ಬ್ರೇಕಿಂಗ್ ನ್ಯೂಸ್
17-10-23 11:07 pm Mangalore Correspondent ಕರಾವಳಿ
ಮಂಗಳೂರು, ಅ.17: ನಗರದ ಫಳ್ನೀರ್ ನಲ್ಲಿ ಎಂಎಫ್ ಸಿ ಆಹಾರ ಮಳಿಗೆಯ ಮೇಲೆ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದು, 24 ಗಂಟೆಯಲ್ಲಿ ಟ್ರೇಡ್ ಲೈಸನ್ಸ್ ಇನ್ನಿತರ ದಾಖಲೆಗಳನ್ನು ಹಾಜರುಪಡಿಸದೇ ಇದ್ದರೆ ಕೇಂದ್ರಕ್ಕೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎಂಎಫ್ ಸಿ ಮಳಿಗೆಯಿರುವ ಕಟ್ಟಡದ ಮಾಲಕರ ದೂರಿನಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಒಳಗೆ ಬರುತ್ತಿದ್ದಂತೆ ಮಳಿಗೆಯ ಮಾಲಕರು ತಡೆದು ತೀವ್ರ ಜಟಾಪಟಿ ನಡೆಸಿದ್ದಾರೆ. ನಾವು ತಪಾಸಣೆ ನಡೆಸುವುದಕ್ಕೆ ಆಗಮಿಸಿದ್ದು ಎಂದು ಅಧಿಕಾರಿಗಳು ಹೇಳಿದರೆ, ಹೊಟೇಲ್ ಮಾಲಕರು ಒಳಗೆ ಬಂದು ತಪಾಸಣೆ ನಡೆಸುವುದಕ್ಕೆ ಬಿಡಲ್ಲ ಎಂದು ತಡೆದಿದ್ದಾರೆ. ನಾವು ಎಲ್ಲ ಲೈಸನ್ಸ್ ಇದ್ದುಕೊಂಡೇ ವ್ಯವಹಾರ ನಡೆಸುತ್ತಿದ್ದೇವೆ. ಹೊಟೇಲ್ ಒಳಗಡೆ ಉತ್ತಮ ಸೌಲಭ್ಯವನ್ನೂ ಹೊಂದಿದ್ದೇವೆ ಎಂದು ಮಾಲಕ ಸಿದ್ದಿಕ್ ಹೇಳಿದ್ದು ಅಧಿಕಾರಿ ಸಿಬಂದಿಯನ್ನು ತರಾಟೆಗೆತ್ತಿಕೊಂಡಿದ್ದಾರೆ.


ನಮ್ಮ ಆಹಾರ ಮಳಿಗೆ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ನಾವು ಟ್ರೇಡ್ ಲೈಸನ್ಸ್ ಗಾಗಿ ಸಲ್ಲಿಸಿರುವ ಅರ್ಜಿಯನ್ನು ಇಲಾಖೆಯಿಂದ ನಿರಾಕರಿಸಿಯೂ ಇಲ್ಲ. 2017ರಿಂದ ಇದೇ ಜಾಗದಲ್ಲಿ ನಾವು ಬಿಸಿನೆಸ್ ಹೊಂದಿದ್ದೇವೆ. ಈಗ ಅಧಿಕಾರಿಗಳು ಕೆಲವು ಬಾಡಿಗೆ ಗೂಂಡಾಗಳನ್ನು ಜೊತೆಗೆ ಕರೆದುಕೊಂಡು ಬಂದಿದ್ದಾರೆ. ಯಾರಿಂದಲೋ ಲಂಚ ಪಡೆದು ದಾಳಿಗೆ ಬಂದಿದ್ದಾರೆ ಎಂದು ಎನ್.ಎಂ.ಎ ಸಿದ್ದಿಕ್ ಆರೋಪ ಮಾಡಿದ್ದಾರೆ. ಕೊನೆಗೆ, 24 ಗಂಟೆಯ ಗಡುವು ಕೊಡುತ್ತೇವೆ, ಸೂಕ್ತ ಟ್ರೇಡ್ ಲೈಸನ್ಸ್ ಇನ್ನಿತರ ದಾಖಲೆ ಪತ್ರಗಳನ್ನು ಇಲಾಖೆಗೆ ಹಾಜರುಪಡಿಸಬೇಕು ಎಂದು ಹೇಳಿ ಅಧಿಕಾರಿಗಳು ಹೊರ ನಡೆದಿದ್ದಾರೆ.
Food department sleuths have raided a food outlet called MFC FOOD MART running business at Falnir without a trade license. The owners of the outlet have expressed anguish at the attitude of the officials who had to return after inspecting the hygiene maintained at the outlet.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm