ಬ್ರೇಕಿಂಗ್ ನ್ಯೂಸ್
07-08-20 03:36 pm Mangalore Reporter ಕರಾವಳಿ
ಮಂಗಳೂರು, ಆಗಸ್ಟ್ 7: ಕಾರು ಚಾಲಕನ ಅಚಾತುರ್ಯ, ನಿರ್ಲಕ್ಷ್ಯ ಎಂಥಾ ದುರ್ಘಟನೆಗೆ ಕಾರಣವಾಗುತ್ತೆ ಈ ಘಟನೆ ಸಾಕ್ಷಿ. ಸ್ಕೂಟರ್ ಡಿಕ್ಕಿಯಾಗಿ ಅದರಲ್ಲಿದ್ದ ಸವಾರೆ ಯುವತಿ ಕಾರಿನ ಮೇಲೆ ಬಾನೆಟಿಗೆ ಬಿದ್ದರೂ ಚಾಲಕ ನಿಲ್ಲಿಸದೆ ಮುಂದಕ್ಕೊಯ್ದಿದ್ದರಿಂದ ಯುವತಿಯ ಮೇಲಿಂದಲೇ ಕಾರು ಹರಿದ ಘಟನೆ ಮಂಗಳೂರಿನ ಕದ್ರಿ ಕಂಬ್ಳದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಘಟನೆ ನಡೆದಿದ್ದು ಕಾರಿನಡಿಗೆ ಬಿದ್ದ ಯುವತಿಯನ್ನು ವಾಣಿಶ್ರೀ (22) ಎಂದು ಗುರುತಿಸಲಾಗಿದೆ. ಬಿಜೈ ಕಡೆಯಿಂದ ಬರುತ್ತಿದ್ದ ಸ್ಕೂಟರಿಗೆ ಕದ್ರಿ ಕಡೆಯಿಂದ ಆಗಮಿಸುತ್ತಿದ್ದ ಕಾರು ಕದ್ರಿ ಕಂಬಳ ಸರ್ಕಲ್ ಬಳಿ ಡಿಕ್ಕಿಯಾಗಿದೆ. ಕಾರನ್ನು ಚಲಾಯಿಸುತ್ತಿದ್ದ ವೃದ್ಧ ವ್ಯಕ್ತಿ ಕಾರನ್ನು ನಿಲ್ಲಿಸಲಾಗದೆ ತಡಬಡಾಯಿಸಿದ್ದಾನೆ. ಕಾರಿನ ಮುಂಭಾಗದ ಬಾನೆಟ್ಟಿಗೆ ಬಿದ್ದ ಯುವತಿ ಬಳಿಕ ಉರುಳಿಕೊಂಡು ಮುಂದೆ ರಸ್ತೆಗೆ ಬಿದ್ದಿದ್ದಾಳೆ. ಆದರೆ, ಕಾರು ನೇರವಾಗಿ ಮುಂದಕ್ಕೆ ಬಂದಿದ್ದು ನೆಲಕ್ಕೆ ಬಿದ್ದ ಯುವತಿಯನ್ನು ತಳ್ಳಿಕೊಂಡೇ ಬಂದಿದೆ. ಯುವತಿಯ ದೇಹ ಕಾರಿನ ಮುಂಭಾಗದ ಎರಡು ಚಕ್ರದ ಮಧ್ಯೆ ಸಿಕ್ಕಿದ್ದು ಕೂಡಲೇ ಅಲ್ಲಿದ್ದ ಜನ ಕಾರಿಗೆ ಬಡಿದು ನಿಲ್ಲಿಸಿದ್ದಾರೆ. 2- 3 ಮೀಟರ್ ಉದ್ದಕ್ಕೆ ಎಳೆದೊಯ್ದ ಕಾರು ಚಾಲಕ ಬಳಿಕ ಯುವಕರ ಬೊಬ್ಬೆ ಕೇಳಿ ನಿಲ್ಲಿಸಿದ್ದಾನೆ. ಈ ಘಟನೆಯ ಪೂರ್ತಿ ದೃಶ್ಯ ಅಲ್ಲಿನ ಕಟ್ಟಡವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಾರು ಚಾಲಕನ ಅವಾಂತರವನ್ನು ಹಿಡಿದಿಟ್ಟಿದೆ.
ಕಾರಿನ ಅಡಿಭಾಗದಲ್ಲಿ ಸಿಕ್ಕಿಕೊಂಡಿದ್ದ ಯುವತಿಯನ್ನು ಬಳಿಕ ಸ್ಥಳೀಯರು ಮತ್ತು ಒಬ್ಬ ಪೊಲೀಸ್ ಸಿಬಂದಿ ಸೇರಿ ಕಾರನ್ನು ಹಿಡಿದು ಎತ್ತುವ ಮೂಲಕ ಹೊರಕ್ಕೆಳೆದಿದ್ದಾರೆ.
Live Video:
ಇಡೀ ಘಟನೆ ಕಾರು ಚಾಲಕನ ಅಚಾತುರ್ಯವನ್ನು ಹಿಡಿದಿಟ್ಟಿದೆ. ಮುಂಭಾಗದಲ್ಲಿ ಯಾವ ವಾಹನ ಬರುತ್ತಿದೆ ಎಂದು ಕಾಣದೆ ಕಾರು ಚಲಾಯಿಸುವ ವೃದ್ಧ ಚಾಲಕರಿಂದಾಗುವ ಅನಾಹುತಕ್ಕೆ ಕನ್ನಡಿ ಹಿಡಿದಿದೆ.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
24-08-26 01:13 pm
HK News Staffer
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
24-08-26 01:03 pm
HK News Staffer
ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ; ಹೆತ್ತ ತಂ...
24-08-26 12:06 pm
ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ಗಳನ್ನು ರವಾನ...
24-08-26 11:05 am
ಹೊಳೆನರಸೀಪುರ ; ಟ್ರ್ಯಾಕ್ಟರ್ ಕೀಯನ್ನು ತಿರುಗಿಸಿದ ಮ...
23-08-26 05:20 pm
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm