯಂತೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸಿಡಬ್ಲ್ಯುಸಿ ವರದಿಯಂತೆ ಪೊಲೀಸರು ಅಫಿಡವಿಟ್ ಹಾಕಿದ್ದಾರೆ. ಪರೀಕ್ಷೆ ಹೆಸರಲ್ಲಿ ಬಾಲಕನಿಗೆ ಒತ್ತಡ ಹೇರಬೇಡಿ, ಮುಂದಿನ ವಾರ ನಿಮ್ಮ ಅಹವಾಲು ಪರಿಗಣಿಸುವುದಾಗಿ ಹೇಳಿದ್ದಾರೆ.
ಇದೇ ವೇಳೆ, ಪೋಷಕರಿಗೆ ಮಗನನ್ನು ಭೇಟಿಯಾಗಲು ಅವಕಾಶ ಕೊಡಬೇಕೆಂದು ಕೇಳಿದ್ದಾರೆ. ಅದಕ್ಕೆ, ಅಪ್ರಾಪ್ತ ಮಗನ ಬಗ್ಗೆ ಆಸ್ಥೆ ವಹಿಸುವ ವಿಚಾರದಲ್ಲಿ ಪೋಷಕರಿಗೆ ಮೊದಲ ಆದ್ಯತೆ ಇರುತ್ತದೆ. ಜೊತೆಗೆ ನೀವು ಕೂಡ ಭೇಟಿಯಾಗಬಹುದು, ಅದಕ್ಕೇನೂ ಸರಕಾರಿ ವಕೀಲರ ಆಕ್ಷೇಪ ಇರಲಿಕ್ಕಿಲ್ಲ ಎಂದು ಪೋಷಕರ ಕಡೆಯ ವಕೀಲರಿಗೆ ಜಡ್ಜ್ ಹೇಳಿದರು. ಈ ವೇಳೆ ಹೈಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಜಡ್ಜ್ ಕಾಮೇಶ್ವರ ರಾವ್ ಮತ್ತು ಟಿಎಂ ನದಾಫ್ ಅವರಿದ್ದರು.
ಇದೇ ವೇಳೆ, ದಿಗಂತ್ ಮನೆಗೆ ಹೋಗಲು ಬಯಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾಗಿ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸೋಮವಾರ ಹುಡುಗನನ್ನು ಬಂಟ್ವಾಳದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಲ್ಲಿ ನ್ಯಾಯಾಧೀಶರ ಎದುರಲ್ಲಿ 164 ಕಾಯ್ದೆಯಡಿ ಹೇಳಿಕೆ ನೀಡಿದ್ದಾನೆ. ಆ ಸಂದರ್ಭದಲ್ಲಿ ಪೊಲೀಸರು ಜೊತೆಗೆ ಇರಲಿಲ್ಲ. ಈಗಾಗಲೇ ಎಸ್ಪಿ ಯತೀಶ್, ಹುಡುಗ ಪಿಯುಸಿ ಪರೀಕ್ಷೆ ಭಯದಿಂದ ನಾಪತ್ತೆಯಾಗಿದ್ದಾನೆ. ಬೇರಾವುದೇ ಆಯಾಮ ಇಲ್ಲ ಎಂದು ತಿಳಿಸಿದ್ದಾರೆ.
ಮಾರ್ಚ್ 9 ಮತ್ತು 10ರಂದು ಮನೆಯವರು ದಿಗಂತ್ ನನ್ನು ಭೇಟಿಯಾಗಿದ್ದು, ಆ ಸಂದರ್ಭದಲ್ಲಿ ಮನೆಗೆ ಬರುವುದಿಲ್ಲ ಎನ್ನುವ ರೀತಿ ಯಾವುದೇ ಮಾತು ಆಡಿಲ್ಲ. ಬದಲಿಗೆ, ಪರೀಕ್ಷೆ ವಿಚಾರದಲ್ಲಿ ನಮ್ಮಲ್ಲಿ ಕೇಳಿದ್ದಾನೆ. ಪರೀಕ್ಷೆ ಮತ್ತೆ ಬರೆಯಬಹುದು ಎಂದು ಸಂತೈಸಿದ್ದೇವೆ. ಈ ನಡುವೆ, ಮಗ ಮನೆಗೆ ಬರಲು ಒಪ್ಪುತ್ತಿಲ್ಲ ಎಂದು ಕೆಲವರು ಯಾಕೆ ಸುದ್ದಿ ಹಬ್ಬಿಸುತ್ತಿದ್ದಾರೋ ಗೊತ್ತಾಗಲ್ಲ ಎಂದು ಮನೆಮಂದಿ ಪ್ರಶ್ನೆ ಮಾಡಿದ್ದಾರೆ.
In the ongoing investigation of the Mangalore Diganth missing case, local police submitted a comprehensive report to the High Court today, detailing their findings and the status of the case. The court has ordered that Diganth, the individual at the center of the case, will remain in a remand home while further proceedings take place.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 08:29 pm
Mangalore Correspondent
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am