ಬ್ರೇಕಿಂಗ್ ನ್ಯೂಸ್
30-10-23 04:44 pm Mangalore Correspondent ಕರಾವಳಿ
ಉಳ್ಳಾಲ, ಅ.30: ಆತ್ಮಹತ್ಯೆ ತಡೆಗೆಂದು ನೇತ್ರಾವತಿ ನದಿಯ ಸೇತುವೆಯ ಇಬ್ಬದಿಗೆ ಹಾಕಿದ್ದ ತಡೆ ಬೇಲಿಯನ್ನೇ ಹಾರಿ ಯುವಕನೋರ್ವ ನದಿಗೆ ಜಿಗಿದಿದ್ದು ನೀರಿನಲ್ಲಿ ಕೊಚ್ಚಿಹೋದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ತೊಕ್ಕೊಟ್ಟಿನಿಂದ ಮಂಗಳೂರಿನತ್ತ ಹುಂಡೈ ಐ10 ಕಾರಲ್ಲಿ ತೆರಳುತ್ತಿದ್ದ ಯುವಕನೋರ್ವ ಕಾರನ್ನ ಸೇತುವೆ ಬಳಿಯಲ್ಲೇ ನಿಲ್ಲಿಸಿದ್ದಾನೆ. ವಾಹನ ಸವಾರರು ನೋಡ ನೋಡುತ್ತಲೇ ಸೇತುವೆಯ ತುದಿಯ ಆವರಣ ಗೋಡೆ ಹಾರಿದ ಯುವಕ ಆವರಣ ಗೋಡೆಗೆ ಅಳವಡಿಸಲಾಗಿದ್ದ ಪೈಪ್ ಲೈನ್ ಗಳ ಮೇಲೆ ನಡೆಯುತ್ತಲೇ ಸೇತುವೆ ಮಧ್ಯ ಭಾಗ ತಲುಪಿ ನದಿಗೆ ಜಿಗಿದು ನೀರು ಪಾಲಾಗಿದ್ದಾನೆ. ಯುವಕ ನೀರು ಪಾಲಾಗುತ್ತಿರುವ ದೃಶ್ಯವನ್ನ ಕೆಲವರು ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದಾರೆ.


ಚಿಕ್ಕಮಂಗಳೂರು ಮೂಲದ ಪ್ರಸನ್ನ ಕುಮಾರ್ ಎಂಬವರ ಹೆಸರಲ್ಲಿ ಕಾರು ನೋಂದಣಿಗೊಂಡಿದೆ. ಅಲ್ಲದೆ, ಕಾರಲ್ಲಿ ಪ್ರಸನ್ನ ಅವರ ಡ್ರೈವಿಂಗ್ ಲೈಸೆನ್ಸ್ ದೊರಕಿದೆ. ಸ್ಥಳೀಯ ನಾಡದೋಣಿಗಳಿಂದ ಪೊಲೀಸರು ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಂಕನಾಡಿ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ. ಪ್ರಸನ್ನ ಅವರ ಫ್ಯಾಮಿಲಿಯನ್ನು ಪೊಲೀಸರು ಸಂಪರ್ಕಿಸಿದ್ದು ಪ್ರಸನ್ನ ಮತ್ತು ಸುಮನ್ ಎಂಬವರು ತರಕಾರಿ ಮಾರಾಟಕ್ಕೆಂದು ಮಂಗಳೂರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಈಗ ನೀರಿಗೆ ಹಾರಿದ ವ್ಯಕ್ತಿ ಪ್ರಸನ್ನ ಹೌದಾ ಅಥವಾ ಬೇರೆ ವ್ಯಕ್ತಿಯೇ ಎಂದು ಗೊತ್ತಾಗಿಲ್ಲ.
ನೇತ್ರಾವತಿ ಸೇತುವೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಆತ್ಮಹತ್ಯೆಗಳಿಗೆ ಕಡಿವಾಣ ಹಾಕಲು ಮಂಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಎರಡು ವರ್ಷಗಳ ಹಿಂದೆ ಸುಮಾರು 50 ಲಕ್ಷ ವೆಚ್ಚದಲ್ಲಿ ಸೇತುವೆಗೆ ಕಬ್ಬಿಣದ ತಡೆ ಬೇಲಿ ಅಳವಡಿಸಿತ್ತು. ಬೇಲಿ ಅಳವಡಿಸಿದ ನಂತರ ಸೇತುವೆಯಲ್ಲಿ ಹಾರಿ ಸಾಯುವುದು ಕಡಿಮೆಯಾಗಿತ್ತು. ಇದೀಗ ಬೇಲಿಯನ್ನೇ ಲೆಕ್ಕಿಸದೆ ಯುವಕ ನದಿಗೆ ಜಿಗಿದಿದ್ದು ಸಾವಿನ ದಾರಿ ಹಿಡಿದವನಿಗೆ ಬೇಲಿ ಅಡ್ಡಿಯಾಗಲ್ಲ ಎನ್ನುವ ಸಂದೇಶ ನೀಡಿದ್ದಾನೆ.
Chikmagaluru man jumps into Netravati river at Ullal bridge in Mangalore by parking his car aside.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm