ಬ್ರೇಕಿಂಗ್ ನ್ಯೂಸ್
08-03-23 12:47 pm Mangalore Correspondent ಕರಾವಳಿ
ಮಂಗಳೂರು, ಮಾ.8: ಉಡುಪಿ ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿ ಕೊಟ್ಟಿದ್ದರು ಅನ್ನುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆ ವಿವಾದಕ್ಕೀಡಾಗಿದೆ. ಇತ್ತೀಚೆಗೆ ಮೂಡುಬಿದ್ರೆಯ ನೂರಾನಿ ಮಸೀದಿಯ ಕಾರ್ಯಕ್ರಮದಲ್ಲಿ ಮತ ಸೌಹಾರ್ದ ವಿಚಾರದಲ್ಲಿ ಮಿಥುನ್ ರೈ ಮಾಡಿದ್ದ ಭಾಷಣದ ತುಣುಕು ವೈರಲ್ ಆಗಿದ್ದು, ಕೃಷ್ಣ ಮಠಕ್ಕೂ ಮುಸ್ಲಿಂ ರಾಜರೇ ಭೂಮಿ ಕೊಟ್ಟಿದ್ದರು, ಅದು ಈ ನಾಡಿನ ಸೌಹಾರ್ದ, ಸಾಮರಸ್ಯದ ಪ್ರತೀಕ ಎಂದಿದ್ದು ಕೆಲವರ ವಿರೋಧಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಿಥುನ್ ರೈ ಬಳಿ ಮಾಹಿತಿ ಕೇಳಿದಾಗ, ನಾನೇನು ಇತಿಹಾಸಕಾರ ಅಲ್ಲ. ಆ ರೀತಿ ಹೇಳಿಕೆ ನೀಡಿದ್ದು ಹೌದು. ಅದನ್ನು ನಿರಾಕರಣೆ ಮಾಡುವುದಿಲ್ಲ. ಈ ಹಿಂದೆ ಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ಇಫ್ತಾರ್ ಸೌಹಾರ್ದ ಕೂಟ ಏರ್ಪಡಿಸಿದ್ದಾಗ ಆ ರೀತಿ ಹೇಳಿಕೆ ನೀಡಿದ್ದರು. ಕೃಷ್ಣ ಮಠಕ್ಕೆ ಮುಸ್ಲಿಂ ರಾಜರೇ ಭೂಮಿ ಕೊಟ್ಟಿದ್ದರು, ಆ ಜಾಗದಲ್ಲಿ ಮಠವನ್ನು ಕಟ್ಟಲಾಗಿತ್ತು ಎಂದು ಹೇಳಿಕೆ ನೀಡಿದ್ದರು. ಅದು ಪತ್ರಿಕೆಯಲ್ಲಿ ಬಂದಿರುವ ದಾಖಲೆಯೂ ನನ್ನಲ್ಲಿದೆ. ನಾನು ಅವರ ಹೇಳಿಕೆಯನ್ನು ಆಧರಿಸಿ ಮಾತನಾಡಿದ್ದೇನೆ ಹೊರತು ನನ್ನ ಸ್ವಂತ ಅಭಿಪ್ರಾಯ ಅಲ್ಲ ಎಂದು ಹೇಳಿದ್ದಾರೆ.
![]()
ಆದರೆ, ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿ ಕೊಟ್ಟಿರುವ ಯಾವುದೇ ಉದಾಹರಣೆ ಇಲ್ಲ ಎನ್ನುವುದು ಇದನ್ನು ವಿವಾದ ಎಬ್ಬಿಸುತ್ತಿರುವವರ ಅಹವಾಲು. ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಉಂಬಳಿ ಕೊಟ್ಟಿರುವ ಯಾವುದೇ ದಾಖಲೆ ಇಲ್ಲ ಎಂದು ಅಲ್ಲಿನ ಭಕ್ತರು ಹೇಳುತ್ತಾರೆ. ಇದೇ ವಿಚಾರದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದು, ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಉಂಬಳಿ ಕೊಟ್ಟಿರುವ ದಾಖಲೆ ಇಲ್ಲ. ಪಕ್ಕದಲ್ಲಿರುವ ಉಡುಪಿಯ ಜಾಮಿಯಾ ಮಸೀದಿಗೆ ಮುಸ್ಲಿಂ ರಾಜರು ಜಾಗ ಕೊಟ್ಟಿರಬಹುದು. ಮಿಥುನ್ ರೈ ಮತ ಗಳಿಸುವುದಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಿರಬಹುದು. ಯಾವ ಆಧಾರದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಇವೆಲ್ಲ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಮಿಥುನ್ ರೈ ಹಿಂದು- ಮುಸ್ಲಿಮರ ಸೌಹಾರ್ದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು. ಬಪ್ಪನಾಡಿನಲ್ಲಿ ಹಿಂದು – ಮುಸ್ಲಿಂ ಸೌಹಾರ್ದ ಇದೆ, ಹಾಗೆಯೇ ಉಡುಪಿ ಕೃಷ್ಣ ಮಠದಲ್ಲೂ ಅದೇ ರೀತಿಯ ಬಾಂಧವ್ಯ ಇದೆ. ತುಳುವಿನ ಪಾಡ್ದನದಲ್ಲೂ ಬಾಂಧವ್ಯ ಸಾರುವ ಉಲ್ಲೇಖಗಳಿವೆ. ಈಗಿನ ಕಾಲದಲ್ಲಿ ಮಾತ್ರ ಅವೆಲ್ಲವನ್ನೂ ಮರೆಮಾಚಿ ಹಿಂದು- ಮುಸ್ಲಿಂ ದ್ವೇಷ ಕಾರುವ ರೀತಿ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
#Udupi #SriKrishnaMatha controversy, #congress leader #MithunRai says temple land was gifted by #Muslim king pic.twitter.com/4YMGjYy3Sd
— Headline Karnataka (@hknewsonline) March 8, 2023
Udupi Sri Krishna Matha controversy, congress leader Mithun Rai says temple land was gifted by Muslim king. Pejawar Seer Sri Vishwesha Theertha himself has quoted it he added.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm