ಬ್ರೇಕಿಂಗ್ ನ್ಯೂಸ್
23-02-23 01:04 pm Mangalore Correspondent ಕರಾವಳಿ
ಮಂಗಳೂರು, ಫೆ.23: ಪೊಲೀಸ್ ಅಧಿಕಾರಿಯೇ ತನ್ನನ್ನು ಸೆಕ್ಸ್ ಗೆ ಆಹ್ವಾನಿಸ್ತಾರೆಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿ ಅಚ್ಚರಿಗೆ ಕಾರಣವಾಗಿದ್ದ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದ್ದಾರೆ. ಸೆಕ್ಸ್ ಗೆ ಕರೆದಿರುವ ಅಧಿಕಾರಿ ಯಾರು, ಅವರ ಹೆಸರೇನು ಎಂದು ಕೇಳಿದ್ದಾರೆ.
ಸಿಸಿಬಿ ಎಸಿಪಿ ಪರಮೇಶ್ವರ ಹೆಗಡೆ ಮತ್ತು ಸಿಸಿಆರ್ ಬಿ ಎಸಿಪಿ ರವೀಶ್ ನಾಯ್ಕ್ ನೇತೃತ್ವದಲ್ಲಿ ನಿಖಿಲಾ ಅಲಿಯಾಸ್ ಪ್ರವೀಣ್ ಎನ್ನುವ ವ್ಯಕ್ತಿಯನ್ನು ಕರೆದು ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಉರ್ವಾ ಇನ್ಸ್ ಪೆಕ್ಟರ್ ಭಾರತಿ ಅವರೂ ಇದ್ದರು. ಪೊಲೀಸರ ಪ್ರಶ್ನೆಗಳಿಗೆ ಆ ವ್ಯಕ್ತಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ನಾನು ಆ ಒಂದು ವಿಚಾರ ಮಾತ್ರ ಹೇಳಿದ್ದಲ್ಲ. ಬೇರೆಲ್ಲ ಹಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದೆವು. ಪೊಲೀಸ್ ಅಧಿಕಾರಿಯೂ ಕೇಳಿಕೊಂಡು ಬಂದಿದ್ದರು. ಇದು ನಮ್ಮ ದೈನೇಸಿ ಪರಿಸ್ಥಿತಿ ಎಂದು ಹೇಳಿದ್ದಷ್ಟೇ. ಮಾಧ್ಯಮದಲ್ಲಿ ಅದನ್ನೇ ಯಾಕೆ ಹೈಲೈಟ್ ಮಾಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಪೊಲೀಸ್ ಅಧಿಕಾರಿ ಯಾರು, ನಿರ್ದಿಷ್ಟವಾಗಿ ಹೇಳಿ ಎಂದಿದ್ದಕ್ಕೆ, ಒಬ್ಬರು ಸಿಂಗಲ್ ಸ್ಟಾರ್ ಇರುವ ವ್ಯಕ್ತಿ ನಮ್ಮ ಬಳಿ ಬಂದಿದ್ದರು. ಪಣಂಬೂರು- ಕುಳೂರು ಮಧ್ಯೆ ರಸ್ತೆಯಲ್ಲಿ ಅಧಿಕಾರಿ ಸೆಕ್ಸ್ ಗೆ ಕರೆದಿದ್ದರು. ಅವರ ಹೆಸರು ಗೊತ್ತಿಲ್ಲ ಎಂದು ತಿಳಿಸಿದ್ದಾಗಿ ಮಾಹಿತಿ ಲಭಿಸಿದೆ. ಈ ಮಾತಿನ ಪ್ರಕಾರ, ಯಾರೋ ಎಎಸ್ಐ ಆಗಿರಬೇಕೆಂದು ಶಂಕೆ ಪಡಲಾಗಿದೆ. ಆ ವ್ಯಕ್ತಿಯನ್ನು ಪೊಲೀಸರು ಕಮಿಷನರ್ ಕಚೇರಿಗೆ ಕರೆದು ವಿಚಾರಣೆ ನಡೆಸಿದ್ದು, ಈ ಬಗ್ಗೆ ದೂರು ಕೊಡುವಂತೆ ಸೂಚಿಸಿದ್ದಾರೆ. ಆದರೆ ದೂರು ಕೊಡಲು ನಿರಾಕರಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಮಂಗಳವಾರ ಉರ್ವಾ ಸ್ಟೋರ್ ಬಳಿಯ ಜಿಪಂ ಕಚೇರಿಯಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರಿಗೆ ಅರಿವು ಕಾರ್ಯಾಗಾರದಲ್ಲಿ ಮಂಗಳಮುಖಿಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಈ ವೇಳೆ, ಹಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ತಮಗೆ ಕೆಲಸ ಕೊಡಿ, ನಾವು ಅನಿವಾರ್ಯವಾಗಿ ಈ ವೃತ್ತಿಗೆ ಇಳಿದಿದ್ದೇವೆ. ಬದುಕುವುದಕ್ಕೆ ಬೇರೆ ದಾರಿ ಇಲ್ಲ ಎಂದು ಹೇಳಿದ್ದರು. ಪೊಲೀಸರೇ ಸೆಕ್ಸ್ ಗೆ ಆಹ್ವಾನಿಸಿದ್ದರು ಅನ್ನುವ ಅಂಶ ಮಾಧ್ಯಮದಲ್ಲಿ ಹೈಲೈಟ್ ಆಗಿತ್ತು.
Mangalore Police who sought sexual favours from transgender was a one star rank officer reveals investigation. City police have launched a probe into the allegations levelled by a transgender, that a police officer sought sexual favours from her. The complaint was raised by the transgender, during a legal awareness programme organised for transgenders, at the zilla panchayat on Tuesday.
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am