ಬ್ರೇಕಿಂಗ್ ನ್ಯೂಸ್
09-10-23 10:29 pm Mangalore Correspondent ಕರಾವಳಿ
ಮಂಗಳೂರು, ಅ.9: ನಾವು ಇಸ್ರೇಲಿ ಮಿಲಿಟರಿ ಮೇಲೆ ಬಲವಾದ ನಂಬಿಕೆ ಹೊಂದಿದ್ದೇವೆ. ಹಾಗಾಗಿ ನಾವೆಲ್ಲ ಸೇಫ್ ಇದ್ದೇವೆ. ಇಸ್ರೇಲ್ ನಲ್ಲಿ ಇಂಥ ಯುದ್ಧ, ಕ್ಷಿಪಣಿ ದಾಳಿಯನ್ನು ಸಾಕಷ್ಟು ಬಾರಿ ನೋಡಿದ್ದೇನೆ ಎಂದು ಇಸ್ರೇಲ್ ರಾಜಧಾನಿ ಟೆಲ್ ಅವೀವ್ ನಲ್ಲಿರುವ ಮಂಗಳೂರಿನ ವಾಮಂಜೂರು ನಿವಾಸಿ ಲೆನಾರ್ಡ್ ಫೆರ್ನಾಂಡಿಸ್ ಹೇಳಿದ್ದಾರೆ.
ಮಾಧ್ಯಮ ಒಂದಕ್ಕೆ ಲೈವ್ ನಲ್ಲಿ ಮಾತನಾಡಿರುವ ಫೆರ್ನಾಂಡಿಸ್ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ನಾನು 14 ವರ್ಷಗಳಿಂದ ಇಸ್ರೇಲ್ ನಲ್ಲಿದ್ದೇನೆ. ಇಲ್ಲಿನ ಏಂಟಿ ಮಿಸೈಲ್, ಡೋರ್ ಡೋಮ್ ತುಂಬ ಬಲವಾಗಿದೆ. ಹಮಾಸ್ ಕಡೆಯಿಂದ ಕ್ಷಿಪಣಿ ದಾಳಿಯಾದರೂ ಅದು ಸ್ಫೋಟಗೊಳ್ಳುವ ಮೊದಲೇ ನಿಷ್ಕ್ರಿಯಗೊಳಿಸುವ ಏಂಟಿ ಮಿಸೈಲ್ ಸಿಸ್ಟಮ್ ಇದೆ. ಮಿಸೈಲ್ ದಾಳಿಯಾದಾಗೆಲ್ಲ ಏಲಾರಂ ಆಗುತ್ತೆ. ಆಗ ನಾವು ಇದ್ದಲ್ಲೇ ಬಂಕರ್ ನೊಳಗೆ ಹೋಗಬೇಕಾಗುತ್ತದೆ. ರಸ್ತೆಯಲ್ಲಿದ್ದರೆ ಅಲ್ಲಿಯೇ ಮಲಗಿಕೊಂಡಿರಲು ಸೂಚನೆ ಇರುತ್ತದೆ. ಅದನ್ನು ಪಾಲಿಸಿದರೆ ಮುಗೀತು.
ಪ್ರತಿ ಅಪಾರ್ಟ್ಮೆಂಟ್, ಇನ್ನಿತರ ಕಟ್ಟಡಗಳ ಅಡಿಭಾಗದಲ್ಲಿ ಬಂಕರ್ ಇರುತ್ತದೆ. ರಸ್ತೆಯ ಆಸುಪಾಸಿನಲ್ಲಿಯೂ ಬಂಕರ್ ಇರುತ್ತದೆ. ಅಲಾರಂ ಆದಕೂಡಲೇ ನಾವು ಅಡಗಿಕೊಳ್ಳಬೇಕು. ಇಲ್ಲಿನ ಜನರಿಗೆ ಇದೆಲ್ಲ ಮಾಮೂಲಿ. ನಾವು ಭಯಪಡಬೇಕಾದ ಅಗತ್ಯ ಇರುವುದಿಲ್ಲ. ಇಸ್ರೇಲ್ ಮಿಲಿಟರಿ ಪಡೆಗಳ ಶಕ್ತಿ ಬಗ್ಗೆ ನಾವು ಭರವಸೆ ಹೊಂದಿದ್ದೇವೆ. ಹತ್ತು ನಿಮಿಷ ಅಷ್ಟೇ. ಹೊರಗೆ ಬರಲು ಮತ್ತೆ ಅಲಾರಂ ಆಗುತ್ತದೆ. ಹತ್ತು ನಿಮಿಷ ಯಾಕಂದ್ರೆ, ಆಕಾಶದಲ್ಲಿ ಕ್ಷಿಪಣಿಗಳನ್ನು ಸ್ಫೋಟಿಸಿದರೆ ಅವುಗಳ ವಸ್ತುಗಳು ತಡವಾಗಿ ಭೂಮಿಗೆ ಬೀಳುತ್ತದೆ. ಅದಕ್ಕಾಗಿ ಕೆಲ ಹೊತ್ತು ಒಳಗಡೆ ಕುಳಿತು ಬರಲು ಸೂಚನೆ ಇರುತ್ತದೆ. ಅಲಾರಂ ಆದ ಕೆಲವೇ ಹೊತ್ತಲ್ಲಿ ಢಾಮ್ ಸದ್ದು ಆಗುತ್ತದೆ.
ಹೊಸತಾಗಿ ಬಂದವರಿಗೆ ಇದನ್ನು ಕೇಳಿದರೆ ಭಯ ಆಗಬಹುದು. ಆದರೆ ಕ್ಷಿಪಣಿ ಬರುವುದು, ಅದನ್ನು ಸ್ಫೋಟಿಸುವುದು ನಮಗೆಲ್ಲ ಮಾಮೂಲಿ. ಕೆಲವೊಬ್ಬರು ಅದನ್ನು ಮೊಬೈಲಿನಲ್ಲಿ ಸೆರೆಹಿಡಿಯುವ ಮೊಂಡು ಧೈರ್ಯ ಮಾಡುತ್ತಾರೆ. ಅದರಿಂದ ಅಪಾಯ ಜಾಸ್ತಿ ಇರುತ್ತದೆ. ಯಾವುದೇ ಕೆಮಿಕಲ್ ವಸ್ತುಗಳು ಮೈಮೇಲೆ ಬೀಳುವ ಸಾಧ್ಯತೆ ಇರುತ್ತದೆ. ನಾವು ಟೆಲ್ ಅವೀವ್ ನಲ್ಲಿದ್ದು ಇಲ್ಲಿ ಬಹಳಷ್ಟು ಮಂದಿ ಕನ್ನಡಿಗರಿದ್ದಾರೆ. ಎಲ್ಲರೂ ಸೇಫ್ ಆಗಿದ್ದಾರೆ. ಗಡಿಭಾಗದಲ್ಲಿ ಒಂದಷ್ಟು ಸಮಸ್ಯೆ ಆಗಿದೆ. ಅಲ್ಲಿ ಹಮಾಸ್ ಉಗ್ರರು ಒಳನುಸುಳಿದ್ದಾರೆ. ಆದರೂ ಇಲ್ಲಿನ ಮಿಲಿಟರಿ ಶಕ್ತಿ ಅವನ್ನೆಲ್ಲ ನಾಶ ಮಾಡುತ್ತದೆ. ಯಾರು ಕೂಡ ಭಯ ಪಡುವ ಅಗತ್ಯ ಇರುವುದಿಲ್ಲ. ಭಾರತೀಯರಿಗೆ ಯಾರಿಗೂ ಸಮಸ್ಯೆ ಆಗಿಲ್ಲ ಎಂದು ಫೆರ್ನಾಂಡಿಸ್ ಹೇಳಿದ್ದಾರೆ.
Israel-Palestine war, all kannadigas are safe says leonard fernandes from Mangalore speaking to a News channel live from Israel. Says we trust the army of Israel. We have no issues as of now. All are safe he added.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 06:40 pm
HK News Desk
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm