ಬ್ರೇಕಿಂಗ್ ನ್ಯೂಸ್
10-02-23 04:58 pm Mangalore Correspondent ಕರಾವಳಿ
ಮಂಗಳೂರು, ಫೆ.10: ಪೊಲೀಸರ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಹವಾಲು ಕೇಳಲು ಬಂದಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಎದುರಲ್ಲೇ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ತರಾಟೆಗೆತ್ತಿಕೊಂಡಿದ್ದಾರೆ.
ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ಹಿಡಿದು ಹೋದರೂ ಹಣ ಕೇಳುತ್ತಾರೆ. ದೂರು ಪಡೆಯೋದಕ್ಕೂ ಹಣ ಕೇಳುವ ಸ್ಥಿತಿಯಿದೆ. ಮಂಗಳೂರಿನಲ್ಲಿ ಒಂದು ಮಹಿಳಾ ಠಾಣೆ ಇರುವುದು. ಇಲ್ಲಿನ ದುರವಸ್ಥೆಯೇ ಹೀಗಾದರೆ ಗತಿಯೇನು. ಸಂತ್ರಸ್ತ ಯುವತಿಯೊಬ್ಬಳು ನನ್ನಲ್ಲಿ ಅಳಲು ಹೇಳಿಕೊಂಡಿದ್ದಾರೆ. ಆ ಕುರಿತ ದಾಖಲೆಯೂ ನನ್ನಲ್ಲಿದೆ ಎಂದು ಮಾಧ್ಯಮದ ಮುಂದೆಯೇ ಎಡಿಜಿಪಿ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ.

ಇದಲ್ಲದೆ, ಯಾವುದೇ ಪ್ರಕರಣದಲ್ಲಿ ನಾವು ದನಿ ಎತ್ತಿ ಪೊಲೀಸರನ್ನು ಪ್ರಶ್ನಿಸಿದರೆ ನಮ್ಮ ವಿರುದ್ಧವೇ ಕೇಸು ದಾಖಲಿಸುತ್ತಾರೆ. ನಾವು ಸಮಾಜದ ಪರವಾಗಿ ದನಿ ಎತ್ತಿದರೆ, ಇನ್ನೊಬ್ಬರ ಮೂಲಕ ಮಾನನಷ್ಟ ಕೇಸು ಹಾಕಿಸುತ್ತಾರೆ. ಕೆಎಂಎಫ್ ನಲ್ಲಿ ಉದ್ಯೋಗ ತೆಗೆಸಿಕೊಡುತ್ತೇನೆಂದು ಹಣ ಪಡೆದ ವ್ಯಕ್ತಿಯ ವಿರುದ್ಧ ಆರೋಪ ಇದ್ದರೂ, ಸಿಸಿಬಿಯವರು ಅದನ್ನು ಸರಿಯಾಗಿ ತನಿಖೆ ನಡೆಸಿಲ್ಲ. ಆ ಬಗ್ಗೆ ನಾವು ಸಂತ್ರಸ್ತರನ್ನು ಒಂದೆಡೆ ಸೇರಿಸಿದ್ದರೂ, ಮರುದಿನ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಪೊಲೀಸರ ವಿರುದ್ಧ ಹೋಗದಂತೆ ತಡೆಯುತ್ತಾರೆ. ಆರೋಪಿ ವಿರುದ್ಧ ಬಜ್ಪೆ, ಮೂಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಆ ಪ್ರಕರಣದಲ್ಲಿ ಸಂತ್ರಸ್ತರನ್ನೇ ಬೆದರಿಸಲಾಗಿತ್ತು. ಎಸಿಪಿ ಬಂಡಾರು ಎಂಬವರು ಈ ಹಿಂದೆ ನನ್ನನ್ನೂ ಬೆದರಿಸಿದ್ದರು ಎಂದು ಎಡಿಜಿಪಿ ಅಲೋಕ್ ಕುಮಾರ್ ಮುಂದೆ ಪ್ರಸನ್ನ ರವಿ ಅಳಲು ತೋಡಿಕೊಂಡಿದ್ದಾರೆ.


ಮಹಿಳಾ ಠಾಣೆಯಲ್ಲಿ ಹಣ ಕೇಳಿರುವ ವಿಚಾರದ ಬಗ್ಗೆ ನನಗೆ ಯಾವ ಪ್ರಕರಣ ಎಂದು ಮಾಹಿತಿ ಕೊಡಿ, ಕ್ರಮ ಕೈಗೊಳ್ಳುತ್ತೇನೆ ಎಂದು ಎಡಿಜಿಪಿ ಹೇಳಿದರು. ಯಾವುದೇ ಆರೋಪ ಮಾಡಿದರೆ ಸಾಲದು. ಅದಕ್ಕೆ ಸೂಕ್ತ ದಾಖಲೆ ಕೊಟ್ಟರೆ ಮಾತ್ರ ನಮ್ಮ ಸಿಬಂದಿ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿ ಸಿಬಂದಿಯ ಪರವಾಗಿಯೇ ಎಡಿಜಪಿ ಮಾತನಾಡಿದರು.
Mangalore city police corruption, Activist Ravi prasanna slams about Woman police station to ADGP Alok Kumar during the grivences meeting. She alleged that anytime you go to the station they only demand money. She partially complained about Police Inspector Manjula. She also raised about how police have become corrupted and take bribes from all illegal centres in the city.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm