ಬ್ರೇಕಿಂಗ್ ನ್ಯೂಸ್
30-01-24 10:08 pm Mangalore Correspondent ಕರಾವಳಿ
ಮಂಗಳೂರು, ಜ.30: ಇಡೀ ಜಗತ್ತಿನಲ್ಲಿ ಜನರು ಮೋದಿ ಮತ್ತು ಭಾರತವನ್ನು ಗಮನಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಈ ದೇಶದ ಭವಿಷ್ಯ ರೂಪಿಸುವ ಮಹತ್ತರ ಘಟ್ಟವಾಗಿದ್ದು, ಯಾರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂಬ ಕುತೂಹಲದಲ್ಲಿ ಇಡೀ ಜಗತ್ತು ಇದೆ. ಯಾಕಂದ್ರೆ, ವಿವೇಕಾನಂದರ ಬಳಿಕ ಭಾರತವನ್ನು ಇಡೀ ಜಗತ್ತು ಆಕರ್ಷಿಸುವಂತೆ ಮಾಡಿದ್ದು ಮೋದಿ ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ಸತೀಶ್ ಕುಂಪಲ ಪದಗ್ರಹಣ ಸಮಾರಂಭದಲ್ಲಿ ವಿಜಯೇಂದ್ರ ಭಾಷಣ ಮಾಡಿದರು. ದೇಶದ ಭವಿಷ್ಯ ಜನರ ಕೈಯಲ್ಲಿದೆ. ಮೋದಿ ಮೂರನೇ ಬಾರಿಗೆ ಈ ದೇಶದ ಪ್ರಧಾನಿಯಾಗುತ್ತಾರೆ. ಅದನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ. ಹಾಗಂತ, ಕಾರ್ಯಕರ್ತರು ಮೈಮರೆಯುವುದು ಬೇಡ. ಪ್ರತಿ ಲೋಕಸಭೆ ಕ್ಷೇತ್ರವನ್ನೂ ಅತಿ ಹೆಚ್ಚು ಅಂತರದಿಂದ ಗೆಲ್ಲುವುದು ನಮ್ಮ ಗುರಿಯಾಗಬೇಕು. ಯಾವುದೇ ಕ್ಷಣದಲ್ಲಿ ಚುನಾವಣೆ ಬಂದರೂ ನಾವು ಎದುರಿಸಲು ಸಜ್ಜಾಗಿರಬೇಕು ಎಂದು ಹೇಳಿದರು.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸಿಗೆ ಜನ ತಕ್ಕ ಉತ್ತರ ನೀಡಿದ್ದಾರೆ. ತಮ್ಮದೇ ಗೆಲುವು ಎಂದು ಬೀಗುತ್ತಿದ್ದ ಪಕ್ಷಗಳಿಗೆ ಪ್ರತ್ಯುತ್ತರ ನೀಡಿದ್ದಾರೆ. ಈಗ ದೇಶದ ಆಡಳಿತದ ಕನಸು ಕಾಣುತ್ತಿರುವ ಐಎನ್ ಡಿಐಎ ಒಕ್ಕೂಟದಲ್ಲಿ ದಿನಕ್ಕೊಂದರಂತೆ ಒಂದೊಂದೇ ದಳಗಳು ಉದುರತೊಡಗುತ್ತಿವೆ. ಲೋಕಸಭೆ ಚುನಾವಣೆ ಹೊತ್ತಿಗೆ ಕಾಂಗ್ರೆಸಿನಲ್ಲಿರುವ ನಾಯಕರೇ ಹೊರಬರುತ್ತಾರಾ ನೋಡಬೇಕು ಎಂದು ವ್ಯಂಗ್ಯವಾಡಿದರು.
ರಾಜ್ಯಾಧ್ಯಕ್ಷನಾಗಿ ಆದೇಶ ಬಂದ ಕೂಡಲೇ ತಂದೆಯವರು ಒಂದು ಮಾತು ಹೇಳಿದ್ದರು. ಹಿರಿಯರು ನಿನ್ನ ಮೇಲೆ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಇನ್ನು ಒಂದು ದಿನವೂ ಮನೆಯಲ್ಲಿ ಕೂರಬಾರದು, 28ಕ್ಕೆ 28 ಲೋಕಸಭೆ ಕ್ಷೇತ್ರ ಗೆಲ್ಲಬೇಕು ಎಂದಿದ್ದಾರೆ. ತಂದೆಯ ಸಂಕಲ್ಪ ಈಡೇರಿಸಲು ರಾತ್ರಿ, ಹಗಲು ಎನ್ನದೆ ಓಡಾಟ ಮಾಡುತ್ತಿದ್ದೇನೆ ಎಂದು ಹೇಳಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೂರು ತಿಂಗಳು ಆಗಿಲ್ಲ. ಅಷ್ಟರಲ್ಲಿ ಬೆಂಗಳೂರಿನಲ್ಲಿ ಐಟಿ ದಾಳಿಯಾಗಿ 150 ಕೋಟಿ ನಗದು ಸಿಕ್ಕಿತ್ತು. ಆದರೆ ಕಾಂಗ್ರೆಸ್ ನಾಯಕರು ಅದು ಕಪ್ಪು ಹಣ, ಆರೋಪಿಗಳನ್ನು ಅರೆಸ್ಟ್ ಮಾಡಿ ಅಂತ ಹೇಳಿಲ್ಲ. ಅದರಲ್ಲೇ ಅದು ಯಾರ ಹಣ ಅನ್ನೋದು ಗೊತ್ತಾಗಿತ್ತು ಎಂದರು.
ಮಾತೆತ್ತಿದರೆ ನಾವು ದಲಿತರ ಪರ ಎಂದು ಹೇಳುವ ಕಾಂಗ್ರೆಸ್ ನಾಯಕರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ, ಅವರು ಸತ್ತಾಗ ಶವ ಸಂಸ್ಕಾರಕ್ಕು ಜಾಗ ಕೊಡದೇ ಸತಾಯಿಸಿದ್ದು ಕಾಂಗ್ರೆಸ್. ಆದರೆ ಮೋದಿಯವರು ಲಂಡನ್ನಲ್ಲಿ ಹೋಗಿ ಅಂಬೇಡ್ಕರ್ ಇದ್ದ ಜಾಗವನ್ನು ಮ್ಯೂಸಿಯಂ ಆಗುವಂತೆ ಮಾಡಿದ್ದಾರೆ. ಗುಜರಾತ್ ಸೇರಿ ದೇಶದ ಐದು ಕಡೆ ಅಂಬೇಡ್ಕರ್ ಸಂಬಂಧಿಸಿದ ಜಾಗಗಳನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸಿಗರು ದಲಿತ ಎಂದಿದ್ದು ಬಿಟ್ಟರೆ ಮಾಡಿದ್ದೇನು ಎಂದು ಪ್ರಶ್ನಿಸಿದರು.
loksabha election 2024 will be a benchmark, world is looking at Modi says B Y Vijayendra in Mangalore.For the past 5-6 months, the whole country and other countries as well are curious about the results in the upcoming Lok Sabha elections because of Prime Minister Narendra Modi's vision. Eight months back during the elections, whether it was our mistake or people's mistake, or Congress misled people, which they were successful in, people taught a lesson to Congress.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 04:05 pm
Mangalore Correspondent
Loudspeaker, Punjalkatte,Farangipete: ಪುಂಜಾಲ...
28-08-25 02:51 pm
SIT, Sujata Bhat, Dharmasthala Case: ಕೇಸ್ ಹಿಂ...
28-08-25 11:27 am
Pastor John Shamine, Madan Bugadi, IHRACSJC:...
27-08-25 11:02 pm
FIR, Chinnayya, Dharmasthala, Mahesh Thimarod...
27-08-25 09:19 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm