ಬ್ರೇಕಿಂಗ್ ನ್ಯೂಸ್
23-07-23 05:20 pm Mangalore Correspondent ಕರಾವಳಿ
ಮಂಗಳೂರು, ಜುಲೈ 23: ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ಕುಮಾರಧಾರಾ, ನೇತ್ರಾವತಿ ನದಿಗಳು ಕಡೆಗೂ ತುಂಬಿ ಹರಿದಿವೆ. ಕುಕ್ಕೆ ಸುಬ್ರಹ್ಮಣ್ಯ ಬಳಿ ಹರಿಯುವ ಕುಮಾರಧಾರ ನದಿಯಲ್ಲಿ ನೆರೆ ಬಂದಿದ್ದು, ದೇವಸ್ಥಾನ ಮಹಾದ್ವಾರದ ಬಳಿಯ ಸ್ನಾನಘಟ್ಟ ಭಾನುವಾರ ಬೆಳಗ್ಗೆಯೇ ಮುಳುಗಡೆಯಾಗಿದೆ.
ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯೂ ತುಂಬಿ ಹರಿದಿದ್ದು, ಸ್ನಾನಘಟ್ಟ ಮುಳುಗಡೆಯಾಗಿದ್ದರಿಂದ ಜನರು ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಪಶ್ಚಿಮ ಘಟ್ಟದಲ್ಲಿ ಮಳೆ ಕೊರತೆಯಾಗಿದ್ದರಿಂದ ಈ ಬಾರಿಯ ಮಳೆಗಾಲದಲ್ಲಿ ಮೊದಲ ಬಾರಿ ತಡವಾಗಿಯಾದರೂ ಕುಮಾರಧಾರ ಮತ್ತು ನೇತ್ರಾವತಿ ನದಿ ತುಂಬಿಕೊಂಡಿದೆ. ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಈ ಭಾಗದ ಸಣ್ಣ ಸಣ್ಣ ಹೊಳೆಗಳು ಉಕ್ಕಿ ಹರಿದಿವೆ.
2019ರಲ್ಲಿ ಬೆಟ್ಟಗಳ ನಡುವೆ ಸ್ಫೋಟಗೊಂಡು ಉಕ್ಕಿ ಹರಿದಿದ್ದ ಹರಿಹರ ಮತ್ತು ಕಡಮಕಲ್ ಎಸ್ಟೇಟ್ ಬಳಿಯ ಹೊಳೆಯಲ್ಲಿಯೂ ಭಾರೀ ನೀರು ಬಂದಿದ್ದು, ಈ ಭಾಗದ ನಿವಾಸಿಗಳು ಹಿಂದಿನ ರೀತಿಯಲ್ಲೇ ಬೆಟ್ಟ ಸ್ಫೋಟಗೊಳ್ಳುತ್ತಾ ಅನ್ನುವ ಆತಂಕದಲ್ಲಿದ್ದಾರೆ. ಸುಳ್ಯದ ಪಯಸ್ವಿನಿ ನದಿಯೂ ತುಂಬಿಕೊಂಡಿದ್ದು, ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಬೆಳ್ತಂಗಡಿಯಲ್ಲಿ ಭಾರೀ ಮಳೆಯಾಗಿದ್ದರಿಂದ ನೇತ್ರಾವತಿ ನದಿ ಬಂಟ್ವಾಳದ ಪಾಣೆಮಂಗಳೂರು, ಆಲಡ್ಕ ಪರಿಸರದಲ್ಲಿ ಪ್ರವಾಹ ಸೃಷ್ಟಿಸಿದೆ. ಆಲಡ್ಕ ಪರಿಸರದಲ್ಲಿ ನೇತ್ರಾವತಿ ನದಿ ನೀರು ಮನೆಗಳಿಗೆ ನುಗ್ಗಿದ್ದು, ಅಲ್ಲಿನ ನಿವಾಸಿಗಳನ್ನು ಗಂಜಿಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.
ಬಂಟ್ವಾಳ, ಮಂಗಳೂರಿನಲ್ಲಿ ಭಾನುವಾರ ಮಳೆ ಕಡಿಮೆಯಾಗಿದ್ದು, ಬೆಳ್ತಂಗಡಿ, ಧರ್ಮಸ್ಥಳ, ಚಾರ್ಮಾಡಿ, ಸುಳ್ಯ ತಾಲೂಕಿನ ಬ್ರಹ್ಮಗಿರಿ, ಕೊಡಗಿನ ಭಾಗದಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ನದಿಗಳು ಭೋರ್ಗರೆಯುತ್ತ ಹರಿದಿದೆ. ಇದೇ ರೀತಿ ಮಳೆಯಾದಲ್ಲಿ ಸೋಮವಾರದ ಹೊತ್ತಿಗೆ ನೇತ್ರಾವತಿ ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆಯಿದೆ. ಭಾನುವಾರ ಸಂಜೆಯ ವೇಳೆಗೆ ಬಂಟ್ವಾಳದಲ್ಲಿ ಏಳುವರೆ ಮೀಟರ್ ಎತ್ತರದಲ್ಲಿ ಹರಿದಿದ್ದು, ಅಪಾಯದ ಮಟ್ಟ 9 ಮೀಟರ್ ಆಗಿದೆ. ಈಗಲೇ ಹಲವು ಕಡೆ ನದಿ ದಡಗಳಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿದೆ.
ಲೇಡಿಹಿಲ್ ನಲ್ಲಿ ಧರಗುರುಳಿದ ಬೃಹತ್ ಮರ
ಮಂಗಳೂರು ನಗರದ ಲೇಡಿಹಿಲ್ ವೃತ್ತದಲ್ಲಿ ನಿನ್ನೆ ರಾತ್ರಿ ಗಾಳಿ ಮಳೆಗೆ ಬೃಹತ್ ಗಾತ್ರದ ಆಲದ ಮರ ಬುಡ ಸಮೇತ ಉರುಳಿ ಬಿದ್ದಿದೆ. ರಸ್ತೆಗಡ್ಡಲಾಗಿ ಬಿದ್ದ ಮರವನ್ನು ಕತ್ತರಿಸಿ ತೆರವು ಮಾಡುವ ಕಾರ್ಯ ರಾತ್ರಿಯೇ ನಡೆದಿತ್ತು. ತೆರವು ಕಾರ್ಯ ಆಗಿರಲಿಲ್ಲ. ಬೆಳಗ್ಗೆ ಒಂದು ಭಾಗದಲ್ಲಿ ಮರವನ್ನು ಕಡಿದು ರಸ್ತೆಯನ್ನು ಸಂಚಾರಕ್ಕೆ ಬಿಟ್ಟುಕೊಟ್ಟಿದ್ದರು. ಭಾರೀ ಗಾತ್ರದ ಮರವಾಗಿದ್ದರಿಂದ ಪೂರ್ತಿ ತೆರವು ಪ್ರಕ್ರಿಯೆ ಸಾಧ್ಯವಾಗಲಿಲ್ಲ. ರಸ್ತೆ ಕಾಂಕ್ರೀಟ್ ಆದ ಸಂದರ್ಭದಲ್ಲಿ ಮರದ ಸುತ್ತಲೂ ಸಿಮೆಂಟಿನಿಂದ ಮುಚ್ಚಿದ್ದರಿಂದಲೋ ಏನೋ, ಬೇರುಗಳು ಒಣಗಿ ಬುಡಸಮೇತ ಮರ ಉರುಳಿ ಬಿದ್ದಿದೆ.
Heavy rains lash coastal districts Mangalore and Udupi, IMD issues Orange alert, bathing ghat in Subrahmanya submerged in floodwaters. With the Kumaradhara river in spate because of heavy rains across coastal-Malnad Karnataka, the district administration has urged devotees to not visit Kukke Subrahmanya for the time being. The bathing ghat at Kukke Subrahmanya on the banks of the Kumaradhara river was submerged in the floodwaters.
28-06-25 04:27 pm
Bangalore Correspondent
Five Tigers Poisoned MM Hills, Three Arrested...
28-06-25 12:14 pm
ಹುಲಿ ದಾಳಿ ಮಾಡಿದ್ದ ಹಸುವಿಗೆ ವಿಷ ಹಾಕಿದ್ದ ಸ್ಥಳೀಯರ...
27-06-25 10:42 pm
Cm Siddaramaiah, Mangalore, Hate speech, Poli...
27-06-25 09:56 pm
ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ, ಜಾತ್ಯತೀತ' ಪದ ತ...
27-06-25 05:38 pm
27-06-25 01:44 pm
HK News Desk
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
27-06-25 10:17 pm
Mangalore Correspondent
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
27-06-25 10:59 pm
HK News Desk
Davanagere News, Crime, Aunty: 25 ವರ್ಷದ ಅಳಿಯನ...
27-06-25 07:50 pm
ಬೇಲಿಯೇ ಎದ್ದು ಹೊಲ ಮೇಯ್ದ ಕತೆ ; ಬ್ಯಾಂಕ್ ಮ್ಯಾನೇಜರ...
27-06-25 07:27 pm
Mangalore Police, Stock Market Fraud, Arrest:...
26-06-25 10:49 pm
Varkady, Manjeshwar Crime, Son Kills Mother:...
26-06-25 05:32 pm