ಬ್ರೇಕಿಂಗ್ ನ್ಯೂಸ್
23-06-23 08:32 pm Mangalore Correspondent ಕರಾವಳಿ
ಮಂಗಳೂರು, ಜೂನ್ 23: ಖಾಸಗಿ ಬಸ್ಸಿನ ಧಾವಂತಕ್ಕೆ ಗುರುಪುರ ಜಂಕ್ಷನ್ನಲ್ಲಿ ಬೈಕ್ ಸವಾರ ಯುವಕ ಸಾವನ್ನಪ್ಪಿದ ಘಟನೆ ಖಂಡಿಸಿ ಗುರುವಾರ ಬೆಳಗ್ಗೆ ಮಳೆಯನ್ನೂ ಲೆಕ್ಕಿಸದೆ ಸಾರ್ವಜನಿಕರು ಕೈಕಂಬದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
100ಕ್ಕೂ ಹೆಚ್ಚು ಮಂದಿ ಕೈಕಂಬ ಜಂಕ್ಷನ್ನಲ್ಲಿ ಸೇರಿದ್ದು ಮಳೆಯ ನಡುವೆಯೂ ರಸ್ತೆ ತಡೆ ನಡೆಸಿದ್ದಾರೆ, ಸ್ಥಳಕ್ಕೆ ಆರ್ ಟಿಓ ಅಥವಾ ಜಿಲ್ಲಾಧಿಕಾರಿ ಬರಬೇಕೆಂದು ಪಟ್ಟು ಹಿಡಿದಿದ್ದಾರೆ. ಬಜ್ಪೆ ಪೊಲೀಸರು ಬಸ್ಸಿನ ವೇಗಕ್ಕೆ ಕಡಿವಾಣ ಹಾಕುತ್ತೇವೆಂದು ಹೇಳಿದರೂ, ಜನರು ಬಿಡಲಿಲ್ಲ. ಕೊನೆಗೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಸ್ಥಳಕ್ಕೆ ಬಂದು ಖಾಸಗಿ ಬಸ್ಸುಗಳ ವೇಗಕ್ಕೆ ಕಡಿವಾಣ ಹಾಕೋದು ಸೇರಿದಂತೆ ಅವರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಎಡಪದವಿನಲ್ಲಿ ರಕ್ಷಿತ್ ಎಂಬ ಯುವಕ ಬೈಕಿಗೆ ಬಸ್ ಡಿಕ್ಕಿಯಾಗಿ ಸಾವು ಕಂಡಿದ್ದ. ಬುಧವಾರ ಬೆಳಗ್ಗೆ ಪೊಳಲಿ ಕರಿಯಂಗಳ ನಿವಾಸಿ ಸಂತೋಷ್ ಕುಮಾರ್ ಎಂಬ ಯುವಕ ಬೈಕಿನಲ್ಲಿ ಸಾಗುತ್ತಿದ್ದಾಗ ಮೂಡುಬಿದ್ರೆಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಗುರುಪುರದಲ್ಲಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ. ಸಂತೋಷ್ ಕುಮಾರ್ ವಾಮಂಜೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದು ಎಂದಿನಂತೆ ಬೈಕಿನಲ್ಲಿ ಸಾಗುತ್ತಿದ್ದಾಗ ಬಸ್ ಡಿಕ್ಕಿಯಾಗಿತ್ತು. ಬಸ್ ಚಾಲಕನ ಧಾವಂತವೇ ಅಪಘಾತಕ್ಕೆ ಕಾರಣವಾಗಿತ್ತು.
ಮಂಗಳೂರು- ಮೂಡುಬಿದ್ರೆ ಮಧ್ಯೆ ಖಾಸಗಿ ಬಸ್ಸುಗಳದ್ದೇ ಕಾರುಬಾರು ಆಗಿದ್ದು, ಸಮಯ ಪಾಲನೆ ನೆಪದಲ್ಲಿ ವೇಗಕ್ಕೆ ನಿಯಂತ್ರಣ ಇಲ್ಲದೆ ಚಲಾಯಿಸುತ್ತಾರೆ. ಕರ್ಕಶ ಹಾರ್ನ್ ಕೇಳಿದರೆ, ಎದುರಿನಲ್ಲಿದ್ದ ವಾಹನಗಳು ರಸ್ತೆಯನ್ನೇ ಬಿಟ್ಟುಕೊಡುವಷ್ಟರ ಮಟ್ಟಿಗೆ ಖಾಸಗಿ ಬಸ್ಸುಗಳ ಕಿರಿಕಿರಿ ಇರುತ್ತದೆ. ಬಸ್ ಚಾಲಕರ ಧಾವಂತಕ್ಕೆ ಈ ದಾರಿಯಲ್ಲಿ ಹಲವು ಹೆಣಗಳು ಬಿದ್ದರೂ, ಅಧಿಕಾರಿ ವರ್ಗ ಈ ರಸ್ತೆಯಲ್ಲಿ ಸರ್ಕಾರಿ ಬಸ್ ಇಳಿಸಲು ಮುಂದಾಗಿಲ್ಲ. ಪ್ರತಿ ಬಾರಿ ಈ ಕುರಿತ ಪ್ರಸ್ತಾಪ ಬಂದಾಗಲೂ ಖಾಸಗಿ ಲಾಬಿಗೆ ಮಣಿದು ಸರ್ಕಾರಿ ಬಸ್ ಚಾಲನೆಯನ್ನು ಮುಂದಕ್ಕೆ ಹಾಕುತ್ತಾರೆ. ಈಗ ಸಾರ್ವಜನಿಕರೇ ಖಾಸಗಿ ಬಸ್ ಸಾಕು, ಸರ್ಕಾರಿ ಬಸ್ ಇಳಿಸಿ ಎಂದು ಆಗ್ರಹ ಮಾಡುತ್ತಿದ್ದಾರೆ.
Local residents halted buses at Kaikamba Junction on Friday, as they condemned the tragic incident that resulted in the death of a bike rider near Gurupura Junction on Thursday. The victim, identified as Santosh Kumar from Polali Kariyam, lost his life in the unfortunate accident.
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
22-08-25 10:00 pm
HK News Desk
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
22-08-25 05:07 pm
Mangalore Correspondent
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
23-08-25 11:11 am
Mangaluru Correspondent
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm