ಬ್ರೇಕಿಂಗ್ ನ್ಯೂಸ್
29-01-23 06:06 pm Mangalore Correspondent ಕರಾವಳಿ
ಮಂಗಳೂರು, ಜ.29: 2022ರ ಒಂದೇ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 62 ಮಂದಿ ಮಕ್ಕಳು ಮನೆ ಬಿಟ್ಟು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ ಪೈಕಿ 33 ಮಂದಿ ಹೆಣ್ಮಕ್ಕಳಾಗಿದ್ದು ಹೆಚ್ಚಿನ ಪ್ರಕರಣಗಳಲ್ಲಿ ಪ್ರೇಮದ ಸಂಬಂಧವೇ ಮನೆ ಬಿಟ್ಟು ಹೋಗಲು ಪ್ರಮುಖ ಕಾರಣ ಎನ್ನುವುದನ್ನು ಚೈಲ್ಡ್ ವೆಲ್ಫೇರ್ ಕಮಿಟಿ ಪತ್ತೆ ಮಾಡಿದೆ.
ಪೊಲೀಸರು ಮತ್ತು ಚೈಲ್ಡ್ ವೆಲ್ಫೇರ್ ಕಮಿಟಿ ಪ್ರಕಾರ, 16ರಿಂದ 18 ವರ್ಷದ ಒಳಗಿನ ಹದಿಹರೆಯದ ಮಕ್ಕಳು ಮನೆ ಬಿಟ್ಟು ಹೋಗಲು ಪ್ರೇಮ ಸಂಬಂಧವೇ ಪ್ರಮುಖ ಕಾರಣವಂತೆ. ತಾವು ಪ್ರೀತಿಸುತ್ತಿರುವ ಹುಡುಗರ ಜೊತೆಗೆ ಓಡಿ ಹೋಗುವುದು, ಆನಂತರ ಪೊಲೀಸರು ಪತ್ತೆ ಮಾಡುವುದು ಇತ್ಯಾದಿ ನಡೆಯುತ್ತದೆ. ಇದಲ್ಲದೆ, ಶಾಲೆಯ ಒತ್ತಡ, ಹಾಸ್ಟೆಲ್ ಕಿರುಕುಳ, ಮನೆಯಲ್ಲಿ ಶಿಕ್ಷಣದ ಬಗ್ಗೆ ಒತ್ತಡ ಹೇರುವುದು ಇತ್ಯಾದಿ ಅಂಶಗಳೂ ಮಕ್ಕಳ ನಾಪತ್ತೆಗೆ ಕಾರಣವಾಗಿದೆ. 62 ಪ್ರಕರಣಗಳ ಪೈಕಿ 60 ಪ್ರಕರಣ ಪೊಲೀಸರಿಂದ ಟ್ರೇಸ್ ಆಗಿದ್ದು, ಇಬ್ಬರು ಮಕ್ಕಳು ಪತ್ತೆಯಾಗಿಲ್ಲ ಎಂದು ಸಿಡಬ್ಲ್ಯುಸಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ರೆನ್ನಿ ಡಿಸೋಜ ಹೇಳುತ್ತಾರೆ.
ಲವ್ ಹೊರತುಪಡಿಸಿ ಮನೆ ಬಿಟ್ಟು ಹೋಗಲು ಪ್ರಮುಖ ಕಾರಣ ಮನೆಯಲ್ಲಿನ ಒತ್ತಡ. ಮಕ್ಕಳ ಜೊತೆಗೆ ಪೋಷಕರಿಗೆ ಉತ್ತಮ ಸಂಬಂಧ ಇಲ್ಲದಿರುವುದು, ಶಿಕ್ಷಣದ ಬಗ್ಗೆ ಒತ್ತಡ ಹೇರುವುದು, ಮನೆಯಲ್ಲಿ ಮಕ್ಕಳ ಜೊತೆಗೆ ಹೆತ್ತವರು ಕಾಲ ಕಳೆಯದಿರುವುದು ಕೂಡ ಮಕ್ಕಳ ನಾಪತ್ತೆಗೆ ಕಾರಣ. ಮಕ್ಕಳು ಕಲಿಯುವುದರಲ್ಲಿ ಹಿಂದೆ ಬಿದ್ದಲ್ಲಿ ಬೈಯುವುದು, ಶಿಕ್ಷೆ ಕೊಡುವುದು, ಒತ್ತಡ ಹೇರುವುದಕ್ಕೆ ಮಕ್ಕಳು ದಿಢೀರ್ ಮನೆ ಬಿಟ್ಟು ಹೋಗಿರುವುದು ಕಂಡುಬಂದಿದೆ.
ಹಾಸ್ಟೆಲ್ ನಲ್ಲಿ ಓದುವ ವಿದ್ಯಾರ್ಥಿಗಳೂ ನಾಪತ್ತೆಯಾಗಿರುವ ಪ್ರಕರಣಗಳಿವೆ. ಹಾಸ್ಟೆಲ್ ನಲ್ಲಿ ಕಿರುಕುಳ, ಅಲ್ಲಿನ ವಾತಾವರಣದಿಂದ ಬೇಸತ್ತು ಮಕ್ಕಳು ಕಾಣೆಯಾಗುತ್ತಾರೆ. ಕೆಲವೊಮ್ಮೆ ಮಕ್ಕಳು ಅಪಹರಣಗೊಂಡು ಬಾಲ ಕಾರ್ಮಿಕರಾಗುವ ಅಥವಾ ಮಾನವ ಕಳ್ಳ ಸಾಗಾಣಿಕೆಗೆ ಬಳಕೆಯಾಗುವ ಅಪಾಯ ಇರುತ್ತದೆ. ಡ್ರಗ್ಸ್ ಇನ್ನಿತರ ಮಾದಕ ವ್ಯಸನಕ್ಕೊಳಗಾಗುವುದು, ಅಕ್ರಮ ಸಂಬಂಧದ ಕಾರಣ ಗರ್ಭವತಿಯಾಗಿ ಕಾಣೆಯಾಗುವುದು, ಮಾನಸಿಕ ಸಮಸ್ಯೆಗೆ ಒಳಗಾಗಿ ಕಾಣೆಯಾಗುವುದೂ ಇರುತ್ತದೆ ಎನ್ನುತ್ತಾರೆ, ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿ ಶೈಲಜಾ ಕರಿಗಿ.
According to the information disclosed by the Child Welfare Committee (CWC), 62 children, including 33 girls have disappeared in the year 2022 in Dakshina Kannada. Police have identified 60 of them and two have still not been traced. According to the Juvenile Justice Board and police department, there are several reasons for the children missing. Most of the cases pertaining to children below the age of 18, are of love affairs.
26-06-25 10:37 pm
HK News Desk
Heart Attack, Hassan District: ಹಾಸನ ಜಿಲ್ಲೆಯಲ್...
26-06-25 02:15 pm
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
Bangalore Old Couple Suicide, Crime: ಬೆಂಗಳೂರಲ...
25-06-25 10:32 pm
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
26-06-25 10:22 pm
HK News Desk
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
26-06-25 10:08 pm
Mangalore Correspondent
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
26-06-25 10:49 pm
Mangalore Correspondent
Varkady, Manjeshwar Crime, Son Kills Mother:...
26-06-25 05:32 pm
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm