ಬ್ರೇಕಿಂಗ್ ನ್ಯೂಸ್
13-12-23 10:42 pm Mangalore Correspondent ಕರಾವಳಿ
ಮಂಗಳೂರು, ಡಿ.13: ಶಬರಿಮಲೆಯಲ್ಲಿ ಈ ಬಾರಿ ಮಂಡಲ ಪೂಜೆಯ ಸಂದರ್ಭದಲ್ಲಿಯೇ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಹೀಗಾಗಿ ಶಬರಿಮಲೆಗೆ ತೆರಳುವ ಪಂಪಾ ನದಿಯ ತೀರದಲ್ಲೇ ಭಕ್ತರಿಗೆ ಪ್ರವೇಶಕ್ಕೆ ತೊಡಕಾಗಿದ್ದು, ಮಂಗಳವಾರ ಭಕ್ತರು ದಿಢೀರ್ ಆಗಿ ಪೊಲೀಸರ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು ಭಾಗದ ಭಕ್ತರು ಹೆಚ್ಚಿದ್ದರಿಂದ ಭಕ್ತರನ್ನು ಸರಾಗವಾಗಿ ಹೋಗಲು ಬಿಡದೆ ಅಲ್ಲಲ್ಲಿ ಕೂಡಿ ಹಾಕಲಾಗಿತ್ತು. ಎರುಮೇಲಿ ಬೆಟ್ಟದಲ್ಲಿ ತಿರುಪತಿಯಲ್ಲಿ ಹಾಲ್ಗಳಲ್ಲಿ ಕೂಡಿ ಹಾಕುವಂತೆ ಅಲ್ಲಲ್ಲಿ ಭಕ್ತರನ್ನು ಗಂಟೆಗಳ ಕಾಲ ಕೂಡಿ ಹಾಕುತ್ತಿದ್ದರು. ಇದರಿಂದ ಸನ್ನಿಧಾನ ತಲುಪಲು ತುಂಬ ಪ್ರಯಾಸ ಪಡಬೇಕಾಯಿತು ಎಂದು ಸಿದ್ಧಕಟ್ಟೆಯಿಂದ ರೈಲಿನಲ್ಲಿ ಶಬರಿಮಲೆಗೆ ಹೋಗಿ ಬಂದ ಗೋಪಾಲ್ ತಿಳಿಸಿದ್ದಾರೆ.
ನಾವು ಈ ಸಲ 14 ವರ್ಷ ಶಬರಿಮಲೆಗೆ ಹೋಗಿದ್ದೆವು. ಪ್ರತಿ ವರ್ಷ ಮಾಲೆ ಹೋಗಿ ಹೋಗುತ್ತಿದ್ದರೂ, ಈ ಬಾರಿಯಷ್ಟು ಜನರನ್ನು ಮಂಡಲದ ಸಂದರ್ಭದಲ್ಲಿ ನೋಡಿರಲಿಲ್ಲ. ಯಾವಾಗಲೂ ಮಕರ ಬೆಳಕು ಸಂದರ್ಭದಲ್ಲಿ ಹೋಗುತ್ತಿದ್ದೆವು. ಈ ಬಾರಿ ಮಂಡಲ ಪೂಜೆಗೆ ಹೋಗಿದ್ದೆವು. ಸೋಮವಾರ, ಮಂಗಳವಾರ ಭಾರೀ ರಶ್ ಇತ್ತು. ಹೆಚ್ಚಿನ ಭಕ್ತರು ಆಂಧ್ರ ಮತ್ತು ತಮಿಳುನಾಡಿನವರೇ ಇದ್ದರು. ಅಲ್ಲಲ್ಲಿ ಕೂಡಿ ಹಾಕಿ ಹೋಗಲು ಬಿಡುತ್ತಿದ್ದುದೇ ಸಮಸ್ಯೆ ಆಗಿತ್ತು. ಆ ರೀತಿ ಯಾಕೆ ಮಾಡುತ್ತಿದ್ದರು ಗೊತ್ತಾಗಲ್ಲ. ಈ ಹಿಂದೆಯೂ ಮಕರದ ವೇಳೆ ಇಷ್ಟೇ ಜನರು ಸೇರುತ್ತಿದ್ದರು. ತೊಂದರೆ ಏನೂ ಆಗುತ್ತಿರಲಿಲ್ಲ ಎಂದು ಸಿದ್ಧಕಟ್ಟೆಯಿಂದ ಮಲೆಗೆ ತೆರಳಿರುವ ಸಂತೋಷ್ ಹೇಳುತ್ತಾರೆ.
ಮಲಯಾಳಂ ಮನೋರಮಾ ವರದಿ ಪ್ರಕಾರ, ಕೇರಳ, ತಮಿಳುನಾಡು, ಆಂಧ್ರ ಭಾಗದ ಭಕ್ತರು ಹೆಚ್ಚಿದ್ದರು. ಎರುಮೇಲಿ, ಪಂಪಾದಲ್ಲಿಯೇ ಪೊಲೀಸರು ಅಡ್ಡ ಹಾಕಿದ್ದರಿಂದ ರಶ್ ಆಗಿ ಹೆಚ್ಚಿನ ಜನ ಅಲ್ಲಿಂದಲೇ ಹಿಂತಿರುಗಿದ್ದಾರೆ. ನೂರಾರು ಮಂದಿಯನ್ನು ಏಟ್ಟುಮಾನೂರು ದೇವಸ್ಥಾನ ಬಳಿ ನಿಲ್ಲಿಸಲಾಗಿತ್ತು. ಒಂದು ದಿನ ಕಾದರೂ ಪಂಪೆಗೆ ಹೋಗಲು ಬಿಡದೇ ಇದ್ದುದರಿಂದ ಸಿಟ್ಟಾದ ಭಕ್ತರು ನಿರಾಸೆಗೊಂಡು ಅಲ್ಲಿಂದಲೇ ಮಾಲೆ ತೆಗೆದು ನಿರ್ಗಮಿಸಿದ್ದಾರೆ. ಶಬರಿಮಲೆಯಲ್ಲಿ ಅವ್ಯವಸ್ಥೆ, ಸಮಸ್ಯೆ ಆಗಿರುವ ಬಗ್ಗೆ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್ ಪ್ರತಿಕ್ರಿಯಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕುಯ ಯಾರಿಂದ ಈ ಸಮಸ್ಯೆ ಆಗಿದೆ ಎನ್ನುವುದನ್ನು ಪತ್ತೆ ಮಾಡಬೇಕು ಎಂದಿದ್ದಾರೆ.
A large number of devotees gathered at Sabarimala during the Mandala Pooja this year. On Tuesday, devotees staged a protest against the police on the banks of the Pampa river, which leads to Sabarimala.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm