ಬ್ರೇಕಿಂಗ್ ನ್ಯೂಸ್
11-12-23 10:36 pm Mangalore Correspondent ಕರಾವಳಿ
ಉಳ್ಳಾಲ, ಡಿ.11: ಮಫ್ತಿಯಲ್ಲಿ ಡ್ರೆಸ್ಸು, ಸೊಂಟಕ್ಕೆ ಪೊಲೀಸ್ ಇಲಾಖೆಯ ವಾಕಿ ಟಾಕಿ.. ಉಳ್ಳಾಲ ಪೊಲೀಸ್ ಠಾಣೆಯ ಪಿಎಸ್ ಐ ಧನರಾಜ್ ಹೆಲ್ಮೆಟ್ ಧರಿಸದೆ, ಮಫ್ತಿಯಲ್ಲಿದ್ದರೂ ಪೊಲೀಸ್ ವಾಕಿಟಾಕಿ ಹಾಕ್ಕೊಂಡು ಹೆದ್ದಾರಿಯಲ್ಲಿ ರಾಜಾರೋಷವಾಗಿ ಟೂ ವೀಲರ್ ಡ್ರೈವ್ ಮಾಡಿದ್ದು, ಕಾನೂನು ಪಾಲಕರೇ ಕಾನೂನು ಭಂಜನೆ ಮಾಡಿ ಸಿಕ್ಕಿಬಿದ್ದಿದ್ದಾರೆ.
ಸಾಮಾನ್ಯ ಜನರು ಹೆಲ್ಮೆಟ್ ಹಾಕದೇ ಇದ್ದರೆ ದಂಡ ವಿಧಿಸುವ ಪೊಲೀಸ್ ಅಧಿಕಾರಿಯೇ ತಮಗೆ ಕಾನೂನು ಪ್ರತ್ಯೇಕ ಇದೆಯೋ ಎನ್ನುವಂತೆ ವರ್ತಿಸಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಉಳ್ಳಾಲ ಠಾಣೆ ಪಿಎಸ್ಐ ಧನರಾಜ್ ಮಫ್ತಿಯಲ್ಲಿ ನೇತ್ರಾವತಿ ಸೇತುವೆಯಿಂದ ತೊಕ್ಕೊಟ್ಟಿನ ಕಡೆಗೆ ದ್ವಿಚಕ್ರ ವಾಹನ ಚಲಾಯಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯ ಸೊಂಟದಲ್ಲಿ ವಾಕಿ ಟಾಕಿ ಇದ್ದುದನ್ನ ಕಂಡ ಇತರೇ ವಾಹನ ಸವಾರರು ಈತ ಪೊಲೀಸ್ ಎಂದು ಖಾತರಿ ಪಡಿಸಿ ಫೋಟೊ ಕ್ಲಿಕ್ಕಿಸಿದ್ದಾರೆ.

ಪಿಎಸ್ ಐ ಧನರಾಜ್ ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಗಸ್ತಿನಲ್ಲಿರುವಾಗ ಸಂಚಾರಿ ಕಾನೂನು ಉಲ್ಲಂಘಿಸುವ ವಾಹನ ಸವಾರರಿಗೆ ಮುಲಾಜಿಲ್ಲದೆ ದಂಡ ವಿಧಿಸುತ್ತಾರಂತೆ. ಆದರೆ ಕಾನೂನು ರಕ್ಷಣೆ ಮಾಡುವ ಹೊಣೆಗಾರಿಕೆಯುಳ್ಳ ಅದೇ ಪಿಎಸ್ ಐ ಈ ರೀತಿ ಹೆದ್ದಾರಿಯಲ್ಲಿ ಕಾನೂನನ್ನ ಗಾಳಿಗೆ ತೂರಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಪಿಎಸ್ ಐ ಧನರಾಜ್ ಅವರ ತಲೆಗೆ ಸಣ್ಣ ಗಾಯವಾಗಿ ಪ್ಲಾಸ್ಟರ್ ಹಾಕಲಾಗಿದೆ. ಅದನ್ನೇ ನೆಪವಾಗಿಸಿ ಕಳೆದ ಕೆಲವು ದಿನಗಳಿಂದ ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಬುದ್ದಿ ಹೇಳಿದರೂ ಕೇಳುತ್ತಿಲ್ಲವೆಂದು ಉಳ್ಳಾಲ ಠಾಣೆಯ ಸಿಬ್ಬಂದಿಗಳು ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ. ತಲೆಗೆ ಗಾಯವಾಗಿದೆ ಎಂದು ಜನರಿಗೆಲ್ಲ ಒಂದೇ ರೀತಿ ಇರುವ ಕಾನೂನನ್ನು ಪೊಲೀಸರು ಉಲ್ಲಂಘನೆ ಮಾಡಲಾಗುತ್ತದೆಯೇ ? ಸಾಮಾನ್ಯ ಜನರು ಇದೇ ರೀತಿ ವರ್ತಿಸಿದರೆ, ಪೊಲೀಸರು ಹಾಗೇ ಬಿಡುತ್ತಾರೆಯೇ? ಮಂಗಳೂರು ಪೊಲೀಸ್ ಆಯುಕ್ತರು ಈ ಬಗ್ಗೆ ಏನು ಹೇಳುತ್ತಾರೋ..? ಈ ಸುದ್ದಿ ಅವರ ಕಿವಿಗೂ ತಲುಪದೆ ಇರಲಾರದು.
Mangalore Ullal Police PSI Dhanraj photo without helmet goes viral.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 03:28 pm
HK News Desk
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm