ಬ್ರೇಕಿಂಗ್ ನ್ಯೂಸ್
13-11-23 06:53 pm Mangalore Correspondent ಕರಾವಳಿ
ಉಡುಪಿ, ನ.13: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಒಮ್ಮಿಂದೊಮ್ಮೆಲೇ ಬೆಂಕಿ ಹತ್ತಿಕೊಂಡಿದ್ದು, ಹತ್ತಕ್ಕೂ ಹೆಚ್ಚು ಮೀನುಗಾರಿಕಾ ಬೋಟುಗಳು ಬೆಂಕಿಗಾಹುತಿಯಾಗಿವೆ. ಧಗ ಧಗನೆ ಉರಿದ ಬೆಂಕಿಯ ಕೆನ್ನಾಲಿಗೆಗೆ ಬಾನಲ್ಲಿ ದಟ್ಟ ಹೊಗೆ, ಉರಿ ಜ್ವಾಲೆಯನ್ನು ಸೃಷ್ಟಿಸಿತ್ತು.
ಬೈಂದೂರು ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಇಂದು ಬೆಳಗ್ಗೆ ಬೆಂಕಿಯದ್ದೇ ಸದ್ದು. ಒಂದೆರಡಲ್ಲ ಹತ್ತಕ್ಕೂ ಹೆಚ್ಚು ಬೋಟುಗಳಿಗೆ ಹಠಾತ್ ಬೆಂಕಿ ಹತ್ತಿಕೊಂಡಿದ್ದು, ಸಮುದ್ರ ಬದಿಯಲ್ಲಿ ಗಾಳಿಯೊಂದಿಗೆ ಬೆಂಕಿ ಸರಸವಾಡಿದಂತಿತ್ತು. ಇಷ್ಟಕ್ಕೂ ಬೆಂಕಿ ಬೀಳೋದಕ್ಕೆ ಅಲ್ಲಿಯೇ ದೀಪಾವಳಿ ಪಟಾಕಿ ಸಿಡಿಸುತ್ತಿದ್ದ ಬಿಹಾರ ಮೂಲದ ಕಾರ್ಮಿಕರು ಕಾರಣವಂತೆ. ಕಾರ್ಮಿಕರು ಹಾರಿಸಿದ್ದ ಪಟಾಕಿಯ ಕಿಡಿ ನೇರವಾಗಿ ಬೋಟು ಮೇಲಕ್ಕೆ ಬಿದ್ದಿದೆ. ಬೋಟನ್ನು ತೀರಕ್ಕೆ ತಂದು ಮೇಲ್ಗಡೆ ತೆಂಗಿನ ಗರಿಯನ್ನು ಮುಚ್ಚಲಾಗಿತ್ತು. ತೆಂಗಿನ ಗರಿಗಳು ಬಿಸಿಲಿಗೆ ಒಣಗಿದ್ದರಿಂದ ಪಟಾಕಿಯ ಬಾಣದ ಬಿರುಸಿಗೆ ಬೆಂಕಿಯ ಜ್ವಾಲೆ ಏಳುವಂತೆ ಮಾಡಿತ್ತು. ಗಾಳಿಯಿಂದಾಗಿ ಬೆಂಕಿ ಅಕ್ಕಪಕ್ಕದಲ್ಲಿ ಹರಡಿದ್ದು ಅಲ್ಲಿ ನಿಲ್ಲಿಸಿದ್ದ ಹನ್ನೊಂದು ಬೋಟುಗಳಿಗೂ ಹರಡಿದೆ. ಧಗ ಧಗನೆ ಹೊತ್ತಿಕೊಂಡಿದ್ದು, ಅಲ್ಲಿಯೇ ನಿಲ್ಲಿಸಿದ್ದ ಎರಡು ಬೈಕ್ ಕೂಡ ಹೊತ್ತಿ ಉರಿದು ಹೋಗಿದೆ.
ದೀಪಾವಳಿ ನಿಮಿತ್ತ ಕಾರ್ಮಿಕರು ರಜೆಯಲ್ಲಿದ್ದರೆ, ಮೀನುಗಾರರು ಬೋಟನ್ನು ನಿಲ್ಲಿಸಿ ತಮ್ಮ ಮನೆಗೆ ತೆರಳಿದ್ದರು. ಬೆಂಕಿ ಬಿದ್ದ ಕೂಡಲೇ ಅಗ್ನಿಶಾಮಕ ದಳ, ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸುದೀರ್ಘ ನಾಲ್ಕು ಗಂಟೆಗಳ ಬಳಿಕ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ಅನಾಹುತದಿಂದ ಸುಮಾರು 5 ಕೋಟಿಗೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ.
Kundapur Eight boats go up in flames after fire breaks out in harbour. Eight boats that were anchored on the river bank, were gutted in a fire mishap on Monday November 13 at Manganese Road of Gangolli. The loss is estimated to run into crore of rupees.
25-06-25 01:09 pm
HK News Desk
Bangalore, Reels, Death: 12 ವರ್ಷದ ಪ್ರೀತಿ ಜಗಳದ...
24-06-25 10:42 pm
Chikkamagaluru Student Suicide, Uniform: ಚಿಕ್...
24-06-25 10:15 pm
Tumakuru Suicide, Instagram Reels: ರೀಲ್ಸ್ ವಿಚ...
24-06-25 08:16 pm
FIR Ex MP Anantkumar Hegde: ಕಾರು ಓವರ್ ಟೇಕ್ ಮಾ...
24-06-25 05:23 pm
25-06-25 11:10 am
HK News Desk
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
24-06-25 09:49 pm
Mangalore Correspondent
Mangalore, College Student Suicide: ಕಲಿಕೆಯಲ್ಲ...
24-06-25 01:36 pm
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
24-06-25 09:51 pm
HK News Desk
Bangalore Chit Fund Scam, 10 Crore: ಚೀಟಿ ಹೆಸ್...
24-06-25 07:39 pm
Davanagere Rape: ಮನೆಯ ಮುಂದೆ ಆಟವಾಡುತ್ತಿದ್ದ 7 ವ...
23-06-25 08:51 pm
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm