ಬ್ರೇಕಿಂಗ್ ನ್ಯೂಸ್
15-12-23 11:58 am Mangalore Correspondent ಕರಾವಳಿ
ಮಂಗಳೂರು, ಡಿ.15: ಬಂದರು ನಗರಿ ಮಂಗಳೂರಿನಿಂದ ಹೊರಟಿದ್ದ ಹಡಗಿನ ಮೇಲೆ ಯೆಮೆನ್ ದೇಶದ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ವೈಮಾನಿಕ ಇಂಧನವನ್ನು ಹೊತ್ತು ನೆದರ್ಲೆಂಡ್ ಅಥವಾ ಸ್ವೀಡನ್ ಕಡೆಗೆ ತೆರಳುತ್ತಿದ್ದ ತೈಲ ಟ್ಯಾಂಕರುಗಳಿದ್ದ ಹಡಗಿನ ಮೇಲೆ ಯೆಮೆನ್ ಸಮೀಪ ಕ್ಷಿಪಣಿ ದಾಳಿ ನಡೆಸಲಾಗಿದೆ.
ಮಂಗಳೂರಿನ ಎಂಆರ್ಪಿಎಲ್ನಲ್ಲಿ ಉತ್ಪಾದನೆಯಾದ ವೈಮಾನಿಕ ಇಂಧನವನ್ನು ಖರೀದಿಸಿ ನೆದರ್ಲೆಂಡ್ಗೆ ಸಾಗಾಟ ಮಾಡುತ್ತಿದ್ದಾಗ ಡಿ.11ರಂದು ಘಟನೆ ಸಂಭವಿಸಿದೆ. ಹಡಗಿಗೆ ಡಿ. 6ರಂದು ಮಂಗಳೂರಿನಲ್ಲಿ ತೈಲ ಸಂಗ್ರಹ ಮಾಡಲಾಗಿತ್ತು. ಹೌತಿ ಬಂಡುಕೋರರ ಗುರಿ ತಪ್ಪಿದ ಪರಿಣಾಮ ಹಡಗಿಗೆ ಯಾವುದೇ ಅಪಾಯವಾಗಿಲ್ಲ. ಹಡಗಿನಲ್ಲಿ ಶಸ್ತ್ರ ಸಜ್ಜಿತ ಸಿಬಂದಿಯಿದ್ದು ಮರು ದಾಳಿ ನಡೆಸಿದ್ದಾರೆ ಎಂದು ಹಡಗು ಕಂಪನಿ ತಿಳಿಸಿದೆ.
ಯೆಮೆನ್ ದೇಶದ ಹೌತಿ ಬಂಡುಕೋರರ ಅಧೀನದಲ್ಲಿರುವ ಬಾಬ್ ಎಲ್-ಮಂಡೆಬ್ ಕರಾವಳಿ ಭಾಗದಿಂದ ಕ್ಷಿಪಣಿ ದಾಳಿ ನಡೆದಿದೆ. ಸುಯೆಜ್ ಕಾಲುವೆ ಮೂಲಕ ಐರೋಪ್ಯ ದೇಶಗಳತ್ತ ಸಾಗುವ ತೈಲ ಟ್ಯಾಂಕರ್ ಹೊಂದಿರುವ ಹಡಗಿನ ಮೇಲೆ ಮೊದಲ ಬಾರಿಗೆ ಇಂತಹ ದಾಳಿ ನಡೆದಿದೆ. ಹೌತಿ ಬಂಡುಕೋರರಿಗೆ ಸೇರಿದ ಡ್ರೋಣ್ ಅನ್ನು ಅಮೆರಿಕದ ಮಿಲಿಟರಿ ಪಡೆ ಹೊಡೆದುರುಳಿಸಿದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಹಡಗು ಆರ್ಡ್ ಮೋರ್ ಶಿಪ್ಪಿಂಗ್ ಕಾರ್ಪೊರೇಶನ್ ಎಂಬ ಕಂಪನಿಗೆ ಸೇರಿದ್ದಾಗಿದೆ. ಜೆಟ್ ಇಂಧನವು ಶೆಲ್ ಮತ್ತು ಭಾರತದ ಒಎನ್ ಜಿಸಿ ಜಂಟಿ ಸಹಭಾಗಿತ್ವದ ಕಂಪನಿಗೆ ಸೇರಿದ್ದು ಐರೋಪ್ಯ ದೇಶಗಳಿಗೆ ಪೂರೈಸುವ ದೃಷ್ಟಿಯಿಂದ ಸಾಗಿಸುತ್ತಿದ್ದರು. ಒಂದೆಡೆ ಇಸ್ರೇಲ್ ವಿರುದ್ಧ ಹೌತಿ ಬಂಡುಕೋರರು ದಾಳಿ ಬೆದರಿಕೆ ಹಾಕಿರುವಾಗಲೇ ಕ್ಷಿಪಣಿ ದಾಳಿ ನಡೆದಿರುವುದು ಆತಂಕ ಮೂಡಿಸಿದೆ.
ಮಂಗಳೂರಿನ ಎಂಆರ್ಪಿಎಲ್ನಿಂದ ಶೆಲ್ ಸಹಿತ ವಿವಿಧ ಕಂಪೆನಿಯವರು ಜೆಟ್ ತೈಲವನ್ನು ಖರೀದಿಸಿ ಹಡಗಿನಲ್ಲಿ ಸಾಗಾಟ ಮಾಡುತ್ತಾರೆ. ಬೇರೆ ಬೇರೆ ದೇಶಗಳಿಗೆ ಮಾರುಕಟ್ಟೆ ಆಧಾರಿತವಾಗಿ ಸಾಗಿಸಿ ಮಾರಾಟ ಮಾಡುತ್ತಾರೆ ಎಂದು ಎಂಆರ್ಪಿಎಲ್ ಮೂಲಗಳು ತಿಳಿಸಿವೆ.
In a dramatic incident near the key Bab el-Mandeb Strait, an oil tanker hailing from Mangalore, India, managed to evade two missiles fired by Yemen's Houthi rebels. The Marshall Islands-flagged tanker, Ardmore Encounter, was carrying a shipment of Indian-manufactured jet fuel destined for either Rotterdam in the Netherlands or Gavle, Sweden, reported The Associated Press.
28-05-26 06:18 pm
HK News Staffer
CM Siddaramaiah, Supporters crying, Kaveri: ಸ...
28-05-26 05:31 pm
ರಾಜ್ಯಸಭೆಗೆ ಹೋಗಲ್ಲ, ರಾಜ್ಯದಲ್ಲೇ ಸಕ್ರಿಯ ರಾಜಕಾರಣದ...
28-05-26 04:34 pm
CM Siddaramaiah resigns: ಸಿಎಂ ಸ್ಥಾನಕ್ಕೆ ಸಿದ್ದ...
28-05-26 03:24 pm
'ಮಹಾನಾಯಕ' ಸಿದ್ದರಾಮಯ್ಯ ಯುಗಾಂತ್ಯ.? ಇಂದೇ ಸಿಎಂ ಸ್...
28-05-26 10:56 am
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
28-05-26 09:44 pm
HK News Desk
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am
ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಇಬ್ಬರು ನಟ...
27-05-26 08:34 pm
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm