ಬ್ರೇಕಿಂಗ್ ನ್ಯೂಸ್
07-08-20 03:36 pm Mangalore Reporter ಕರಾವಳಿ
ಮಂಗಳೂರು, ಆಗಸ್ಟ್ 7: ಕಾರು ಚಾಲಕನ ಅಚಾತುರ್ಯ, ನಿರ್ಲಕ್ಷ್ಯ ಎಂಥಾ ದುರ್ಘಟನೆಗೆ ಕಾರಣವಾಗುತ್ತೆ ಈ ಘಟನೆ ಸಾಕ್ಷಿ. ಸ್ಕೂಟರ್ ಡಿಕ್ಕಿಯಾಗಿ ಅದರಲ್ಲಿದ್ದ ಸವಾರೆ ಯುವತಿ ಕಾರಿನ ಮೇಲೆ ಬಾನೆಟಿಗೆ ಬಿದ್ದರೂ ಚಾಲಕ ನಿಲ್ಲಿಸದೆ ಮುಂದಕ್ಕೊಯ್ದಿದ್ದರಿಂದ ಯುವತಿಯ ಮೇಲಿಂದಲೇ ಕಾರು ಹರಿದ ಘಟನೆ ಮಂಗಳೂರಿನ ಕದ್ರಿ ಕಂಬ್ಳದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಘಟನೆ ನಡೆದಿದ್ದು ಕಾರಿನಡಿಗೆ ಬಿದ್ದ ಯುವತಿಯನ್ನು ವಾಣಿಶ್ರೀ (22) ಎಂದು ಗುರುತಿಸಲಾಗಿದೆ. ಬಿಜೈ ಕಡೆಯಿಂದ ಬರುತ್ತಿದ್ದ ಸ್ಕೂಟರಿಗೆ ಕದ್ರಿ ಕಡೆಯಿಂದ ಆಗಮಿಸುತ್ತಿದ್ದ ಕಾರು ಕದ್ರಿ ಕಂಬಳ ಸರ್ಕಲ್ ಬಳಿ ಡಿಕ್ಕಿಯಾಗಿದೆ. ಕಾರನ್ನು ಚಲಾಯಿಸುತ್ತಿದ್ದ ವೃದ್ಧ ವ್ಯಕ್ತಿ ಕಾರನ್ನು ನಿಲ್ಲಿಸಲಾಗದೆ ತಡಬಡಾಯಿಸಿದ್ದಾನೆ. ಕಾರಿನ ಮುಂಭಾಗದ ಬಾನೆಟ್ಟಿಗೆ ಬಿದ್ದ ಯುವತಿ ಬಳಿಕ ಉರುಳಿಕೊಂಡು ಮುಂದೆ ರಸ್ತೆಗೆ ಬಿದ್ದಿದ್ದಾಳೆ. ಆದರೆ, ಕಾರು ನೇರವಾಗಿ ಮುಂದಕ್ಕೆ ಬಂದಿದ್ದು ನೆಲಕ್ಕೆ ಬಿದ್ದ ಯುವತಿಯನ್ನು ತಳ್ಳಿಕೊಂಡೇ ಬಂದಿದೆ. ಯುವತಿಯ ದೇಹ ಕಾರಿನ ಮುಂಭಾಗದ ಎರಡು ಚಕ್ರದ ಮಧ್ಯೆ ಸಿಕ್ಕಿದ್ದು ಕೂಡಲೇ ಅಲ್ಲಿದ್ದ ಜನ ಕಾರಿಗೆ ಬಡಿದು ನಿಲ್ಲಿಸಿದ್ದಾರೆ. 2- 3 ಮೀಟರ್ ಉದ್ದಕ್ಕೆ ಎಳೆದೊಯ್ದ ಕಾರು ಚಾಲಕ ಬಳಿಕ ಯುವಕರ ಬೊಬ್ಬೆ ಕೇಳಿ ನಿಲ್ಲಿಸಿದ್ದಾನೆ. ಈ ಘಟನೆಯ ಪೂರ್ತಿ ದೃಶ್ಯ ಅಲ್ಲಿನ ಕಟ್ಟಡವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಾರು ಚಾಲಕನ ಅವಾಂತರವನ್ನು ಹಿಡಿದಿಟ್ಟಿದೆ.
ಕಾರಿನ ಅಡಿಭಾಗದಲ್ಲಿ ಸಿಕ್ಕಿಕೊಂಡಿದ್ದ ಯುವತಿಯನ್ನು ಬಳಿಕ ಸ್ಥಳೀಯರು ಮತ್ತು ಒಬ್ಬ ಪೊಲೀಸ್ ಸಿಬಂದಿ ಸೇರಿ ಕಾರನ್ನು ಹಿಡಿದು ಎತ್ತುವ ಮೂಲಕ ಹೊರಕ್ಕೆಳೆದಿದ್ದಾರೆ.
Live Video:
ಇಡೀ ಘಟನೆ ಕಾರು ಚಾಲಕನ ಅಚಾತುರ್ಯವನ್ನು ಹಿಡಿದಿಟ್ಟಿದೆ. ಮುಂಭಾಗದಲ್ಲಿ ಯಾವ ವಾಹನ ಬರುತ್ತಿದೆ ಎಂದು ಕಾಣದೆ ಕಾರು ಚಲಾಯಿಸುವ ವೃದ್ಧ ಚಾಲಕರಿಂದಾಗುವ ಅನಾಹುತಕ್ಕೆ ಕನ್ನಡಿ ಹಿಡಿದಿದೆ.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
08-07-26 11:04 pm
HK News Desk
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರದಿಂದ 49.22...
08-07-26 01:17 pm
ರಾಮ ಮಂದಿರ ದೇಣಿಗೆ ಲೂಟಿ ; ಹಿಂದೂ ಸಂಘಟನೆಗಳು ಯಾಕೆ...
07-07-26 11:13 pm
09-07-26 05:34 pm
HK News Staffer
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am
ಅಡುಗೆ ವಿಚಾರದಲ್ಲಿ ಹೆಂಡತಿಯೊಂದಿಗೆ ಜಗಳ ; ಅಡ್ಡ ಬಂದ...
07-07-26 08:07 pm
Konaje Police, Accused Escapes, Mangalore: ಪೋ...
07-07-26 03:50 pm
Mangalore Panambur Truck Block; ಪಣಂಬೂರಿನಲ್ಲಿ...
06-07-26 04:49 pm