ಬ್ರೇಕಿಂಗ್ ನ್ಯೂಸ್
12-12-23 09:17 pm Mangalore Correspondent ಕರಾವಳಿ
ಮಂಗಳೂರು, ಡಿ.12: ಮಂಗಳಾ ಸ್ಟೇಡಿಯಂ ಆವರಣದಲ್ಲಿರುವ ಈಜು ಕೊಳದಲ್ಲಿ ಯುವಕನೊಬ್ಬ ಈಜುತ್ತಿದ್ದಾಗಲೇ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಹರ್ಯಾಣದ ಗುರ್ಗಾಂವ್ ಮೂಲದ ಅಭಿಷೇಕ್ ಆನಂದ್ (30) ಎನ್ನುವ ಯುವಕ ಮೃತ ವ್ಯಕ್ತಿ. ಸಂಜೆ 5 ಗಂಟೆಯ ವೇಳೆಗೆ ಅಭಿಷೇಕ್ ಈಜು ಕೊಳಕ್ಕೆ ಬಂದಿದ್ದು ಟಿಕೇಟ್ ಪಡೆದು ಈಜಲು ಮುಂದಾಗಿದ್ದ. ಇದೇ ವೇಳೆ, ಅಭಿಷೇಕ್ ಈಜು ಬಾರದೆ ನೀರಿನಲ್ಲಿ ಮುಳುಗಡೆಯಾಗಿದ್ದಾನೆ ಎನ್ನಲಾಗುತ್ತಿದೆ.
ಆರು ಗಂಟೆಯ ವೇಳೆಗೆ ಮಕ್ಕಳು ಈಜುತ್ತಿದ್ದಾಗ ನೀರಿನ ಅಡಿಯಲ್ಲಿ ಮುಳುಗಿದ್ದ ವ್ಯಕ್ತಿಯನ್ನು ಗಮನಿಸಿ ಕೋಚ್ ಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆತನನ್ನು ನೀರಿನಿಂದ ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಲು ಯತ್ನಿಸಿದ್ದಾರೆ. ಅಲ್ಲದೆ, ವೆನ್ಲಾಕ್ ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಯುವಕ ಮೃತಪಟ್ಟಿದ್ದ. ಅಭಿಷೇಕ್ ಮಂಗಳೂರಿನಲ್ಲಿ ಗ್ಯಾರೇಜ್ ಒಂದರಲ್ಲಿ ಕೆಲಸಕ್ಕಿದ್ದು, ಕೆಲವೊಮ್ಮೆ ಈಜು ಕೊಳಕ್ಕೆ ಬರುತ್ತಿದ್ದ ಎನ್ನುವ ಮಾಹಿತಿ ಅಲ್ಲಿನ ಸಿಬಂದಿಯಿಂದ ತಿಳಿದುಬಂದಿದೆ.
ಅಭಿಷೇಕ್ ಮಂಗಳೂರಿನಲ್ಲಿ ಯಾವುದೇ ಸಂಬಂಧಿಕರನ್ನು ಹೊಂದಿಲ್ಲ. ಹೀಗಾಗಿ ಆತನ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮಹಾನಗರ ಪಾಲಿಕೆಯಿಂದ ನಿರ್ವಹಿಸಲ್ಪಡುವ ಮಂಗಳಾ ಈಜು ಕೊಳದಲ್ಲಿ ಸಾರ್ವಜನಿಕರು, ಮಕ್ಕಳು ಈಜುತ್ತಿರುವಾಗ ನೋಡಿಕೊಳ್ಳಲು ಸಿಬಂದಿ ಇರುತ್ತಾರೆ. ಯಾವುದೇ ಅಪಾಯಗಳಾದಲ್ಲಿ ಮುಂಜಾಗ್ರತೆ ವಹಿಸಲು ಲೈಫ್ ಗಾರ್ಡ್ ಇರುತ್ತಾರೆ. ಆದರೂ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಸಿಬಂದಿ ನಿರ್ಲಕ್ಷ್ಯ ಎನ್ನಬೇಕಷ್ಟೆ. ಸಾರ್ವಜನಿಕ ಪ್ರವೇಶ ಇರುವ ಸಂಜೆ ಹೊತ್ತಿಗೆ ಬಹಳಷ್ಟು ಮಂದಿ ಈಜು ಕಲಿಯಲು ಬರುತ್ತಿದ್ದು ಟಿಕೆಟ್ ಪಡೆದು ತಮ್ಮಷ್ಟಕ್ಕೆ ಈಜಲು ಪ್ರಯತ್ನ ಪಡುತ್ತಾರೆ. ಇಂಥ ಸಂದರ್ಭದಲ್ಲಿಯೇ ಅಭಿಷೇಕ್ ನೀರಿನಾಳದಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆಯಿದೆ.
Gurgaon, Haryana native drowns at Mangala swimming pool in Mangalore.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
09-04-26 01:03 pm
HK News Staffer
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm