ಬ್ರೇಕಿಂಗ್ ನ್ಯೂಸ್
06-06-23 11:00 pm Mangalore Correspondent ಕರಾವಳಿ
ಮಂಗಳೂರು, ಜೂನ್ 6: ರಾಜ್ಯದ ಜನ ಬಿಜೆಪಿ ಮೇಲಿನ ಆಕ್ರೋಶದಿಂದ ನಮಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಅದರ ನಾಯಕತ್ವ ನಂಬಿ ನಮಗೆ 135 ಸೀಟ್ ಕೊಟ್ಟಿದ್ದಾರೆ. ನಾವು ಐದು ಗ್ಯಾರಂಟಿ ತಯಾರು ಮಾಡಿ ಕೊಟ್ಟಿದ್ದೆವು. ನಾವೇನು ಗ್ಯಾರಂಟಿ ಘೋಷಣೆಯನ್ನು ಬೇಕಾಬಿಟ್ಟಿ ತೀರ್ಮಾನಿಸಿರಲಿಲ್ಲ. ಹಣಕಾಸು ಖರ್ಚಿನ ಲೆಕ್ಕಾಚಾರ ಮಾಡಿ ಸಾದ್ಯತೆ ಬಳಿಕ ಪ್ರಕಟ ಮಾಡಿದ್ದೆವು ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷರೂ ಆಗಿದ್ದ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ, ಕಾರ್ಯಕರ್ತರನ್ನುದ್ದೇಶಿ ಪರಮೇಶ್ವರ್ ಭಾಷಣ ಮಾಡಿದರು. ನಾವು ಯಾವುದೇ ಬೇಜವಾಬ್ದಾರಿಯಿಂದ ಗ್ಯಾರಂಟಿ ಘೋಷಣೆ ಮಾಡಿಲ್ಲ. ಕಾಂಗ್ರೆಸ್ ಗ್ಯಾರಂಟಿ ಕೊಟ್ಟು ದಿವಾಳಿ ಮಾಡುತ್ತೆ ಅಂತ ಬಿಜೆಪಿ ಮತ್ತು ಮೋದಿ ಹೇಳ್ತಾ ಇದಾರೆ. ಆದರೆ ನಾವು ಗ್ಯಾರಂಟಿ ಘೋಷಣೆಯನ್ನು ಯಾವುದೇ ಬೇಜವಾಬ್ದಾರಿಯಿಂದ ಮಾಡಿರಲಿಲ್ಲ ಎಂದರು.
ಗೃಹ ಇಲಾಖೆ ನನಗೆ ಈ ಬಾರಿ ಹ್ಯಾಟ್ರಿಕ್ ಸಿಕ್ಕಿದೆ, ಈ ಖಾತೆ ಕೊಟ್ಟಾಗ ನಾನು ಸಿದ್ದರಾಮಯ್ಯರಿಗೆ ಹೇಳಿದೆ. ನಿಮಗೆ ಯಾಕೆ ಇಷ್ಟು ಪ್ರೀತಿ? ಜನರಿಗೆ ಸೇವೆ ಮಾಡಲು ಬೇರೆ ಖಾತೆ ಕೊಡಿ ಅಂದೆ. ಸೆಲ್ಯೂಟ್ , ಸೆಲ್ಯೂಟ್ ಒಂದೇ ಆಯ್ತು ನನಗೆ ಅಂದಿದ್ದೆ. ಆದರೆ ಅವರು ದ.ಕ ಜಿಲ್ಲೆಯರಿಗೆ ನೀವೇ ಹೋಂ ಮಿನಿಸ್ಟರ್ ಆಗಬೇಕು ಅಂದ್ರು.
ಸದ್ಯ ಪೊಲೀಸರ ಸಭೆ ನಡೆಸಿ ಕಠಿಣ ಕ್ರಮಗಳ ಬಗ್ಗೆ ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ನೈತಿಕ ಪೊಲೀಸ್ ಗಿರಿ ಸಹಿಸಲ್ಲ ಅಂದಿದ್ದೇನೆ. ಪ್ರಣಾಳಿಕೆ ರಚನೆ ವೇಳೆ ಚೇಂಬರ್ ಆಫ್ ಕಾಮರ್ಸ್ ನವರು ಹೇಳಿದ್ದರು. ಕೋಮು ವಿಚಾರದ ಕಾರಣಕ್ಕೆ ಇಲ್ಲಿ ಇನ್ವೆಸ್ಟ್ ಮೆಂಟ್ ಬರಲ್ಲ ಅಂದ್ರು. ಅದಕ್ಕಾಗಿ ಇಲ್ಲಿನ ವಾತಾವರಣ ಬದಲಾಗಬೇಕು. ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಖಡಕ್ ಸೂಚನೆ ಕೊಟ್ಟಿದ್ದೇನೆ.
ಮೊದಲು ಹೇಗೆ ಇದ್ರೋ ಗೊತ್ತಿಲ್ಲ, ಏನೇನ್ ಆಟ ಆಡಿದ್ರೋ ಗೊತ್ತಿಲ್ಲ. ಕೇಸರಿಕರಣ ಮಾಡಿದ್ರೋ ಮತ್ತೊಂದು ಈಗ ನನಗೆ ಅಗತ್ಯ ಇಲ್ಲ. ಆದರೆ ಇನ್ನು ಮುಂದೆ ಪೊಲೀಸರು ಸರಿಯಾಗಿ ಕೆಲಸ ಮಾಡಬೇಕು. ಮಾಡದೇ ಇದ್ರೆ ನಮ್ಮ ಔಷಧಾಲಯದಲ್ಲಿ ಬೇರೆ ಔಷಧಿ ಇದೆ ಎಂದು ಖಡಕ್ಕಾಗಿ ಹೇಳಿದರು. ಮತ್ತೆ ಗೃಹ ಸಚಿವ ಸ್ಥಾನದ ಪೋಸ್ಟ್ ನನಗೇ ಸಿಕ್ಕಿದೆ, ನಾನು ಈ ಜಿಲ್ಲೆಯನ್ನ ಸರಿ ಮಾಡ್ತೇನೆ. ಇಲ್ಲಿ ಕಾಂಗ್ರೆಸ್ ಸೋತಿದೆ ಅನ್ನೋ ಭಾವನೆ ಬೇಡ. ಇವತ್ತು ಅಧಿಕಾರ ಸಿಕ್ಕಿದೆ, ಸರ್ಕಾರ ನಿಮ್ಮ ಸರ್ಕಾರ, ನಿಮ್ಮ ಜೊತೇಲಿ ಇರಲಿದೆ ಎಂದರು.
If Police Department doesn't work duly we have a medicine for them says Home Minister G. Parameshwara in Mangalore.
29-06-25 10:48 pm
Bangalore Correspondent
DK Shivakumar, R Ashok: ಡಿಕೆಶಿ ಜಾತಕ ಸರಿಯಿಲ್ಲ...
29-06-25 10:33 pm
Grace Ministry Theological Bible College, Ban...
29-06-25 04:49 pm
Fact Finding, Police, Mangalore Mob Lynching...
29-06-25 03:04 pm
RCB, Three IPS Officers Suspend: ಚಿನ್ನಸ್ವಾಮಿ...
28-06-25 04:27 pm
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
27-06-25 10:17 pm
Mangalore Correspondent
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
29-06-25 11:23 pm
Mangalore Correspondent
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm
Rape, Mangalore Crime, Someshwara Beach: ಇನ್ಸ...
28-06-25 07:30 pm