ಬ್ರೇಕಿಂಗ್ ನ್ಯೂಸ್
18-05-23 08:18 pm Mangalore Correspondent ಕರಾವಳಿ
ಪುತ್ತೂರು, ಮೇ 18: ಪುತ್ತೂರಿನಲ್ಲಿ ತಮ್ಮದೇ ಕಾರ್ಯಕರ್ತರಿಗೆ ಪೊಲೀಸರ ಮೂಲಕ ಥಳಿಸಿದ ಕೃತ್ಯದಿಂದ ಆಗಿರುವ ಡ್ಯಾಮೇಜನ್ನು ಕಂಟ್ರೋಲ್ ಮಾಡಲು ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಕಾರ್ಯಕರ್ತರಿಗೆ ಅಮಾನುಷ ಹಲ್ಲೆ ನಡೆಸಿರುವುದು ಬಿಜೆಪಿ ಒಳಗಡೆ ತಳಮಳ ಸೃಷ್ಟಿಸಿರುವಾಗಲೇ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆ ಘಟನೆಯನ್ನು ಕಾಂಗ್ರೆಸಿಗರ ತಲೆಗೆ ಕಟ್ಟುವ ಪ್ರಯತ್ನ ಮಾಡಿದ್ದಾರೆ.
ಘಟನೆ ಹಿಂದೆ ಕಾಂಗ್ರೆಸಿಗರಿದ್ದಾರೆ. ನೂರಕ್ಕೆ ನೂರು ಕಾಂಗ್ರೆಸ್ ಕಿತಾಪತಿ. ಸರಕಾರ ಬದಲಾಗುತ್ತಿದ್ದಂತೆ ಪೊಲೀಸರು ಈ ರೀತಿ ವರ್ತಿಸಬಾರದಿತ್ತು. ಕಾರ್ಯಕರ್ತರು ಅಂದ ಮೇಲೆ ಕೆಲವು ವ್ಯತ್ಯಾಸಗಳಾಗೋದು ಸಹಜ. ಹಾಗೆಂದು ದನಕ್ಕೆ ಬಡಿದ ರೀತಿ ಬಡಿಯುವುದು, ಅಮಾನುಷವಾಗಿ ನಡೆದುಕೊಂಡಿರುವುದನ್ನು ಖಂಡಿಸುತ್ತೇನೆ. ಇದರ ಹಿಂದೆ ಯಾರಿದ್ದಾರೆ, ಯಾರು ಪೊಲೀಸರಿಗೆ ಒತ್ತಡ ಹಾಕಿದ್ದಾರೆ, ಅವರಿಗೆ ಶಿಕ್ಷೆ ಆಗಬೇಕು. ಹಲ್ಲೆ ನಡೆಸಿರುವ ಡಿವೈಎಸ್ಪಿ ಅಧಿಕಾರಿಯನ್ನೂ ಅಮಾನತು ಮಾಡಬೇಕು. ನಾವು ಇದನ್ನು ಹಾಗೇ ಬಿಡುವುದಿಲ್ಲ ಎಂದು ಪ್ರಭಾಕರ ಭಟ್ ಹೇಳಿದ್ದಾರೆ.
ಯಾವ ಮುಖ ಇಟ್ಟುಕೊಂಡು ಬರುತ್ತಾರೆ-ಸೂಲಿಬೆಲೆ
ಇದೇ ವೇಳೆ, ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಮೋದಿ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆ, ಒಂದು ರಾಷ್ಟ್ರೀಯ ಪಕ್ಷದ ನಾಯಕರಾಗಿ ಬ್ಯಾನರ್ ಹಾಕಿದ ಮಾತ್ರಕ್ಕೆ ತಮ್ಮ ಕಾರ್ಯಕರ್ತರಿಗೆ ಪೊಲೀಸರ ಮೂಲಕ ಹೊಡೆಸಿದ್ದು ಅಕ್ಷಮ್ಯ. ತಾವೇ ಹೊಡೆಸಿ ಈಗ ಆಸ್ಪತ್ರೆಗೆ ಭೇಟಿ ಕೊಡಬೇಕು ಅಂದರೆ, ಯಾವ ಮುಖ ಇಟ್ಟುಕೊಂಡು ಬರುತ್ತಾರೆ. ಈ ರೀತಿ ಆಗಬಾರದಿತ್ತು. ಯಾರದೇ ಒತ್ತಡ ಇದ್ದರೂ, ಪೊಲೀಸರು ಹೀಗೆ ವರ್ತಿಸಬಾರದಿತ್ತು. ಹಿಂದುತ್ವ ನಂಬಿಕೊಂಡ ಯುವಕರ ಮೇಲೆ ಇಂಥ ಹಲ್ಲೆ ನಡೆದಿರುವುದನ್ನು ಕಟುವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಹಿಂದು ಕಾರ್ಯಕರ್ತರಿಗೆ ಧಿಕ್ಕಾರ ಹೇಳಿದ್ದ ನಾಯಕರು
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಸದಾನಂದ ಗೌಡರ ಬ್ಯಾನರ್ ಹಾಕಿ, ಚಪ್ಪಲಿ ಹಾರ ಹಾಕಿರುವುದನ್ನು ವಿರೋಧಿಸಿ ಬಿಜೆಪಿ ನಾಯಕರೇ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಲ್ಲದೆ, ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಪ್ರತಿಭಟನೆ ಮಾಡಿ, ಹಿಂದುತ್ವ ಕಾರ್ಯಕರ್ತರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದರು. ಇದು ಅರುಣ್ ಪುತ್ತಿಲ ಪರ ಇರುವವರು ಮಾಡಿದ ಕೃತ್ಯ ಎಂದುಕೊಂಡು ಬಿಜೆಪಿ ನಾಯಕರು ಪ್ರತಿಭಟನೆಯ ನಾಟಕ ಮಾಡಿದ್ದರು. ಆದರೆ ಇದೀಗ ಪೊಲೀಸರು ಹಲ್ಲೆ ನಡೆಸಿದ್ದು ಉಲ್ಟಾ ಆಗಿದ್ದು ಬಿಜೆಪಿ ನಾಯಕರಿಗೇ ತಿರುಗುಬಾಣವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷನೇ ಪೊಲೀಸರಿಗೆ ಹೇಳಿ ಥಳಿಸುವಂತೆ ಮಾಡಿದ್ದಿರಬೇಕೆಂದು ಕಾರ್ಯಕರ್ತರು ಆಕ್ರೋಶ ತೋರುತ್ತಿದ್ದಾರೆ.
Puttur Police Autrocity over BJP Banner of footwear on Nalin Kateel and Sadananda Gowda, Kalladka Bhat, Chakravarti Sulibele visit victims at hospital. Kalladka bhat says congress coming to power is the reason for such Autrocity by Police. Speaking to media person's Chakravarti Sulibele said BJP shouldn't have done this to thier own Hindu Karyakartas he slammed.
30-06-25 02:55 pm
HK News Desk
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
ಕರ್ಣಾಟಕ ಬ್ಯಾಂಕ್ ಸಿಇಓ, ಎಂಡಿ ಶ್ರೀಕೃಷ್ಣನ್ ಹರಿಹರ...
29-06-25 10:48 pm
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 03:20 pm
Mangalore Correspondent
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
30-06-25 06:12 pm
Mangalore Correspondent
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm