ಬ್ರೇಕಿಂಗ್ ನ್ಯೂಸ್
05-07-23 10:01 pm Mangalore Correspondent ಕರಾವಳಿ
ಮಂಗಳೂರು, ಜುಲೈ 5: ಜೂನ್ ತಿಂಗಳ ಅಂತ್ಯಕ್ಕೆ ಆರಂಭಗೊಂಡ ಮುಂಗಾರು ಕಡೆಗೂ ತೀವ್ರತೆ ಪಡೆದಿದೆ. ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಮುಂಗಾರಿನ ಅಬ್ಬರ ಹಳೆಕಾಲದ ರೀತಿಯಲ್ಲೇ ಮರುಕಳಿಸಿದೆ. ಇಡೀ ದಿನವೂ ಎಡೆಬಿಡದೆ ಮಳೆ ಸುರಿಯುವುದು, ನಡು ನಡುವೆ ಬಿರುಸು ಪಡೆಯುವುದು ಮಳೆಗಾಲದ ಉಚ್ಛ್ರಾಯ ಸ್ಥಿತಿ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ನೋಡಿದರೆ, ಅದೇ ರೀತಿಯ ಅನುಭವ ಆಗುತ್ತದೆ.
ಹವಾಮಾನ ಇಲಾಖೆಯ ಪ್ರಕಾರ, ಜುಲೈ 4 ಮತ್ತು 5ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಅಂದರೆ, 24 ಗಂಟೆಯಲ್ಲಿ 20 ಸೆಂಟಿ ಮೀಟರಿಗಿಂತ(200 ಮಿಮೀ) ಹೆಚ್ಚು ಮಳೆಯಾಗುತ್ತದೆ ಅನ್ನುವ ಅಂದಾಜು ಹೇಳಲಾಗಿತ್ತು. ಬಹುತೇಕ ಅದೇ ಪ್ರಮಾಣದಲ್ಲಿ ಮಳೆಯಾಗಿದ್ದು, ಜುಲೈ 5ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 101.3 ಮಿಮೀ ಅಂದರೆ, ಹತ್ತು ಸೆಂಟಿ ಮೀಟರ್ ಗಿಂತ ಹೆಚ್ಚು ಮಳೆಯಾಗಿದೆ. ಮೂಡುಬಿದ್ರೆಯಲ್ಲಿ 143 ಮಿಮೀ(14 ಸೆಮೀ) ಅತಿ ಹೆಚ್ಚು ಮಳೆಯಾಗಿದ್ದರೆ, ಆನಂತರ ಬೆಳ್ತಂಗಡಿಯಲ್ಲಿ 114 ಮಿಮೀ, ಬಂಟ್ವಾಳದಲ್ಲಿ 123 ಮಿಮೀ, ಮಂಗಳೂರಿನಲ್ಲಿ 97, ಪುತ್ತೂರಿನಲ್ಲಿ 90, ಸುಳ್ಯದಲ್ಲಿ 70, ಕಡಬದಲ್ಲಿ 77 ಮಿಮೀ ಮಳೆಯಾಗಿದೆ. ವಾಡಿಕೆಯ ಪ್ರಕಾರ, ಈ ಸಮಯದಲ್ಲಿ 38 ಮಿಮೀ ಮಳೆಯಾಗಬೇಕಿದ್ದರೆ, ಇದೀಗ 101 ಮಿಮೀ ಮಳೆ ದಾಖಲಾಗಿದೆ.


ಜುಲೈ 6 ಮತ್ತು 7ರಂದು ಆರೆಂಜ್ ಅಲರ್ಟ್ ನೀಡಲಾಗಿದ್ದು, ಇದರ ಪ್ರಕಾರ, 115 ಮಿಮೀಗಿಂತ 200 ಮಿಮೀ ಮಳೆಯಾಗಬಹುದು ಎಂಬ ಲೆಕ್ಕಾಚಾರ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಿದೆ. ಆದರೆ ಎರಡು ದಿನಗಳಿಂದ ಧಾರಾಕಾರ ಮಳೆಯಾದರೂ, ನದಿಗಳಲ್ಲಿ ನೀರಿನ ಹರಿವು ದೊಡ್ಡ ಮಟ್ಟಿನಲ್ಲಿ ಹೆಚ್ಚಿಗೆಯಾಗಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆಯ ಮಳೆಯೂ ಬಾರದೇ ಇರುವುದರಿಂದ ಜೂನ್ ಕೊನೆಯ ವರೆಗೂ ಹೆಚ್ಚಿನ ಕಡೆಗಳಲ್ಲಿ ನದಿಗಳಲ್ಲಿ ಹರಿವು ಆರಂಭ ಆಗಿರಲಿಲ್ಲ.

ಮೊನ್ನೆ ಜುಲೈ ಬಳಿಕ ಮಳೆ ತೀವ್ರತೆ ಪಡೆದಿದ್ದು ಈಗಷ್ಟೇ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಹೀಗಾಗಿ ಎರಡು ದಿನಗಳಲ್ಲಿ ಎಡೆಬಿಡದೆ ಮಳೆ ಬಂದರೂ, ಬಂಟ್ವಾಳದಲ್ಲಿ ನೆರೆ ಆವರಿಸುವ ಸ್ಥಿತಿ ಬಂದಿಲ್ಲ. ತುಂಬೆಯ ಅಣೆಕಟ್ಟಿನಲ್ಲಿ ಇನ್ನೂ ನೀರು ತುಂಬಿಲ್ಲ. ಅಣೆಕಟ್ಟಿನ ಒಟ್ಟು 30 ಗೇಟ್ ಗಳಲ್ಲಿ 15 ಗೇಟನ್ನಷ್ಟೇ ಓಪನ್ ಮಾಡಲಾಗಿದೆ. ಇದಲ್ಲದೆ, ನೇತ್ರಾವತಿ ತುಂಬಿ ಹರಿಯುವ ಮಟ್ಟ 9 ಮೀಟರ್ ಆಗಿದ್ದರೆ, ಈಗ 3.6 ಮೀಟರ್ ಎತ್ತರದಲ್ಲಷ್ಟೇ ನೀರು ಹರಿಯುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
Hevay rain in Mangalore and moodbidri, yet dams not filled with enough water.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
14-07-26 07:55 pm
HK News Staffer
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
14-07-26 09:13 pm
HK News Staffer
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm