ಬ್ರೇಕಿಂಗ್ ನ್ಯೂಸ್
10-10-23 08:22 pm Mangalore Correspondent ಕರಾವಳಿ
ಉಳ್ಳಾಲ, ಅ.10: ಈದ್ ಮಿಲಾದ್ ವಾಹನ ಜಾಥಾ ನೆಪದಲ್ಲಿ ಕರ್ಕಷ ಹಾರ್ನ್, ಸೈಲೆನ್ಸರ್ ಗಳಿಂದ ಅಬ್ಬರಿಸಿ ಸಾರ್ವಜನಿಕರಿಗೆ ಕಿರಿ, ಕಿರಿ ನೀಡಿದ್ದ 15 ಯುವಕರ ವಿರುದ್ಧ ಉಳ್ಳಾಲ ಪೊಲೀಸರು ದಂಡ ಪ್ರಯೋಗಿಸಿದ್ದಲ್ಲದೆ ಪೋಷಕರ ಮುಂದೆಯೇ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕಳೆದ ಸೆ.28 ರಂದು ಪ್ರವಾದಿ ಮಹಮ್ಮದರ ಜನ್ಮದಿನದ ಪ್ರಯುಕ್ತ ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾದಲ್ಲಿ ನಡೆದಿದ್ದ ಈದ್ ಮಿಲಾದ್ ಹಬ್ಬಕ್ಕೆ ಯುವಕರ ಗುಂಪೊಂದು ಕುತ್ತಾರು, ಮಾಡೂರು ಕಡೆಯಿಂದ ವಾಹನ ಜಾಥಾ ನಡೆಸಿ ಕರ್ಕಷ ಹಾರ್ನ್, ಸೈಲೆನ್ಸರ್ ಗಳಿಂದ ಕಿರಿ,ಕಿರಿ ಉಂಟು ಮಾಡಿದಲ್ಲದೆ ಉಳ್ಳಾಲದ ಅಬ್ಬಕ್ಕ ಸರ್ಕಲ್ ಏರಿ ವಿಕೃತವಾಗಿ ವರ್ತಿಸಿ ಘೋಷಣೆಗಳನ್ನ ಕೂಗಿದ್ದ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯುವಕರ ವರ್ತನೆಗೆ ಮುಸ್ಲಿಂ ಧರ್ಮೀಯರೇ ಆಕ್ಷೇಪ ವ್ಯಕ್ತಪಡಿಸಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಘಟನೆ ಸಂಬಂಧ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದರು.
ಮಾಡೂರಿನ ಇಬ್ರಾಹಿಂ, ಅಂಬ್ಲಮೊಗರುವಿನ ಮಹಮ್ಮದ್ ಅರ್ಷಾದ್ ಬಶೀರ್, ಪಡು ಮಾರ್ನಾಡುವಿನ ಅಶೀಶ್ ಪಿಂಟೊ, ಮಂಜನಾಡಿ ಗ್ರಾಮದ ಕೆ.ಎ.ಇಕ್ಬಾಲ್ ಅಬ್ದುಲ್ ರಹಿಮಾನ್, ಇಮ್ರಾನ್, ಇಬ್ರಾಹಿಂ ಬಾತಿಷ್ ಇಸ್ಮಾಯಿಲ್, ಉಮರ್ ಫಾರೂಕ್, ಅಬ್ದುಲ್ ಖಾದರ್, ಕೆ.ಎ.ಇಕ್ಬಾಲ್, ಬಜಾಲಿನ ಮಹಮ್ಮದ್ ಹುಸೇನ್, ಕೋಟೆಕಾರಿನ ಶೌಕತ್ ಆಲಿ, ಬೆಳ್ತಂಗಡಿಯ ಮಹಮ್ಮದ್ ನಿಝಾರ್, ಮಾಡೂರಿನ ಶೇಖ್ ಖಲೀಲ್ ಅಹ್ಮದ್, ಪಾವೂರಿನ ಇಬ್ರಾಹಿಂ, ಸಜೀಪ ನಡುವಿನ ಮಹಮ್ಮದ್ ಇರ್ಷಾದ್ ಸೇರಿದಂತೆ ಒಟ್ಟು 15 ಯುವಕರ ವಿರುದ್ಧ ಉಳ್ಳಾಲ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಯಡಿ ದಂಡ ವಸೂಲು ಮಾಡಿದ್ದಾರೆ.
ಪೋಷಕರ ಸಮ್ಮುಖದಲ್ಲೇ ಉಳ್ಳಾಲ ಪೊಲೀಸ್ ಠಾಣಾ ನೂತನ ಪಿಐ ಬಾಲಕೃಷ್ಣ ಅವರು ಯುವಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಶಾರದಾ ಉತ್ಸವಕ್ಕೂ ಡಿ.ಜೆ ಅಳವಡಿಸದಂತೆ ಇಲಾಖೆಯ ಆದೇಶ ಬಂದಿದ್ದು ಉಳ್ಳಾಲಕ್ಕೂ ಇದು ಅನ್ವಯಿಸಲಿದೆ ಎಂದು ಪಿಐ ಬಾಲಕೃಷ್ಣ ತಿಳಿಸಿದ್ದಾರೆ.
Mangalore Ullal eid disturbance by youths on abakka circle, Inapector warns all youths found in video.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 06:40 pm
HK News Desk
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm