ಬ್ರೇಕಿಂಗ್ ನ್ಯೂಸ್
05-07-23 10:01 pm Mangalore Correspondent ಕರಾವಳಿ
ಮಂಗಳೂರು, ಜುಲೈ 5: ಜೂನ್ ತಿಂಗಳ ಅಂತ್ಯಕ್ಕೆ ಆರಂಭಗೊಂಡ ಮುಂಗಾರು ಕಡೆಗೂ ತೀವ್ರತೆ ಪಡೆದಿದೆ. ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಮುಂಗಾರಿನ ಅಬ್ಬರ ಹಳೆಕಾಲದ ರೀತಿಯಲ್ಲೇ ಮರುಕಳಿಸಿದೆ. ಇಡೀ ದಿನವೂ ಎಡೆಬಿಡದೆ ಮಳೆ ಸುರಿಯುವುದು, ನಡು ನಡುವೆ ಬಿರುಸು ಪಡೆಯುವುದು ಮಳೆಗಾಲದ ಉಚ್ಛ್ರಾಯ ಸ್ಥಿತಿ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ನೋಡಿದರೆ, ಅದೇ ರೀತಿಯ ಅನುಭವ ಆಗುತ್ತದೆ.
ಹವಾಮಾನ ಇಲಾಖೆಯ ಪ್ರಕಾರ, ಜುಲೈ 4 ಮತ್ತು 5ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಅಂದರೆ, 24 ಗಂಟೆಯಲ್ಲಿ 20 ಸೆಂಟಿ ಮೀಟರಿಗಿಂತ(200 ಮಿಮೀ) ಹೆಚ್ಚು ಮಳೆಯಾಗುತ್ತದೆ ಅನ್ನುವ ಅಂದಾಜು ಹೇಳಲಾಗಿತ್ತು. ಬಹುತೇಕ ಅದೇ ಪ್ರಮಾಣದಲ್ಲಿ ಮಳೆಯಾಗಿದ್ದು, ಜುಲೈ 5ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 101.3 ಮಿಮೀ ಅಂದರೆ, ಹತ್ತು ಸೆಂಟಿ ಮೀಟರ್ ಗಿಂತ ಹೆಚ್ಚು ಮಳೆಯಾಗಿದೆ. ಮೂಡುಬಿದ್ರೆಯಲ್ಲಿ 143 ಮಿಮೀ(14 ಸೆಮೀ) ಅತಿ ಹೆಚ್ಚು ಮಳೆಯಾಗಿದ್ದರೆ, ಆನಂತರ ಬೆಳ್ತಂಗಡಿಯಲ್ಲಿ 114 ಮಿಮೀ, ಬಂಟ್ವಾಳದಲ್ಲಿ 123 ಮಿಮೀ, ಮಂಗಳೂರಿನಲ್ಲಿ 97, ಪುತ್ತೂರಿನಲ್ಲಿ 90, ಸುಳ್ಯದಲ್ಲಿ 70, ಕಡಬದಲ್ಲಿ 77 ಮಿಮೀ ಮಳೆಯಾಗಿದೆ. ವಾಡಿಕೆಯ ಪ್ರಕಾರ, ಈ ಸಮಯದಲ್ಲಿ 38 ಮಿಮೀ ಮಳೆಯಾಗಬೇಕಿದ್ದರೆ, ಇದೀಗ 101 ಮಿಮೀ ಮಳೆ ದಾಖಲಾಗಿದೆ.


ಜುಲೈ 6 ಮತ್ತು 7ರಂದು ಆರೆಂಜ್ ಅಲರ್ಟ್ ನೀಡಲಾಗಿದ್ದು, ಇದರ ಪ್ರಕಾರ, 115 ಮಿಮೀಗಿಂತ 200 ಮಿಮೀ ಮಳೆಯಾಗಬಹುದು ಎಂಬ ಲೆಕ್ಕಾಚಾರ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಿದೆ. ಆದರೆ ಎರಡು ದಿನಗಳಿಂದ ಧಾರಾಕಾರ ಮಳೆಯಾದರೂ, ನದಿಗಳಲ್ಲಿ ನೀರಿನ ಹರಿವು ದೊಡ್ಡ ಮಟ್ಟಿನಲ್ಲಿ ಹೆಚ್ಚಿಗೆಯಾಗಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆಯ ಮಳೆಯೂ ಬಾರದೇ ಇರುವುದರಿಂದ ಜೂನ್ ಕೊನೆಯ ವರೆಗೂ ಹೆಚ್ಚಿನ ಕಡೆಗಳಲ್ಲಿ ನದಿಗಳಲ್ಲಿ ಹರಿವು ಆರಂಭ ಆಗಿರಲಿಲ್ಲ.

ಮೊನ್ನೆ ಜುಲೈ ಬಳಿಕ ಮಳೆ ತೀವ್ರತೆ ಪಡೆದಿದ್ದು ಈಗಷ್ಟೇ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಹೀಗಾಗಿ ಎರಡು ದಿನಗಳಲ್ಲಿ ಎಡೆಬಿಡದೆ ಮಳೆ ಬಂದರೂ, ಬಂಟ್ವಾಳದಲ್ಲಿ ನೆರೆ ಆವರಿಸುವ ಸ್ಥಿತಿ ಬಂದಿಲ್ಲ. ತುಂಬೆಯ ಅಣೆಕಟ್ಟಿನಲ್ಲಿ ಇನ್ನೂ ನೀರು ತುಂಬಿಲ್ಲ. ಅಣೆಕಟ್ಟಿನ ಒಟ್ಟು 30 ಗೇಟ್ ಗಳಲ್ಲಿ 15 ಗೇಟನ್ನಷ್ಟೇ ಓಪನ್ ಮಾಡಲಾಗಿದೆ. ಇದಲ್ಲದೆ, ನೇತ್ರಾವತಿ ತುಂಬಿ ಹರಿಯುವ ಮಟ್ಟ 9 ಮೀಟರ್ ಆಗಿದ್ದರೆ, ಈಗ 3.6 ಮೀಟರ್ ಎತ್ತರದಲ್ಲಷ್ಟೇ ನೀರು ಹರಿಯುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
Hevay rain in Mangalore and moodbidri, yet dams not filled with enough water.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm