ಬ್ರೇಕಿಂಗ್ ನ್ಯೂಸ್
15-03-23 04:41 pm Mangalore Correspondent ಕರಾವಳಿ
ಪುತ್ತೂರು, ಮಾರ್ಚ್ 15 : ಒಬ್ಬ ರೌಡಿಶೀಟರ್ ಗೆ ತಲೆಬಾಗುವ ದೇಶದ ಪ್ರಧಾನಿ ನರೇಂದ್ರ ಮೋದಿಯಿಂದ ದೇಶದ ಜನ ಬೇರೇನನ್ನು ನಿರೀಕ್ಷಿಸಲು ಸಾಧ್ಯ. ಇವರು ಪಾಕಿಸ್ತಾನ, ಚೈನಾ ಎದೆಯೊಡ್ಡಿ ನಿಲ್ಲಲು ಸಾಧ್ಯವೇ ಎಂದು ಕಾಂಗ್ರೇಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಪುತ್ತೂರಿನ ಮುರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ನೆಪದಲ್ಲಿ ಪ್ರಧಾನಿ ಮೋದಿ ವಾರಕ್ಕೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮೊನ್ನೆ ಬೆಂಗಳೂರುವ-ಮೈಸೂರು ಎಕ್ಸ್ಪ್ರೆಸ್ ಹೈ ವೇ ಉದ್ಘಾಟನೆಗೆ ಆಗಮಿಸಿದ್ದರು. ಅಲ್ಲಿ ರಸ್ತೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಮೊದಲೇ ಉದ್ಘಾಟನೆ ಮಾಡಿದ್ದಾರೆ.
ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಮಂಡ್ಯದ ರೈತರನ್ನು ಸಿದ್ಧಪಡಿಸಲು ಬಿಜೆಪಿ ಯತ್ನಿಸಿತ್ತು. ಆದರೆ ಬಿಜೆಪಿ ಪಕ್ಷಕ್ಕೆ ಯಾವುದೇ ರೈತ ವ್ಯಕ್ತಿ ಸಿಗದ ಕಾರಣ ಓರ್ವ ರೌಡಿಶೀಟರ್ ನನ್ನು ಪ್ರಧಾನಿಯ ಸ್ವಾಗತಕ್ಕೆ ನಿಯೋಜಿಸಿದೆ. ಪ್ರಧಾನಿ ಮೋದಿ ಆ ರೌಡಿಶೀಟರ್ ಮುಂದೆ ತಲೆಬಾಗಿ ನೀನೆ ನಮ್ಮನ್ನು ನೋಡ್ಕೋಬೇಕು ಎಂದು ನಮಸ್ಕರಿಸಿದ್ದಾರೆ. ಈವರೆಗೂ ದೇಶದ ಪ್ರಧಾನಿ ರೌಡಿಯೊಬ್ಬನಿಗೆ ತಲೆಬಾಗಿ ನಮಸ್ಕರಿಸಿದ್ದನ್ನು ನೋಡಿಲ್ಲ.
ಓರ್ವ ರೌಡಿಶೀಟರ್ ಮುಂದೆ ತಲೆಬಾಗುವ ಪ್ರಧಾನಿ ಮೋದಿಯಿಂದ ಚೈನಾ, ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮವನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಹೈವೇ ಕಾಮಗಾರಿ ಅಪೂರ್ಣಗೊಂಡಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಈಗಲೇ ಟೋಲ್ ಸಂಗ್ರಹಿಸಲು ಆರಂಭಿಸಿದೆ ಎಂದ ಅವರು ಬಿಜೆಪಿ ದೇಶದಲ್ಲಿ ಮತ್ತೆ ರಾಜಪ್ರಭುತ್ವವನ್ನು ತರುವ ಪ್ರಯತ್ನದಲ್ಲಿದೆ. ಕೇವಲ ಪಟೇಲರಿಗೆ, ಶಾನುಭೋಗರಿಗೆ ಮಾತ್ರ ಬದುಕಲು ಇಲ್ಲಿ ಅವಕಾಶ ನೀಡಿ, ದೇಶದ ಜನರನ್ನೆಲ್ಲಾ ಗುಲಾಮರನ್ನಾಗಿ ಬಿಜೆಪಿ ಮಾಡಲಿದೆ. ದೇಶದಲ್ಲಿ 18 ಶೇಕಡಾ ಮಹಿಳೆಯರಿಗೆ ಸ್ಥಳೀಯಾಡಳಿತ ಸೇರಿ ಚುನಾವಣೆ ರಾಜಕೀಯದಲ್ಲಿ ಅವಕಾಶ ಕೊಟ್ಟ ಹಿರಿಮೆ ರಾಜೀವ ಗಾಂಧಿಗೆ ಸಲ್ಲುತ್ತದೆ. ಹಾಗಾಗಿ ಜನರು ಯಾರಿಗೆ ಮತ ಕೊಡಬೇಕು ಎಂಬುದನ್ನು ಚಿಂತಿಸಿ ನಿರ್ಧರಿಸಬೇಕು ಎಂದು ಬಿಕೆ ಹರಿಪ್ರಸಾದ್ ಹೇಳಿದರು.
PM Modi with rowdy sheeter surfaces in Karnataka, What more can be expected from PM slams Senior Congress leader BK Hariprasad.
28-06-25 12:14 pm
HK News Desk
ಹುಲಿ ದಾಳಿ ಮಾಡಿದ್ದ ಹಸುವಿಗೆ ವಿಷ ಹಾಕಿದ್ದ ಸ್ಥಳೀಯರ...
27-06-25 10:42 pm
Cm Siddaramaiah, Mangalore, Hate speech, Poli...
27-06-25 09:56 pm
ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ, ಜಾತ್ಯತೀತ' ಪದ ತ...
27-06-25 05:38 pm
Five Tigers Die Male Mahadeshwara Forest: ಮಲೆ...
27-06-25 02:46 pm
27-06-25 01:44 pm
HK News Desk
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
27-06-25 10:17 pm
Mangalore Correspondent
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
27-06-25 10:59 pm
HK News Desk
Davanagere News, Crime, Aunty: 25 ವರ್ಷದ ಅಳಿಯನ...
27-06-25 07:50 pm
ಬೇಲಿಯೇ ಎದ್ದು ಹೊಲ ಮೇಯ್ದ ಕತೆ ; ಬ್ಯಾಂಕ್ ಮ್ಯಾನೇಜರ...
27-06-25 07:27 pm
Mangalore Police, Stock Market Fraud, Arrest:...
26-06-25 10:49 pm
Varkady, Manjeshwar Crime, Son Kills Mother:...
26-06-25 05:32 pm