ಬ್ರೇಕಿಂಗ್ ನ್ಯೂಸ್
27-10-23 11:03 pm Mangalore Correspondent ಕರಾವಳಿ
ಮಂಗಳೂರು, ಅ.27: ಕೊಂಕಣಿ ಲೇಖಕ, ಕಥೆಗಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಡ್ವಿನ್ ಜೋಸೆಫ್ ಫ್ರಾನ್ಸಿಸ್ ಡಿಸೋಜ (75) ನಿಧನರಾಗಿದ್ದಾರೆ.
1948ರಲ್ಲಿ ಮಂಗಳೂರಿನ ವೆಲೆನ್ಸಿಯಾದಲ್ಲಿ ಜನಿಸಿದ್ದ ಅವರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಕಾಂ ಪದವಿ ಪೂರೈಸಿದ್ದರು. ಆನಂತರ, ಕೊಂಕಣಿ ಭಾಷೆಯಲ್ಲಿ ಪೋಸ್ಟ್ ಗ್ರಾಜುವೇಟ್ ಡಿಪ್ಲೊಮಾ ಮಾಡಿದ್ದರು. ಅಲ್ಲದೆ, ಅಮೆರಿಕದ ಬೈಬಲ್ ಸ್ಕೂಲ್ ನಲ್ಲಿ ಕ್ರಿಸ್ತಿಯನ್ ಥಿಯೋಲಜಿ ಬಗ್ಗೆ ಡಿಪ್ಲೊಮಾ ಶಿಕ್ಷಣ ಮಾಡಿದ್ದರು.
1964ರಲ್ಲಿ ಮೊದಲ ಬಾರಿಗೆ ಕೊಂಕಣಿಯಲ್ಲಿ ಸಣ್ಣ ಕತೆಗಳನ್ನು ಬರೆಯತೊಡಗಿದ್ದರು. 33 ಕಾದಂಬರಿ, ನೂರಕ್ಕೂ ಹೆಚ್ಚು ಸಣ್ಣ ಕತೆಗಳನ್ನು ಬರೆದಿದ್ದಾರೆ. ಇವರ ಬಹುತೇಕ ಕತೆಗಳು ಇಂಗ್ಲಿಷ್, ಕನ್ನಡ, ಹಿಂದಿ, ಕಾಶ್ಮೀರಿ, ಮಲಯಾಳಂ ಮತ್ತು ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. ಅವರು ಬರೆದಿದ್ದ ಎ ಕಪ್ ಆಫ್ ಹಾಟ್ ಕಾಫಿ ಎನ್ನುವ ಸಣ್ಣ ಕತೆಯನ್ನು ಭಾರತದ ಸಣ್ಣ ಕತೆಗಳಲ್ಲಿ ಫೇವರಿಟ್ ಗಳಲ್ಲಿ ಒಂದೆಂದು ಜೈಕೋ ಬುಕ್ಸ್ ಸಂಸ್ಥೆಯವರು ಪ್ರಕಟಿಸಿದ್ದರು. ಚಾಕಲೇಟ್ ಎನ್ನುವ ಸಣ್ಣ ಕತೆ ರೀಡರ್ಸ್ ಡೈಜೆಸ್ಟ್ ಮಾಸಿಕದಲ್ಲಿ ಎರಡು ಬಾರಿ ಪ್ರಕಟ ಆಗಿತ್ತು.
ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯವರು ಜೆ.ಎಫ್ ಡಿಸೋಜರ ಹಲವು ಕತೆಗಳನ್ನು ಪ್ರಕಟಣೆ ಮಾಡಿದ್ದಾರೆ. ಡಿಸೋಜ ಅವರು ತನ್ನದೇ 13 ಕತೆಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ್ದರು. ಹಲವು ಸಿನಿಮಾಗಳಿಗೂ ಅವರು ಸಂಭಾಷಣೆಗಳನ್ನು ಬರೆದಿದ್ದಾರೆ. ಕೊಂಕಣಿಯಲ್ಲಿ ಬರೆದಿದ್ದ 1008 ಪುಟಗಳ ಬೃಹತ್ ಗ್ರಂಥವನ್ನು 2015ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ್ದು ಕೊಂಕಣಿ ಸಾಹಿತ್ಯದಲ್ಲಿ ದಾಖಲಾದ ದೊಡ್ಡ ಕೊಡುಗೆ ಎಂದು ಪರಿಗಣಿಸಲ್ಪಟ್ಟಿದೆ. 1992ರಲ್ಲಿ ಕಾರವಾರದಲ್ಲಿ ನಡೆದ 11ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ ಜೆ.ಎಫ್ ಡಿಸೋಜ ಅಧ್ಯಕ್ಷರಾಗಿದ್ದರು. ಡಿಸೋಜ ಅವರು ಪತ್ನಿ ಮರ್ಸಿಲಿನ್ ಜೇನ್ ಡಿಸೋಜ, ಪುತ್ರಿ ರುತ್ ಈಸ್ಟರ್ ಡಿಸೋಜ, ಅಳಿಯ ಸುಧಾಕರ ಪ್ರಭು, ಮೊಮ್ಮಗು ಅನುಷ್ಕಾ ಪ್ರಭು ಅವರನ್ನು ಅಗಲಿದ್ದಾರೆ.
Edwin Joseph Francis D'Souza, a prominent Konkani writer and recipient of the Kendra Sahitya Academy Award, fondly known as Edwin J F D'Souza, passed away at 75 years of age in the city on Thursday, October 26.
25-06-25 10:32 pm
Bangalore Correspondent
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
Assault Case, Anant Kumar Hegde, Accident: ಹಲ...
25-06-25 01:09 pm
Bangalore, Reels, Death: 12 ವರ್ಷದ ಪ್ರೀತಿ ಜಗಳದ...
24-06-25 10:42 pm
Chikkamagaluru Student Suicide, Uniform: ಚಿಕ್...
24-06-25 10:15 pm
25-06-25 10:05 pm
HK News Desk
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
25-06-25 09:27 pm
Mangalore Correspondent
Sixth Sense Beauty Salon, Raid, Mangalore, Po...
24-06-25 09:49 pm
Mangalore, College Student Suicide: ಕಲಿಕೆಯಲ್ಲ...
24-06-25 01:36 pm
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
25-06-25 04:06 pm
HK News Desk
ಸ್ನೇಹಿತನಿಂದ 8 ಲಕ್ಷ ರೂ. ಸಾಲ ; ಕೊಟ್ಟ ಸಾಲ ತೀರಿಸಲ...
24-06-25 09:51 pm
Bangalore Chit Fund Scam, 10 Crore: ಚೀಟಿ ಹೆಸ್...
24-06-25 07:39 pm
Davanagere Rape: ಮನೆಯ ಮುಂದೆ ಆಟವಾಡುತ್ತಿದ್ದ 7 ವ...
23-06-25 08:51 pm
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am