ಬ್ರೇಕಿಂಗ್ ನ್ಯೂಸ್
15-12-20 05:59 pm Mangalore Correspondent ಕರಾವಳಿ
ಮಂಗಳೂರು, ಡಿ.15: ರಸ್ತೆ ಬದಿ ಎಲ್ಲೆಂದರಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ವಾಹನದಲ್ಲಿ ಬರುವ ಪೊಲೀಸರು ಹೊತ್ತೊಯ್ಯುತ್ತಾರೆ. ಆದರೆ, ಹೀಗೆ ಟೋಯಿಂಗ್ ಮಾಡುವ ವಾಹನವೇ ಆರ್ ಟಿಓ ನಿಯಮಗಳನ್ನು ಉಲ್ಲಂಘಿಸಿದ್ದರೆ ಯಾರು ಅದಕ್ಕೆ ದಂಡ ಹಾಕಬೇಕು. ಮಂಗಳೂರಿನಲ್ಲಿ ಅಂಥದ್ದೇ ಪ್ರಕರಣ ಪತ್ತೆಯಾಗಿದ್ದು, ಸಾರ್ವಜನಿಕರ ಆಕ್ರೋಶ ಪೊಲೀಸರ ಟೋಯಿಂಗ್ ವಾಹನದ ವಿರುದ್ಧವೇ ತಿರುಗಿದೆ.
ಹತ್ತಾರು ವಾಹನಗಳನ್ನು ಏಕಕಾಲದಲ್ಲಿ ಹೊತ್ತೊಯ್ಯುವ ಟೋಯಿಂಗ್ ವಾಹನವೊಂದು ವಿಮೆ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ನವೀಕರಿಸದೆ ನಿಯಮಗಳನ್ನು ಉಲ್ಲಂಘಿಸಿ ಒಂದು ವರ್ಷದಿಂದ ಕಾರ್ಯಾಚರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ರಸ್ತೆ ಬದಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿ ನಿಲ್ಲಿಸುವ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ವಾಹನಗಳಿಂದ ಕಷ್ಟಕ್ಕೆ ಒಳಗಾಗದವರೇ ಇಲ್ಲ ಎನ್ನಬಹುದು. ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳು ಟೋಯಿಂಗ್ ಕಾರಣದಿಂದಾಗಿ ಸ್ವಲ್ಪ ಹೊತ್ತಲ್ಲಿ ಮಾಯ ಆಗಿಬಿಡುತ್ತದೆ.
ಟೋಯಿಂಗ್ ವಾಹನದಿಂದ ಕಿರಿಕಿರಿ ಅನುಭವಿಸಿದ ದ್ವಿಚಕ್ರ ವಾಹನ ಸವಾರರೊಬ್ಬರು, ಇದೀಗ ಟೋಯಿಂಗ್ ವಾಹನದ ಜಾತಕ ಹೇಗಿದೆ ಎಂದು ಆರ್ ಟಿಓದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ವಾಹನದ ಇನ್ಶೂರನ್ಸ್ 2019ರ ಮೇ ತಿಂಗಳಲ್ಲಿ ಲ್ಯಾಪ್ಸ್ ಆಗಿರುವುದು ಗಮನಕ್ಕೆ ಬಂದಿದೆ. ಫಿಟ್ನೆಸ್ ಚೆಕ್ ಮಾಡಿದಾಗ, ಅದೂ ನವೀಕರಣ ಆಗಿರಲಿಲ್ಲ. ಹೀಗಾಗಿ ಈ ವಿಚಾರವನ್ನು ಟ್ರಾಫಿಕ್ ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರ ಸೂಚನೆ ಮೇರೆಗೆ ಸದ್ರಿ ವಾಹನವನ್ನು ಕೆಲವು ದಿನಗಳಿಂದ ಟೋಯಿಂಗ್ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.
ಟೋಯಿಂಗ್ ಕರ್ತವ್ಯಕ್ಕೆ ಮಂಗಳೂರಿನಲ್ಲಿ ನಾಲ್ಕು ವಾಹನಗಳಿದ್ದು ಬೆಂಗಳೂರಿನ ವ್ಯಕ್ತಿ ಕಂಟ್ರಾಕ್ಟ್ ಪಡೆದಿದ್ದಾರೆ. ಅದರಲ್ಲಿ ಒಂದನ್ನು ಲಾಕ್ಡೌನ್ ಸಂದರ್ಭದಲ್ಲಿ ಫಿಟ್ನೆಸ್ ಪರೀಕ್ಷೆಗಾಗಿ ಬೆಂಗಳೂರಿಗೆ ಕಳಿಸಿದ್ದು, ಅದಿನ್ನೂ ಮರಳಿ ಬಂದಿಲ್ಲ. ಮತ್ತೊಂದು ವಾಹನದಲ್ಲಿ ಕಳೆದ ಒಂದು ವರ್ಷದಿಂದ ವಿಮೆ ಮತ್ತು ಫಿಟ್ನೆಸ್ ಇಲ್ಲದೆ, ಆರ್ ಟಿಓ ನಿಯಮ ಉಲ್ಲಂಘಿಸಿ, ಪೊಲೀಸರೇ ಕರ್ತವ್ಯ ನಿಭಾಯಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿರುವುದರಿಂದ ನಿಯಮ ಉಲ್ಲಂಘಿಸಿದ ಟೋಯಿಂಗ್ ವಾಹನಕ್ಕೂ ದಂಡ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
It is gathered that the towing vehicle which carried the vehicles in Mangalore found violating traffic rules or parked in ‘No Parking’ zones away, itself did not have insurance and fitness certificates.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am