ಬ್ರೇಕಿಂಗ್ ನ್ಯೂಸ್
08-12-23 06:44 pm Mangaluru Correspondent ಕರಾವಳಿ
ಮಂಗಳೂರು, ಡಿ.8: ಕೋಮು ದ್ವೇಷದ ನೆಲದಲ್ಲಿ ಸೌಹಾರ್ದ ಸಾರುವ ಮದುವೆಯೊಂದು ಸದ್ದಿಲ್ಲದೆ ನಡೆದಿದೆ. ಹಿಂದು ಯುವಕ ಮತ್ತು ಮುಸ್ಲಿಂ ಯುವತಿ ಪರಸ್ಪರ ಪ್ರೀತಿಸುತ್ತಿದ್ದವರು ಹತ್ತು ದಿನಗಳಿಂದ ನಾಪತ್ತೆಯಾಗಿದ್ದರು. ಇದೀಗ ಯುವ ಜೋಡಿ ಮದುವೆಯಾಗಿ ಪ್ರತ್ಷಕ್ಷರಾಗಿದ್ದು ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಸುರತ್ಕಲ್ ಠಾಣೆ ವ್ಯಾಪ್ತಿಯ ಕಾಟಿಪಳ್ಳದ ನಿವಾಸಿಗಳಾಗಿರುವ ಯುವಕ – ಯುವತಿ ಹತ್ತು ದಿನಗಳಿಂದ ನಾಪತ್ತೆಯಾಗಿದ್ದರು. ಇವರು ಮದುವೆಯಾಗಿರುವ ಸುದ್ದಿಯನ್ನು ಮಂಗಳೂರಿನ ಬಜರಂಗದಳ ಮುಖಂಡ ಶರಣ್ ಪಂಪ್ವೆಲ್ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಾಕ್ಕೊಂಡಿದ್ದು ಆಯೆಷಾ ಎಂಬ ಮುಸ್ಲಿಂ ಯುವತಿ ಅಕ್ಷತಾ ಎಂದು ಬದಲಾಗಿರುವುದನ್ನು ಹೇಳಿಕೊಂಡಿದ್ದಾರೆ. ಯುವತಿಯ ಕುಟುಂಬ ಕಾರವಾರ ಮೂಲದವರಾಗಿದ್ದು, ತಂದೆ, ತಾಯಿ ಕಾಟಿಪಳ್ಳದಲ್ಲಿಯೇ ಹಲವು ವರ್ಷಗಳಿಂದ ನೆಲೆಸಿದ್ದರು. ಈ ನಡುವೆ, ಇಬ್ಬರ ನಡುವೆ ಪ್ರೀತಿ ಬೆಳೆದಿದ್ದರೂ ಮದುವೆಗೆ ಧರ್ಮ ಅಡ್ಡಿಯಾಗಿತ್ತು. ಶರಣ್ ಪಂಪ್ವೆಲ್ ತನ್ನ ಫೇಸ್ಬುಕ್ ಪೇಜ್ ನಲ್ಲಿ ಇಬ್ಬರ ಫೋಟೋ ಹಾಕಿ ಮದುವೆ ಬಗ್ಗೆ ಟಾಂ ಟಾಂ ಮಾಡಿದ್ದಕ್ಕೆ ಟೀಕೆಯೂ ಕೇಳಿಬಂದಿದೆ.
ಹುಡುಗ ಪ್ರಶಾಂತ್ ಬಜರಂಗದಳ ಕಾರ್ಯಕರ್ತನಾಗಿದ್ದು, ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಕಾರ್ಯಕರ್ತನ ಕೆಲಸಕ್ಕೆ ಬಜರಂಗದಳ ಕಡೆಯಿಂದ ಶಹಭಾಸ್ ಗಿರಿ ಸಿಕ್ಕಿದ್ದರೆ, ಹುಡುಗ- ಹುಡುಗಿಯ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಜಾಲತಾಣದಲ್ಲಿ ಪರ- ವಿರೋಧ ಚರ್ಚೆಗೆ ಗ್ರಾಸವಾಗಿದೆ. ಯುವಕನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ ಮತ್ತಿತರ ಕೇಸುಗಳಿದ್ದು, ರೌಡಿ ಲಿಸ್ಟ್ ನಲ್ಲಿಯೂ ಇದ್ದಾನೆ.
ಮುಸ್ಲಿಂ ಯುವಕರು ಹಿಂದು ಯುವತಿಯನ್ನು ಮದುವೆಯಾಗಿ ಅರ್ಧದಲ್ಲಿ ಕೈಬಿಟ್ಟು ಹೋಗುವುದನ್ನು ಬಜರಂಗದಳ ಲವ್ ಜಿಹಾದ್ ಕೃತ್ಯ ಎಂದು ಜರೆಯುತ್ತಿದ್ದರೆ, ಒಳ್ಳೆಯ ರೀತಿಯಲ್ಲಿ ನೋಡಿಕೊಂಡ ಮುಸ್ಲಿಮರೂ ನಮ್ಮ ಸಮಾಜದಲ್ಲಿದ್ದಾರೆ. ಇದೇ ವೇಳೆ, ಹಿಂದು ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾಗಿ ಒಳ್ಳೆಯ ರೀತಿಯಲ್ಲೇ ನೋಡಿಕೊಂಡರೆ ಆ ರೀತಿಯ ಹಣೆಪಟ್ಟಿ ಬರಲಿಕ್ಕಿಲ್ಲ.
Hindu Muslim Marriage Mangalore, Bajrang dal activist marries Muslim girl from Surathkal in Magalore. Sharan Pumpwell share images of both couple which has sparked controversy on social media.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 04:45 pm
Mangalore Correspondent
Expert PU College Announces ‘Xcelerate 2025’...
15-08-25 09:04 pm
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
16-08-25 07:06 pm
Bangalore Correspondent
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm