ಬ್ರೇಕಿಂಗ್ ನ್ಯೂಸ್
05-12-20 04:54 pm Mangalore Correspondent ಕರಾವಳಿ
ಮಂಗಳೂರು, ಡಿ.5: ಕೋವಿಡ್ 19 ನಿಂದಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಮೊಟಕುಗೊಂಡಿದ್ದ ಯಕ್ಷಗಾನ ಪ್ರದರ್ಶನಕ್ಕೆ ಮರು ಚಾಲನೆ ದೊರೆತಿದೆ. ಡಿಸೆಂಬರ್ ತಿಂಗಳಲ್ಲಿ ಬಹುತೇಕ ಮೇಳಗಳು ಗೆಜ್ಜೆ ಕಟ್ಟಲು ತಯಾರಿ ನಡೆಸಿವೆ.
ಕೋವಿಡ್ ಆತಂಕದ ನಡುವೆಯೇ ಮೇಳಗಳು ಪೌರಾಣಿಕ ಸೇರಿದಂತೆ ಹೊಸ ಪ್ರಸಂಗಗಳನ್ನು ರೂಪಿಸಿದ್ದು ಕಲಾವಿದರು ತಿರುಗಾಟಕ್ಕೆ ಸಜ್ಜಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ನಲವತ್ತಕ್ಕೂ ಅಧಿಕ ಮೇಳಗಳು 6 ತಿಂಗಳ ಕಾಲ ತಿರುಗಾಟಕ್ಕೆ ಅಣಿಯಾಗಿವೆ. ತೆಂಕುತಿಟ್ಟಿನ ಹೊಸ ಮೇಳ ಪಟ್ಲ ಸತೀಶ್ ಶೆಟ್ಟಿ ಸಂಚಾಲಕತ್ವದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಬುಕ್ಕಿಂಗ್ ನಡೆಯುತ್ತಿದ್ದು , ಪತ್ತನಾಜೆ ತನಕವೂ ಈ ಮೇಳದ ಯಕ್ಷಗಾನ ಭರ್ತಿಯಾಗಿದೆ. ಇತರ ಮೇಳಗಳು ಸಿದ್ಧತೆಗಳನ್ನು ನಡೆಸಿದ್ದು ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ರಂಗಸ್ಥಳಕ್ಕೆ ಇಳಿಯಲಿದೆ.

ವಿಶೇಷ ಅಂದ್ರೆ ಈ ಬಾರಿ ಯಕ್ಷಗಾನ ಮೇಳಗಳು ಮತ್ತು ಕಲಾವಿದರು ಹೊಸತನಕ್ಕೆ ತೆರೆದುಕೊಂಡಿದ್ದಾರೆ. ಫೇಸ್ಬುಕ್ ಲೈವ್ ಯಕ್ಷಗಾನ ಪ್ರಸರಣಕ್ಕೆ ಹೊಸ ವೇದಿಕೆ ಒದಗಿಸಿರುವುದು ಈ ಬಾರಿಯ ವಿಶೇಷ. ಸದ್ಯ ಧರ್ಮಸ್ಥಳ, ಮಂದಾರ್ತಿ ಹಾಗೂ ಪಾವಂಜೆ ಮೇಳದ ಆಟ ಫೇಸ್ ಬುಕ್ ವಾಟ್ಸಪ್ ನಲ್ಲಿ ನೇರ ಪ್ರಸಾರ ಕಾಣುತ್ತಿದ್ದು ದಿನಕ್ಕೆ ಸಾವಿರಕ್ಕೂ ಅಧಿಕ ವೀಕ್ಷಕರು ನೋಡುತ್ತಿದ್ದಾರೆ. ಮೊಬೈಲ್ನಲ್ಲಿ ಮನೆಯಲ್ಲಿ ಕುಳಿತು ಆಟ ನೋಡುವ ಈ ಹೊಸ ವಿಧಾನ ಕೋವಿಡ್ ಆತಂಕದ ಮಧ್ಯೆ ಹೊಸ ಬದಲಾವಣೆಯಾಗಿದೆ.


ಧರ್ಮಸ್ಥಳ ಮೇಳದ ಸೇವೆಯಾಟದ ಆರಂಭವಾಗಿದ್ದು ಸದ್ಯ ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬಪ್ಪನಾಡು ಮೇಳದ ಡಿಸೆಂಬರ್ ಒಂದರಿಂದ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 6 ಮೇಳಗಳ ಸೇವೆ ಡಿಸೆಂಬರ್ 9ರಿಂದ ಆರಂಭಗೊಳ್ಳಲಿದೆ.


ಹನುಮಗಿರಿ ಮೇಳದ ಡಿಸೆಂಬರ್ 22ರಿಂದ, ಸಸಿಹಿತ್ಲು ಭಗವತಿ ಮೇಳ ಡಿಸೆಂಬರ್ 17, ದೇಂತಡ್ಕ ಮೇಳ ಡಿಸೆಂಬರ್ 4, ಸುಂಕದಕಟ್ಟೆ ಡಿಸೆಂಬರ್ ನಾಲ್ಕರಂದು ತಿರುಗಾಟ ಆರಂಭಿಸಲಿವೆ. ಬಡಗಿನ ಮಂದಾರ್ತಿಯ 5 ಮೇಳಗಳ ಕಲಾವಿದರು ನಿಗದಿಯಂತೆ ಸದ್ಯ ಕ್ಷೇತ್ರದಲ್ಲಿ ಹರಕೆ ಆಟ ಪ್ರದರ್ಶಿಸಿದ್ದಾರೆ. ಹಾಲಾಡಿ ಮೇಳ ಡಿಸೆಂಬರ್ 18, ಮಾರಣಕಟ್ಟೆ ಮೇಳ ಡಿಸೆಂಬರ್ ಐದರಂದು ಹೊರಡಲಿದೆ ಎಂದು ಮೇಳದ ಯಜಮಾನ ಕರುಣಾಕರ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಪಳ್ಳಿ ಕಿಶನ್ ಹೆಗ್ಡೆ ಯಜಮಾನಿಕೆಯ ಸೌಕೂರು ಮೇಳ ಡಿಸೆಂಬರ್ 18 ರಿಂದ, ಹಿರಿಯಡ್ಕ ಮೇಳ ಜನವರಿ ಮೊದಲ ವಾರದಲ್ಲಿ ಹಾಗೂ ಮಡಾಮಕ್ಕಿ ಮೇಳ ಜನವರಿಯಲ್ಲಿ ಪ್ರದರ್ಶನ ಆರಂಭಿಸಲಿದೆ.
Video:
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am