ಬ್ರೇಕಿಂಗ್ ನ್ಯೂಸ್
27-10-23 11:03 pm Mangalore Correspondent ಕರಾವಳಿ
ಮಂಗಳೂರು, ಅ.27: ಕೊಂಕಣಿ ಲೇಖಕ, ಕಥೆಗಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಡ್ವಿನ್ ಜೋಸೆಫ್ ಫ್ರಾನ್ಸಿಸ್ ಡಿಸೋಜ (75) ನಿಧನರಾಗಿದ್ದಾರೆ.
1948ರಲ್ಲಿ ಮಂಗಳೂರಿನ ವೆಲೆನ್ಸಿಯಾದಲ್ಲಿ ಜನಿಸಿದ್ದ ಅವರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಕಾಂ ಪದವಿ ಪೂರೈಸಿದ್ದರು. ಆನಂತರ, ಕೊಂಕಣಿ ಭಾಷೆಯಲ್ಲಿ ಪೋಸ್ಟ್ ಗ್ರಾಜುವೇಟ್ ಡಿಪ್ಲೊಮಾ ಮಾಡಿದ್ದರು. ಅಲ್ಲದೆ, ಅಮೆರಿಕದ ಬೈಬಲ್ ಸ್ಕೂಲ್ ನಲ್ಲಿ ಕ್ರಿಸ್ತಿಯನ್ ಥಿಯೋಲಜಿ ಬಗ್ಗೆ ಡಿಪ್ಲೊಮಾ ಶಿಕ್ಷಣ ಮಾಡಿದ್ದರು.
1964ರಲ್ಲಿ ಮೊದಲ ಬಾರಿಗೆ ಕೊಂಕಣಿಯಲ್ಲಿ ಸಣ್ಣ ಕತೆಗಳನ್ನು ಬರೆಯತೊಡಗಿದ್ದರು. 33 ಕಾದಂಬರಿ, ನೂರಕ್ಕೂ ಹೆಚ್ಚು ಸಣ್ಣ ಕತೆಗಳನ್ನು ಬರೆದಿದ್ದಾರೆ. ಇವರ ಬಹುತೇಕ ಕತೆಗಳು ಇಂಗ್ಲಿಷ್, ಕನ್ನಡ, ಹಿಂದಿ, ಕಾಶ್ಮೀರಿ, ಮಲಯಾಳಂ ಮತ್ತು ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. ಅವರು ಬರೆದಿದ್ದ ಎ ಕಪ್ ಆಫ್ ಹಾಟ್ ಕಾಫಿ ಎನ್ನುವ ಸಣ್ಣ ಕತೆಯನ್ನು ಭಾರತದ ಸಣ್ಣ ಕತೆಗಳಲ್ಲಿ ಫೇವರಿಟ್ ಗಳಲ್ಲಿ ಒಂದೆಂದು ಜೈಕೋ ಬುಕ್ಸ್ ಸಂಸ್ಥೆಯವರು ಪ್ರಕಟಿಸಿದ್ದರು. ಚಾಕಲೇಟ್ ಎನ್ನುವ ಸಣ್ಣ ಕತೆ ರೀಡರ್ಸ್ ಡೈಜೆಸ್ಟ್ ಮಾಸಿಕದಲ್ಲಿ ಎರಡು ಬಾರಿ ಪ್ರಕಟ ಆಗಿತ್ತು.
ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯವರು ಜೆ.ಎಫ್ ಡಿಸೋಜರ ಹಲವು ಕತೆಗಳನ್ನು ಪ್ರಕಟಣೆ ಮಾಡಿದ್ದಾರೆ. ಡಿಸೋಜ ಅವರು ತನ್ನದೇ 13 ಕತೆಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ್ದರು. ಹಲವು ಸಿನಿಮಾಗಳಿಗೂ ಅವರು ಸಂಭಾಷಣೆಗಳನ್ನು ಬರೆದಿದ್ದಾರೆ. ಕೊಂಕಣಿಯಲ್ಲಿ ಬರೆದಿದ್ದ 1008 ಪುಟಗಳ ಬೃಹತ್ ಗ್ರಂಥವನ್ನು 2015ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ್ದು ಕೊಂಕಣಿ ಸಾಹಿತ್ಯದಲ್ಲಿ ದಾಖಲಾದ ದೊಡ್ಡ ಕೊಡುಗೆ ಎಂದು ಪರಿಗಣಿಸಲ್ಪಟ್ಟಿದೆ. 1992ರಲ್ಲಿ ಕಾರವಾರದಲ್ಲಿ ನಡೆದ 11ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ ಜೆ.ಎಫ್ ಡಿಸೋಜ ಅಧ್ಯಕ್ಷರಾಗಿದ್ದರು. ಡಿಸೋಜ ಅವರು ಪತ್ನಿ ಮರ್ಸಿಲಿನ್ ಜೇನ್ ಡಿಸೋಜ, ಪುತ್ರಿ ರುತ್ ಈಸ್ಟರ್ ಡಿಸೋಜ, ಅಳಿಯ ಸುಧಾಕರ ಪ್ರಭು, ಮೊಮ್ಮಗು ಅನುಷ್ಕಾ ಪ್ರಭು ಅವರನ್ನು ಅಗಲಿದ್ದಾರೆ.
Edwin Joseph Francis D'Souza, a prominent Konkani writer and recipient of the Kendra Sahitya Academy Award, fondly known as Edwin J F D'Souza, passed away at 75 years of age in the city on Thursday, October 26.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm