ಬ್ರೇಕಿಂಗ್ ನ್ಯೂಸ್
10-12-20 12:38 pm Mangalore Correspondent ಕರಾವಳಿ
ಮಂಗಳೂರು, ಡಿ.10 : ಕೋವಿಡ್ ಕಾರಣದಿಂದ ಆತಂಕ ಮನೆಮಾಡಿದ್ದ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಕೊನೆಗೂ ರಂಗಸ್ಥಳ ಸಿದ್ಧಗೊಂಡಿದೆ. ಕಟೀಲು ದುರ್ಗಾಪರಮೇಶ್ವರಿ ದೇವಳದ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟಕ್ಕೆ ವೇದಿಕೆ ರೆಡಿಯಾಗಿದ್ದು ಕಲಾವಿದರು ಗೆಜ್ಜೆ ಕಟ್ಟಿದ್ದಾರೆ. ಸಂಪ್ರದಾಯದಂತೆ ದೇವಳದ ಅರ್ಚಕರು ಗೆಜ್ಜೆಗಳನ್ನು ನೀಡುವ ಮೂಲಕ ಆರು ಮೇಳಗಳ ಆಟಕ್ಕೆ ಬುಧವಾರ ರಾತ್ರಿ ಚಾಲನೆ ನೀಡಲಾಗಿದೆ.
ಪ್ರತಿಬಾರಿ ನವೆಂಬರ್ ತಿಂಗಳ ಮಧ್ಯದಲ್ಲಿ ಕಟೀಲು ಮೇಳದ ತಿರುಗಾಟ ಆರಂಭಗೊಳ್ಳುತ್ತದೆ. ಆರಂಭದಲ್ಲಿ ದೇಗುಲದ ವಠಾರದಲ್ಲಿ ಆರೂ ಮೇಳಗಳ ಕಲಾವಿದರು ಪ್ರತ್ಯೇಕ ರಂಗಸ್ಥಳ ನಿರ್ಮಿಸಿ, ಯಕ್ಷಗಾನ ಆಡುತ್ತಾರೆ. ಆರು ಮೇಳದ ಅದ್ಭುತ ಪ್ರದರ್ಶನ ಅಷ್ಟೇ ಅದ್ಧೂರಿಯಾಗಿರುತ್ತದೆ. ಈ ಬಾರಿ ಕೊರೊನಾ ಕಾರಣದಿಂದಾಗಿ ಹಿಂದಿನ ರೀತಿಯ ಅಬ್ಬರ ಇರಲಿಲ್ಲ. ಸಂಪ್ರದಾಯಕ್ಕೆ ಚ್ಯುತಿಯಾಗದಂತೆ ಆಟ ಆಡಿಸಲಾಗಿದೆ. ಕಟೀಲು ದೇವರಿಗೆ ನಮಿಸಿ ಕಲಾವಿದರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆಜ್ಜೆ ಕಟ್ಟಿ ಕುಣಿದಿದ್ದಾರೆ. ಈ ಬಾರಿಯ ತಿರುಗಾಟಕ್ಕೆ ಯಾವುದೇ ವಿಘ್ನ ಬಾರದಿರಲೆಂದು ದೇವರಲ್ಲಿ ಬೇಡಿಕೊಂಡು ಮುಂದಿನ ಹೆಜ್ಜೆ ಇಟ್ಟಿದ್ದಾರೆ.
\
ಈಗ ಶುರುವಾದ ತಿರುಗಾಟ ಮೇ ತಿಂಗಳ 25 ವರೆಗೂ ಯಕ್ಷಗಾನ ಸೇವೆ ನಡೆಯುತ್ತದೆ. ಪತ್ತನಾಜೆಗೆ ಮತ್ತೆ ಗೆಜ್ಜೆ ಒಳಗಿಟ್ಟು ಕಲಾವಿದರಿಗೆ ಮಳೆಗಾಲದ ರಜೆ ಸಿಗುತ್ತದೆ. ಆರು ಮೇಳಗಳಿದ್ರೂ ಯಕ್ಷಗಾನ ಆಡಿಸುವುದಕ್ಕೆ ಕೊರತೆ ಇಲ್ಲ. ಸಾಧಾರಣವಾಗಿ ಪ್ರತಿ ವರ್ಷದ ಆಟ ಆಡಿಸುವ ಮಂದಿಯೇ ಹೆಚ್ಚಿದ್ದಾರೆ. ಹೀಗಿದ್ದರೂ, 20 ವರ್ಷಗಳ ಕಾಲ ಯಕ್ಷಗಾನ ಸೇವೆ ಬುಕ್ಕಿಂಗ್ ಇರುವುದು ವಿಶೇಷ.
ಕಟೀಲು ಮೇಳದಲ್ಲಿ ಈ ಬಾರಿ ಕೆಲವು ಬದಲಾವಣೆಗಳೂ ಆಗಿವೆ. ಭಾಗವತ ಪಟ್ಲ ಸತೀಶ ಶೆಟ್ಟಿ ಮೇಳದಿಂದ ಹೊರಬಂದು ಈ ಬಾರಿ ಪಾವಂಜೆ ಹೆಸರಲ್ಲಿ ಹೊಸ ಮೇಳ ಕಟ್ಟಿದ್ದಾರೆ. ಕಟೀಲಿನಲ್ಲಿದ್ದ ಕೆಲವು ಕಲಾವಿದರು ಇತ್ತ ಪಟ್ಲರ ಜೊತೆ ಪಾವಂಜೆ ಮೇಳಕ್ಕೆ ಸೇರಿದ್ದಾರೆ. ಹೀಗಾಗಿ ಕಟೀಲು ಮೇಳದಲ್ಲಿ ಹಳಬರು ಮತ್ತು ಹೊಸಬರ ಸಮ್ಮಿಲನದ ಜೊತೆ ಕಟೀಲು ಕ್ಷೇತ್ರ ಮಹಾತ್ಮೆಯ ಸಿಂಹನಾದಕ್ಕೆ ಕಲಾವಿದರು ರೆಡಿಯಾಗಿದ್ದಾರೆ. ಇಂದಿನಿಂದಲೇ ಕಟೀಲು ಮೇಳದ ಚೆಂಡೆಯ ಅಬ್ಬರ ಕರಾವಳಿಯ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅನುರಣಿಸಲಿದೆ.
Photo Credit: Ravi Posavanike - Times of India
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
15-08-25 09:22 pm
Mangalore Correspondent
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm