ಬ್ರೇಕಿಂಗ್ ನ್ಯೂಸ್
21-01-23 03:39 pm Mangalore Correspondent ಕರಾವಳಿ
ಮಂಗಳೂರು, ಜ.21 : ನಳಿನ್ ಕುಮಾರ್ ತನ್ನ ಹೆಸರಿನ ಜೊತೆಗೆ ಕಟೀಲ್ ಹೆಸರಾಕಿ ಪವಿತ್ರ ಕ್ಷೇತ್ರದ ಹೆಸರು ಕೆಡಿಸುತ್ತಿದ್ದಾರೆ. ಲವ್ ಜಿಹಾದ್, ಮುಸ್ಲಿಂ ವಿರೋಧಿ ಹೇಳಿಕೆ ಕೊಟ್ಟು ಕಟೀಲ್ ಕ್ಷೇತ್ರದ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಳಿನ್ ಕುಮಾರ್ ಕಟೀಲಿನ ವ್ಯಕ್ತಿಯೂ ಅಲ್ಲ, ತನ್ನ ಹೆಸರಿನೊಂದಿಗೆ ಕಟೀಲು ಇಟ್ಟುಕೊಂಡು ಅಲ್ಲಿನ ಹೆಸರು ಹಾಳು ಮಾಡೋದ್ಯಾಕೆ. ಪವಿತ್ರ ಕ್ಷೇತ್ರದ ಹೆಸರು ಯಾಕೆ ಹಾಳು ಮಾಡಬೇಕು. ಕೇವಲ ತನ್ನ ಹೆಸರಷ್ಟೇ ಇಟ್ಟುಕೊಳ್ಳಲಿ ಎಂದು ಹೇಳಿದ್ದಾರೆ.
ಇವರ ಬಿಜೆಪಿ ಅಂಗಡಿಯನ್ನೇ ಮುಚ್ಚಬೇಕು, ಇವರಿಗೆ ಮುಸ್ಲಿಂ ದ್ವೇಷವೇ ಅಸ್ತಿತ್ವ. ಬೇರೆ ಯಾವುದೇ ಅಸ್ತ್ರ ಇಲ್ಲ. ಆದರೆ ಪ್ರಧಾನಿ ಮೋದಿ ಮುಸ್ಲಿಂ ದೂಷಿಸಬೇಡಿ ಎಂದು ಹೇಳುತ್ತಾರೆ. ಮುಸ್ಲಿಂ ದ್ವೇಷ ಬಿಟ್ಟರೆ ಇವರಿಗೆ ಅಸ್ತಿತ್ವ ಇದೆಯೇ ಎಂದು ಕೇಳಿದರು.
ಜಗತ್ತು ಒಪ್ಪಿಕೊಂಡ ಬಿಬಿಸಿ ವಾಹಿನಿಯ ವರದಿ ಬಗ್ಗೆ ಮೋದಿ ಒಪ್ಪುವುದಿಲ್ಲ. ಗುಜರಾತ್ ನರಮೇಧ ಬಗ್ಗೆ ಬಿಬಿಸಿ ನೀಡಿದ್ದ ವರದಿಯನ್ನು ಮೋದಿ ಅಲ್ಲಗಳೆಯುತ್ತಾರೆ. ಬಿಬಿಸಿ ಸುದ್ದಿ ಇಡೀ ಜಗತ್ತಿನಲ್ಲಿ ವಿಶ್ವಾಸಾರ್ಹತೆ ಇದೆ. ಇವರಿಗೆ ಮಾತ್ರ ವಿಶ್ವಾಸ ಇಲ್ಲದಾಗಿದೆ ಎಂದರು.
ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದನ್ನು ಖಂಡಿಸುತ್ತೇನೆ. ಪ್ರತಿಭಟನೆ ನಡೆಸುತ್ತಿದ್ದ ಹೆಣ್ಮಕ್ಕಳನ್ನು ವಶಕ್ಕೆ ಪಡೆದು ಮಧ್ಯರಾತ್ರಿ ರಸ್ತೆ ಇಲ್ಲದ ಜಾಗದಲ್ಲಿ ಕೂಡಿ ಹಾಕಿದ್ದಾರೆ. ಈ ರೀತಿ ಮಹಿಳೆಯರ ಮೇಲೆ ಶಕ್ತಿ ಪ್ರಯೋಗಿಸಿದ್ದು ಸರಿಯಲ್ಲ. ಜಿಲ್ಲಾ ಕಾಂಗ್ರೆಸ್ ಇದನ್ನು ಖಂಡಿಸುತ್ತದೆ ಎಂದು ರಮಾನಾಥ ರೈ ಹೇಳಿದರು.
Naleen has spoiled the name of Kateel in state, Muslims are their target, Slams congress leader Ramanath Rai.
26-06-25 02:15 pm
HK News Desk
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
Bangalore Old Couple Suicide, Crime: ಬೆಂಗಳೂರಲ...
25-06-25 10:32 pm
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
Assault Case, Anant Kumar Hegde, Accident: ಹಲ...
25-06-25 01:09 pm
26-06-25 07:40 pm
HK News Desk
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
26-06-25 10:08 pm
Mangalore Correspondent
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
26-06-25 05:32 pm
Mangalore Correspondent
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm
Social Media, Woman Murder, Affair, Mandya: ಪ...
25-06-25 04:06 pm