ಬ್ರೇಕಿಂಗ್ ನ್ಯೂಸ್
18-01-23 11:02 pm Mangalore Correspondent ಕರಾವಳಿ
ಮಂಗಳೂರು, ಜ.18: ಮೀಸಲಾತಿ ನೀಡುವುದು ದೇಶಕ್ಕೆ, ಅಭಿವೃದ್ಧಿಗೆ ಮಾರಕ ಎಂದು ತಿಳಿದಿದ್ದರೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಧಿಕಾರ ದಾಹದಿಂದ ಅವುಗಳ ತಾಳಕ್ಕೆ ಕುಣಿಯುತ್ತಿವೆ. ಈ ರೀತಿ ಮೀಸಲಾತಿ ನೀಡುತ್ತಾ ಹೋದರೆ ದೇಶದಲ್ಲಿ ಮುಂದೆ ದಂಗೆಯೇಳುವ ಸ್ಥಿತಿ ಬಂದೀತು. ಮೀಸಲಾತಿಗೆ ಹೋರಾಟ ನಡೆಸುವುದನ್ನು ನಾವು ಖಂಡಿಸುತ್ತೇವೆ. ಇದರ ಬಗ್ಗೆ ಜನಾಂದೋಲನ ರೂಪಿಸುತ್ತೇವೆ ಎಂದು ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಮೂಲ ಸಂವಿಧಾನದಲ್ಲಿ ಯಾವುದೇ ಮೀಸಲಾತಿ ನೀಡುವುದನ್ನು ವಿರೋಧಿಸಲಾಗಿದೆ. ಅಲ್ಲದೆ, ಧರ್ಮಾಧರಿತ ಮೀಸಲಾತಿ ನೀಡಲೇಬಾರದು ಎಂದಿದೆ. ಆದರೆ ನಮ್ಮಲ್ಲಿ ಅಲ್ಪಸಂಖ್ಯಾತ ಹೆಸರಲ್ಲಿ ಧರ್ಮ ಆಧರಿತ ಮೀಸಲಾತಿ ಕಲ್ಪಿಸಲಾಗಿದೆ. ಧರ್ಮಕ್ಕೆ, ಜಾತಿಗೊಂದು ಮೀಸಲಾತಿ ನೀಡುತ್ತಾ ಹೋದರೆ ಸಮರ್ಥ ಯುವಜನತೆ ಅವಕಾಶ ವಂಚಿತರಾಗುತ್ತಾರೆ. ಅಧಿಕಾರ ಲಾಭ ಪಡೆಯಲು ಮೀಸಲಾತಿ ಕೊಡುವುದು, ಒಂದು ವರ್ಗವನ್ನು ಓಲೈಸುವುದು ಎಷ್ಟು ಸರಿ. ಮೀಸಲಾತಿ ಕೊಡುವದರ ಅರ್ಥ ಏನೆಂಬುದನ್ನು ರಾಜಕಾರಣಿಗಳು ಮೊದಲು ತಿಳಿದುಕೊಳ್ಳಬೇಕಿದೆ.
ಮೀಸಲಾತಿ ಹೆಸರಲ್ಲಿ ಒಂದು ಕುಟುಂಬದ ಎಲ್ಲರಿಗೂ ಸರಕಾರಿ ಹುದ್ದೆಗಳಲ್ಲಿ ಅವಕಾಶ ಕೊಡುತ್ತಾ ಹೋದರೆ, ಇತರೇ ಸಮುದಾಯಗಳು ಏನು ಮಾಡಬೇಕು. ಒಮ್ಮೆ ಮೀಸಲಾತಿ ಪಡೆದವರು ಆರ್ಥಿಕ ಸಬಲರಾದರೂ ಮತ್ತೆ ಮತ್ತೆ ತಮ್ಮ ಮಕ್ಕಳಿಗೆಲ್ಲ ಮೀಸಲಾತಿಯಿಂದ ಲಾಭ ಪಡೆಯುತ್ತಾ ಹೋದರೆ ಮೀಸಲಾತಿಗೇನು ಅರ್ಥವಿದೆ. ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳಾದವರು ಕೂಡ ಒಂದು ಜಾತಿಯ ಪರವಾಗಿ ಮೀಸಲಾತಿಗೆ ಆಗ್ರಹಿಸುತ್ತಿದ್ದಾರೆ. ಈಡಿಗ, ಬಿಲ್ಲವರಿಗಾಗಿ ಒಬ್ಬ ಸ್ವಾಮೀಜಿ, ಪಂಚಮಸಾಲಿ ಪರ ಇನ್ನೊಬ್ಬ ಸ್ವಾಮೀಜಿ ಧ್ವನಿ ಎತ್ತುವುದಾದರೆ ಇವರು ಕಾವಿ ಹಾಕಿ ಹಿಂದು ಸಮಾಜವನ್ನು ಪ್ರತಿನಿಧಿಸುವುದು ಯಾಕೆ ಎಂದು ಧರ್ಮೇಂದ್ರ ಪ್ರಶ್ನೆ ಮಾಡಿದರು.
ಇದಕ್ಕಾಗಿ ಒಂದೋ ಆರ್ಥಿಕ ಮೀಸಲಾತಿಯನ್ನು ಮಾತ್ರ ನೀಡಬೇಕು. ಇಲ್ಲವೇ ಗ್ರಾಮಾಂತರ ಪ್ರದೇಶದವರಿಗೆ ಮೀಸಲಾತಿ ನೀಡಲಿ. ಜಾತಿಗೊಂದು ಮೀಸಲಾತಿ ನೀಡುವುದನ್ನು ವಿರೋಧಿಸಿ ನಾವು ಸಮಾನ ಮನಸ್ಕರು ಪಕ್ಷ ಭೇದ ಮರೆತು ವಿರೋಧಿಸುತ್ತೇವೆ. ಇದಕ್ಕೊಂದು ಎನ್ ಜಿಓ ಸ್ಥಾಪನೆ ಮಾಡುವ ಉದ್ದೇಶ ಇದೆ. ಜಾತ್ಯತೀತ ರಾಷ್ಟ್ರ ಎಂದ ಮೇಲೆ ಜಾತಿಗೇನು ಕೆಲಸವಿದೆ. ಜಾತಿ ಕೇಳಿ ಉದ್ಯೋಗ ಕೊಡುವುದೇ ಅಸಭ್ಯ. ಶಾಲೆ, ಕಾಲೇಜಿನಲ್ಲಿ ಜಾತಿ ಕಾಲಂ ತೆಗೆದು ಹಾಕಬೇಕು ಎಂದು ಧರ್ಮೇಂದ್ರ ಹೇಳಿದರು.
Reservation is a threat to nation slams Hindu Maha saba in Mangalore
26-06-25 02:15 pm
HK News Desk
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
Bangalore Old Couple Suicide, Crime: ಬೆಂಗಳೂರಲ...
25-06-25 10:32 pm
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
Assault Case, Anant Kumar Hegde, Accident: ಹಲ...
25-06-25 01:09 pm
25-06-25 10:05 pm
HK News Desk
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
26-06-25 12:02 pm
Mangalore Correspondent
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
Sixth Sense Beauty Salon, Raid, Mangalore, Po...
24-06-25 09:49 pm
26-06-25 05:32 pm
Mangalore Correspondent
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm
Social Media, Woman Murder, Affair, Mandya: ಪ...
25-06-25 04:06 pm